Saturday, April 25, 2009

ಕೆಂಡಸಂಪಿಗೆಗೆ ಪ್ರೀತಿಯ ಥ್ಯಾಂಕ್ಸ್ಉಉಉ...

ನನ್ನ ಪ್ರೀತಿಯ ಬ್ಲಾಗ್ ಧರಿತ್ರಿ ಹುಟ್ಟಿದ್ದು ಕಳೆದ ಮಾರ್ಚ್ ನಲ್ಲಿ. ಕೆಂಡಸಂಪಿಗೆಯ ದಿನದ ಬ್ಲಾಗ್ ನಲ್ಲಿ ಧರಿತ್ರಿ ಇಂದು ಹೂನಗೆ ಚೆಲ್ಲುಬಿಟ್ಟಿದ್ದಾಳೆ. ಪ್ರೀತಿಯಿಂದ ಬೆನ್ನುತಟ್ಟಿದ್ದಕ್ಕೆ ಕೆಂಡಸಂಪಿಗೆಗೆ ಕೃತಜ್ಷತೆಗಳು.
ಧರಿತ್ರಿಯ ಹುಟ್ಟುಹಬ್ಬದ ಸಂಭ್ರಮ
ಪ್ರೀತಿಯ ತಮ್ಮನ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ ಧರಿತ್ರಿ. ಒಡಹುಟ್ಟಿದ ತಮ್ಮನಲ್ಲದಿದ್ದರೂ, ಒಡನಾಡಿ ಒಡಹುಟ್ಟಿದವನಾದ, ತಮ್ಮೂರು ಉಜಿರೆಯ ಕಾರಿಡಾರ್ ನಿಂದ ಈಗಿರುವ ಬೆಂಗಳೂರಿನ ಮನೆಯಲ್ಲೂ ತಮ್ಮೊಟ್ಟಿಗೆ ಕಲರವಗುಟ್ಟುವ ತಮ್ಮನ ಒಡನಾಟವನ್ನ ಧರಿತ್ರಿ ನೆನೆಯುತ್ತಿದ್ದಾರೆ. ಹೀಗಿರುವ ಪ್ರೀತಿಯ ತಮ್ಮನ ಹುಟ್ಟುಹಬ್ಬಕ್ಕೊಂದು ಕವಿತೆ ಇಟ್ಟು ಶುಭ ಕೋರುತ್ತಿದ್ದಾರೆ.

"ಧರಿತ್ರಿ ನನ್ನ ಅದಮ್ಯ ಕನಸು. ಸದಾ ಏನಾದ್ರೂ ಬರೀಬೇಕು ಅನ್ನೋದು ನನ್ ಮನಸ್ಸಿನ ತುಡಿತ. ಬರವಣಿಗೆ ಅನ್ನೋದು ನಿಂತ ನೀರಾಗಬಾರದು..ಅದಕ್ಕೆ ಈ ಧರಿತ್ರಿ ಆಸರೆಯಾಗುತ್ತಾಳೆ ಅನ್ನೋ ನಂಬಿಕೆ." ಅನ್ನೋದು ಅವರ ಆಶಯ.

ಭಾವದಲೆಗಳ ಮೇಲೇರಿ ಸವಾರಿ ಮಾಡುತ್ತಿರುವಂತೆ ಬರೆವ ಧರಿತ್ರಿ ಬರಹಗಳು ಓದಲು ಬೆಚ್ಚನೆಯ ಅನುಭವ ಕೊಡುತ್ತವೆ. ಹುಟ್ಟಿದೂರು ಬಿಟ್ಟುಬಂದ ತಳಮಳ, ಒಂಟಿತನದ ಸಂಕಟ, ಈ ನಡುವೆ ತುಂತುರು ಮಳೆಯಲ್ಲಿ ನೆನಪುಗಳ ಮೆರವಣಿಗೆ....ಎಲ್ಲವೂ ಓದಲು ಖುಷಿ ಕೊಡುತ್ತವೆ.
(http://www.kendasampige.com/article.php?id=1774)

11 comments:

ಬಿಸಿಲ ಹನಿ said...

congrats!

PARAANJAPE K.N. said...

CONGRATS THANGI

ಮನಸು said...

ಅಭಿನಂದನೆಗಳು.. ನಿಮ್ಮ ಲೇಖನಗಳೆಲ್ಲವೂ ಚೆನ್ನಾಗಿರುತ್ತವೆ.. ಹೀಗೆ ಸಾಗಲಿ ನಿಮ್ಮ ಪಯಣ
ಶುಭದಿನ
ಮನಸು

shivu.k said...

ಧರಿತ್ರಿ...

ಅಭಿನಂದನೆಗಳು...

L'Étranger said...

ಕೆಂಡಸಂಪಿಗೆಯಲಿ್ಲ ನಿಮ್ಮ ಬಾ್ಲಗ್ ಬಗೆ್ಗ ನೋಡಿ ಇಲಿ್ಲಗೆ ಬಂದೆ. ಅಭಿನಂದನೆಗಳು! ಚೆನಾ್ನಗಿ ಬರೆಯುತ್ತೀರಿ! :-)

ಜಲನಯನ said...

ನಿಮ್ಮ ಮನೆಗೆ ಬಂದಿದ್ದೇನೆ..
ಥ್ಯಾಂಕ್ಸ್ ಉಉಉಉ.... ನನಗೆ ಅರ್ಥವಾಗಲಿಲ್ಲ..??!! ಅಥವಾ ನನ್ನ ಯೋಚನಾ ಕುಬ್ಜತೆಗೆ ನಿಮ್ಮ ಪ್ರಬುದ್ಧ bouncerಏ??? ದಯಮಾಡಿ ಈ ಪಾಮರನ ಬುದ್ಧಿಗೆ ನಿಲುಕುವಂತೆ ಪೇಳುವಂತಹವರಾಗಿ ಧ್ರರಿತ್ರೀಈಈಈಈಈಈಈಈ....
ನಿಮ್ಮ ಮನೆಗೆ ಬಂದಿದ್ದೇನೆ..
ಥ್ಯಾಂಕ್ಸ್ ಉಉಉಉ.... ನನಗೆ ಅರ್ಥವಾಗಲಿಲ್ಲ..??!! ಅಥವಾ ನನ್ನ ಯೋಚನಾ ಕುಬ್ಜತೆಗೆ ನಿಮ್ಮ ಪ್ರಬುದ್ಧ bouncerಏ??? ದಯಮಾಡಿ ಈ ಪಾಮರನ ಬುದ್ಧಿಗೆ ನಿಲುಕುವಂತೆ ಪೇಳುವಂತಹವರಾಗಿ ಧ್ರರಿತ್ರೀಈಈಈಈಈಈಈಈ....

ನಾನ್ ಮೊದಲೇ ಪೇಳ್ದಂತೆ..ಈ ಪ್ರಸ್ತಾವನೆ ಬಹು ಪ್ರಬುದ್ಧ ಅಹುದಹುದು...ಕೇಳಾ ಬ್ಲಾಗುನಾಥ..!! ಹಹಹಹ

sunaath said...

ಶುಭಾಶಯಗಳು, ಧರಿತ್ರಿ.

Umesh Balikai said...

ಅಭಿನಂದನೆಗಳು ಧರಿತ್ರಿ,

ಕೆಂಡ ಸಂಪಿಗೆಯಲ್ಲಿ ಕನ್ನಡದ ಬ್ಲಾಗುಗಳ ಪುಟ್ಟ ಪರಿಚಯತುಂಬಾ ಚೆನ್ನಾಗಿ ನೀಡುತ್ತಾರೆ. ನಿಮ್ಮ ಬ್ಲಾಗಿನ ಬಗ್ಗೆ ಓದುತ್ತಾ ಕೆಳಗೆ ಹೋದರೆ ಅಲ್ಲಿ ನನ್ನ ಬ್ಲಾಗಿನ ಪರಿಚಯವೂ ಇರಬೇಕೆ! ನನಗೆ ತುಂಬಾ ಆನಂದವೂ ಆಶ್ಚರ್ಯವೂ ಆಯಿತು. ಕೆಂಡ ಸಂಪಿಗೆಗೆ ಧನ್ಯವಾದಗಳು.

- ಉಮೇಶ್

ಶಿವಪ್ರಕಾಶ್ said...

congratulations...

ಮಲ್ಲಿಕಾರ್ಜುನ.ಡಿ.ಜಿ. said...

ಅಭಿನಂದನೆಗಳು.

ಧರಿತ್ರಿ said...

ಎಲ್ಲರಿಗೂ ನನ್ನ ಪ್ರೀತಿಯ ನೆನೆಕೆಗಳು...ನಿಮ್ಮ ಹಾರೈಕೆ ನನ್ನೊಳಗಿನ ಪುಟ್ಟ ಬರಹ ಶಕ್ತಿ ಹೊರಬರಲು ಪ್ರೇರಣೆ. ವಂದನೆಗಳು.
-ಧರಿತ್ರಿ