tag:blogger.com,1999:blog-37596319577391867292024-03-13T23:33:27.228-07:00ಧರಿತ್ರಿಬೆಳಗು ಇಬ್ಬನಿಯ ನಗು ಚೆಂದಧರಿತ್ರಿhttp://www.blogger.com/profile/13431094762447988960noreply@blogger.comBlogger91125tag:blogger.com,1999:blog-3759631957739186729.post-28391969856675668062013-06-13T06:08:00.002-07:002013-06-13T06:08:27.874-07:00 ಜೀವನ ಮತ್ತು ತೂಕ<div dir="ltr" style="text-align: left;" trbidi="on">
<br />
ಇತ್ತೀಚೆಗೆ "ಅಪ್ ಇನ್ ದ ಏರ್'' ಚಿತ್ರ ನೋಡಿದೆ. ಜಾರ್ಜ್ ಕ್ಲೂನಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ ಬಿಡುಗಡೆಯಾಗಿದ್ದು 2009ರಲ್ಲಿ. ಮನುಷ್ಯ-ಸಂಬಂಧಗಳ ಕುರಿತು ನಮ್ಮೋಳಗೆ ಕಾಡುವ, ಪ್ರಶ್ನೆಗಳನ್ನು ಹುಟ್ಟುಹಾಕುವ ಚೆಂದದ ಚಿತ್ರವಿದು. ಬದುಕು-ಬವಣೆ, ಭಾವನೆ-ಬಾಂಧವ್ಯ, ಹಾಸ್ಯ-ಲಾಸ್ಯ ಎಲ್ಲವೂ ಇದರಲ್ಲಿದೆ. ಅದರಲ್ಲಿ ರ್ಯಾನ್ ಬಿಂಗಂ ಪಾತ್ರದಲ್ಲಿ ಕಾಣಿಸಿಕೊಂಡ ಕ್ಲೂನಿ ಒಂದು ಕಡೆ ಭಾಷಣ ಮಾಡುತ್ತಾನೆ. ಮನಸ್ಸಿಗೆ ಬಹಳ ಹಿಡಿಸಿತು. ಅನುವಾದಿಸಿ ಇಲ್ಲಿಟ್ಟಿದ್ದೀನಿ.<br />
<br />
********<br />
<b><i>ನಮ್ಮ ಜೀವನ ಎಷ್ಟು ತೂಗುತ್ತೆ ಅಂದುಕೊಂಡಿದ್ದೀರಿ? ಒಂದು ಸಣ್ಣ ಕಲ್ಪನೆ. ನೀವೊಂದು ಬ್ಯಾಕ್ ಪ್ಯಾಕ್ (ಬೆನ್ನಿಗೆ ಹಾಕಿಕೊಳ್ಳುವ ಚೀಲ) ತಗಲುಹಾಕಿಕೊಂಡಿದ್ದೀರಿ ಎಂದಿಟ್ಟುಕೊಳ್ಳೋಣ. ನಾನು ಏನು ಹೇಳೋದಂದ್ರೆ ನಮ್ಮ ಜೀವನದಲ್ಲಿ ಏನೇನು ಇದೆಯೋ ಅದನ್ನೆಲ್ಲಾ ಆ ಬ್ಯಾಕ್ ಪ್ಯಾಕ್ ಗೆ ತುಂಬಬೇಕು.</i></b><br />
<br />
<b><i>ಮೊದಲು ಸಣ್ಣ-ಸಣ್ಣ ವಸ್ತುಗಳಿಂದ ಶುರುಮಾಡೋಣ. ಮೊದಲು ಕಪಾಟುಗಳು, ಪೆಟ್ಟಿಗೆಗಳು..ಮುಂತಾದವುಗಳನ್ನು ತುಂಬಿ. ಬಳಿಕ ಬಟ್ಟೆಗಳು, ಲ್ಯಾಪ್ ಟಾಪ್ ಮತ್ತು ಅದಕ್ಕೆ ಸಂಬಂಧಿಸಿದ ಏನೇನು ವಸ್ತುಗಳಿವೆಯೋ ಅವುಗಳು, ನಿಮ್ಮನೆಯಲ್ಲಿರುವ ದೀಪಗಳು, ನಿಮ್ಮ ಟೀವಿಗಳು...ತುಂಬುತ್ತಾ ಹೋಗಿ. ನಿಮ್ಮ ಬ್ಯಾಕ್ ಪ್ಯಾಕ್ ಸ್ವಲ್ಲ ಭಾರವಾದಂಗೆ ಅನಿಸುತ್ತೆ ಅಲ್ವಾ? ಅಲ್ಲಿಗೇ ನಿಲ್ಲಿಸಬೇಡಿ...ಇನ್ನೂ ನಿಮಗೆ ಬಹುಮುಖ್ಯವಾಗಿರುವ ಅದೆಷ್ಟೋ ವಸ್ತುಗಳಿವೆ; ನೀವು ಮಲಗೋ ಮಂಚ, ಓಡಾಡೋ ಕಾರು, ನಿಮ್ಮ ಮನೆ...ಬ್ಯಾಕ್ ಪ್ಯಾಕ್ ಇನ್ನೂ ಭಾರವಾಗುತ್ತೆ. </i></b><br />
<br />
<b><i>ಇನ್ನು ಜನರನ್ನು ತುಂಬಿಸಿಕೊಳ್ಳೋಣ...ಮೊದಲು ನಮ್ಮ ಸ್ನೇಹಿತರ ಸ್ನೇಹಿತರು, ಆಫೀಸ್ ನಲ್ಲಿ ಸಿಗೋ ನಿಮ್ಮ ಕಲೀಗ್ ಗಳು..ಬಳಿಕ ನಿಮ್ಮ ಪ್ರಾಣಸ್ನೇಹಿತರು, ನಿಮ್ಮ ಸಹೋದರ-ಸಹೋದರಿಯರು, ಮಕ್ಕಳು-ಮರಿಗಳು, ಅಪ್ಪ-ಅಮ್ಮ, ನಿಮ್ಮ ಗಂಡ, ನಿಮ್ಮ ಹೆಂಡ್ತಿ, ನಿಮ್ಮ ಗರ್ಲ್ ಫ್ರೆಂಡ್ ಅಥವಾ ಬಾಯ್ ಫ್ರೆಂಡ್ ...</i></b><br />
<b><i>ಆ ಬ್ಯಾಕ್ ಪ್ಯಾಕ್ ನೊಳಗೆ ತುಂಬಿಸಿ. ಇವೆಲ್ಲವನ್ನೂ ತುಂಬಿಸಿದ ಬಳಿಕ ನಿಮ್ಮ ಬ್ಯಾಕ್ ಪಾಕ್ ನ ಭಾರವನ್ನು ಫೀಲ್ ಮಾಡಿ. ಎಷ್ಟೊಂದು ಭಾರವಿದೆ ಅನಿಸಲ್ವೇ?</i></b><br />
<b><i>ನಿಮಗನಿಸುತ್ತೆ: ಬ್ಯಾಕ್ ಪ್ಯಾಕ್ ನಲ್ಲಿರುವ ಆ ಸಂಬಂಧಗಳು ಅತ್ಯಂತ ಭಾರವಾದ ವಸ್ತುಗಳೆಂದು!</i></b><br />
<b><i>ಇವನ್ನೆಲ್ಲ ಹೊತ್ತುಕೊಂಡು ನಾವು ನಡಿಲೇಬೇಕು........</i></b><br />
<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com1tag:blogger.com,1999:blog-3759631957739186729.post-23262254362030215742013-06-13T06:07:00.001-07:002013-06-13T06:07:17.970-07:00ನನ್ನೆದೆಯ ಮರುವಸಂತ<div dir="ltr" style="text-align: left;" trbidi="on">
<br />
ಮಗ ಹುಟ್ಟಿದಾಗ ನನ್ನಲ್ಲಿ ಅದೆಂಥ ಸಂಭ್ರಮ? ಊರಮಂದಿಗೆಲ್ಲ ಲಡ್ಡು ಹಂಚಿದ್ದೇ ಹಂಚಿದ್ದು. ಮೇಲಿಟ್ಟರೆ ಕಾಗೆ ಹೊತ್ತೊಯ್ಯುತ್ತೆ, ಕೆಳಗಿಟ್ಟರೆ ಇರುವೆ ಕಚ್ಚುತ್ತೆ ಎಂದು ಅವನ ನನ್ನೆದೆಯಿಂದ ಕೆಳಗೆ ಇಳಿಸಿದ್ದೇ ಕಡಿಮೆ. ಕಂಕುಳಲ್ಲೇ ಹಾಲು ಕುಡಿದು ಅಲ್ಲೇ ನಿದ್ದೆಗೆ ಜಾರುತ್ತಿದ್ದ ನನ್ನ ರಾಜಕುಮಾರ.<br />
ಅದೆಂಥ ಕತೆಗಳನ್ನು ಅವನಿಗೆ ಹೇಳಿದ್ದೆ. ಜೀಜಾಬಾಯಿ ಕಥೆ ಹೇಳಿ "ಮಗನೇ ಶಿವಾಜಿ ನೀನಾಗು'' ಎನ್ನುತ್ತಿದ್ದೆ. ರಾಮಾಯಣ, ಮಹಾಭಾರತದಿಂದ ಹಿಡಿದು ಗಾಂಧೀ, ಅಂಬೇಡ್ಕರ್ನಂಥ ಮಹಾನುಭಾವರ ಕತೆಗಳನ್ನು ಹೇಳಿಸಿಕೊಂಡೇ ನಿದ್ದೆ ಮಾಡುತ್ತಿದ್ದ ನನ್ನ ಮಗ. ಕಥೆ ಹೇಳದಿದ್ದರೆ "ಅಮ್ಮ, ನೀನು ಕತೆ ಹೇಳು'' ಎಂದು ನನ್ನ ಸೆರಗ ಹಿಡಿದು ಜಗ್ಗುತ್ತಿದ್ದ. ನನಗೆ ಕಥೆ ಹೇಳೊದ್ರಲ್ಲೇ ಖುಷಿ. ನನ್ನ ಅಪ್ಪ-ಅಮ್ಮ ಹೇಳಿಕೊಟ್ಟಿದ್ದ ಕಥೆಗಳು, ಅಕ್ಕ-ಪಕ್ಕದವರ ಬಳಿ ಕೇಳಿ ತಿಳಿಕೊಂಡ ಕಥೆಗಳು ಎಲ್ಲವೂ ನನ್ನ ಮಗನಿಗೆ. ಕೆಲವೊಮ್ಮೆ ರಾತ್ರಿಯಿಡೀ ಮಲಗದೆ ಕಥೆ ಹೇಳಿಸಿಕೊಂಡಿದ್ದೂ ಉಂಟು. ಅದೆಂಥ ಕಥೆಯ ಹುಚ್ಚು? ಅವಂಗೆ.<br />
ಕಥೆ ಕೇಳುತ್ತಲೇ ಬೆಳೆದ ಮಗನಿಗೆ ಐದು ದಾಟಿತು. ಶಾಲೆಗೆ ಸೇರಿಸಬೇಕು. "ಹೆಂಗಪ್ಪಾ, ಇಡೀ ದಿನ ನನ್ನ ಮುದ್ದು ಮಗನ ಬಿಟ್ಟಿರಲಿ?'' ಎಂದು ಕಣ್ಣುಗಳು ಮಂಜಾಗಿದ್ದವು. ಅವನಿಗೆ ಹೊಸ ಚಡ್ಡಿ, ಶರ್ಟ್,ಬ್ಯಾಗ್, ಶೂ ಹಾಕಿಸಿ ಸ್ಕೂಲ್ ಗೆ ರೆಡಿ ಮಾಡುವಾಗ ಅದೆಂಥ ಖುಷಿಯ ಹೊಳಪು ನನ್ನೊಳಗೆ?<br />
ಈ ಚಡ್ಡಿ ಹಾಕುವ ಮಗ ಯಾವಾಗ ಪ್ಯಾಂಟ್ ಹಾಕೋನು ಆಗ್ತಾನೆ? ಅನ್ನೋ ಕನಸು ಬೇರೆ. ದಿನಾ ಮುಂಜಾವು ಐದು ಗಂಟೆಗೆ ಎದ್ದು ಅವನಿಗೆ ಬಾಕ್ಸ್ ರೆಡಿ ಮಾಡಿ ಸ್ಕೂಲ್ ಗೆ ಕಳುಹಿಸುವಾಗ ಅದೆಂಥ ಸಂಭ್ರಮ? ಈ ದಿನ, ತಿಂಗಳು, ವರ್ಷಗಳೆಲ್ಲಾ ಉರುಳಿ ಒಮ್ಮೆಲೇ ನನ್ನ ಮಗ 'ದೊಡ್ಡವನಾಗಿಬಿಟ್ಟಿದ್ದರೆ' ಎಷ್ಟು ಚೆನ್ನಾಗಿರುತ್ತಿತ್ತು? ಎಂಬ ಹುಚ್ಚುಚ್ಚು ಕನಸು.<br />
ಅವನು ಏನು ಕೇಳಿದ್ರೂ ಕೊಡಿಸೋದ್ರಲ್ಲಿ ನನಗೊಂದು ಹೊಸ ಖುಷಿ. ಪ್ರತಿ ಮಳೆಗಾಲಕ್ಕೂ ಹೊಸ ಕೊಡೆ ಕೇಳುತ್ತಿದ್ದ. ಕೆಲವೊಮ್ಮೆ ಹೆಣ್ಣುಮಕ್ಕಳಂತೆ ನನಗೆ ಬಣ್ಣದ ಕೊಡೆ ಬೇಕೆಂದು ರಚ್ಚೆ ಹಿಡಿಯುತ್ತಿದ್ದಾಗ ನಗು ಬರುತ್ತಿತ್ತು. ಬೇಸಿಗೆ ರಜೆ ಮುಗಿದ ತಕ್ಷಣ ಹೊಸ ಬಟ್ಟೆ, ಬ್ಯಾಗು, ಪುಸ್ತಕಗಳ ಸಂಭ್ರಮ. ಆ ಪುಸ್ತಕಗಳಿಗೆ ಬೈಂಡ್ ಹಾಕೋದು ಅಬ್ಬಬ್ಬಾ...ಅದೆಂಥ ಕೆಲಸ? ಒಂದೇ ವಾರದಲ್ಲಿ ಅವೆಲ್ಲಾ ಹರಿದು ಚಿತ್ರಾನ್ನವಾಗುತ್ತಿದ್ದವು. ಮತ್ತದೇ ಬೈಂಡ್ ಹಾಕುವ ಕೆಲಸ ನನಗೆ. ಪ್ರೈಮರಿ ಹೇಗೋ ಮುಗಿಯಿತು. ನೋಡು ನೋಡುತ್ತಿದ್ದಂತೆ ಹೈಸ್ಕೂಲು ಕೂಡ ಮುಗಿದೇ ಹೋಯ್ತು. ವರ್ಷಗಳೆಲ್ಲಾ ಹಕ್ಕಿ ತರ ರೆಕ್ಕೆಬಡಿದು ಏಕ್ ದಂ ಹಾರಿಬಿಟ್ಟಾವೆ ಎಂದನಿಸಿತು.<br />
ಕಾಲೇಜು ಸೇರಿದ. ಓದಲು, ಬರೆಯಲು ಸಪರೇಟು ರೂಮ್ ಬೇಕು ಅಂದ. ಮೊಬೈಲ್, ಅದು-ಇದು ಏನೇನೋ ಕೇಳಿದ. ಎಲ್ಲನೂ ಕೊಡಿಸಿದ್ದಾಯಿತು. ಎಲ್ಲವೂ ನನ್ನ ಮಗ ರಾಜಕುಮಾರನಿಗಾಗಿ. ದಿನ, ತಿಂಗಳು, ವರ್ಷಗಳೆಲ್ಲಾ ಉರುಳಿ ನನ್ನ ಮಗ 'ದೊಡ್ಡವನಾಗೇಬಿಟ್ಟ'.<br />
<br />
******<br />
ಈಗ ಕನ್ನಡಿಯಲ್ಲಿ ಮತ್ತೆ ಮತ್ತೆ ನನ್ನ ನಾ ನೋಡಿಕೊಳ್ಳುತ್ತೇನೆ. ಕಪ್ಪು ಕೂದಲುಗಳ ನಡುವೆ ಅದೆಷ್ಟು ಚೆನ್ನಾಗಿತ್ತು ನನ್ನ ಬೈತಲೆ? ಆದರೆ, ಈಗ ಬಿಳಿ ಕೂದಲುಗಳ ರಾಶಿ. ಎಲ್ಲವೂ ಗೋಜಲು-ಗೋಜಲು. ಕಾಡಿಗೆ ಹಚ್ಚಿ ಹೊಳೆಯುತ್ತಿದ್ದ ಕಣ್ಣುಗಳು ಆಳಕ್ಕೆ ಹೋದಂಗೆ, ಕಣ್ಣ ಸುತ್ತ ನೆರಿಗೆಗಳು, ಕಪ್ಪು ಕಲೆಗಳು ಮೂಡಿದಂಗೆ ಅನಿಸುತ್ತೆ. ಯೌವನದಲ್ಲಿ ನನ್ನವನ ಮಾತು-ಮಾತಿಗೂ ನಾಚಿ ಕೆಂಪಾಗುತ್ತಿದ್ದ ಕೆನ್ನೆಯ ಬದಿಯಲ್ಲಿದ್ದ ಆ ಚೆಂದದ ಗುಳಿಗಳೂ ಮಾಯವಾಗಿವೆ. ಕಾಲೇಜು ಓದುವಾಗ ಹುಡುಗ್ರೆಲ್ಲಾ ಗುಳಿಚೆಲುವೆ ಎಂದು ರೇಗಿಸುತ್ತಿದ್ದರು. ಮುಖಾನ ಅಂದವಾಗಿಸಲು ಅದೇ ಹಳೆಯ ಬ್ರಾಂಡ್ ಪಾಂಡ್ಸ್ ಪೌಡರ್ ಹಚ್ತೀನಿ. ಬೈತಲೆ ಪಕ್ಕ ಕಾಣುವ ಬೆಳ್ಳಿಕೂದಲುಗಳನ್ನು ಮತ್ತೆ ಮತ್ತೆ ಕೀಳಕೆ ಪ್ರಯತ್ನ ಮಾಡ್ತೀನಿ. ಅದು ಬರಲೊಲ್ಲೆ ಎಂದು ರಚ್ಚೆ ಹಿಡಿಯುತ್ತೆ. ಉಸ್ಸಾಪ್ಪಾ...ಎಂಬ ನಿಟ್ಟುಸಿರು...ಎದೆಯೊಳಗಿಂದ ಹಾವು ಬುಸುಗುಟ್ಟಿದಂತೆ!.<br />
ಎದುರಿಗಿದ್ದ ಮಗ ನೋಡಿ ನಕ್ಕು ಹೇಳುತ್ತಾನೆ. "ಅಮ್ಮಾ...ನಿಜವಾಗ್ಲೂ ನಿನ್ನ ಓಟರ್ ಐಡಿಯಲ್ಲಿ ಇರುವ 'ಡೇಟ್ ಆಫ್ ಬರ್ತ್' ಕರೆಕ್ಟಾ?''<br />
ನನಗಿಂತ ಎತ್ತರಕ್ಕೆ ಬೆಳೆದ ಮಗನ ನೋಡಿ ಕತ್ತೆತ್ತಿ ಕಣ್ಣಲ್ಲೇ ಕೇಳುತ್ತೇನೆ; "ಏಕೆ?''<br />
"ಅಮ್ಮಾ...ಗೆಸ್ ಮಾಡು'' ಎನ್ನುತ್ತಾನೆ.<br />
<br />
ನನಗೆ ಮತ್ತೆ ಕನ್ನಡಿಯಲ್ಲಿ ನನ್ನ ನಾ ನೋಡಿಕೊಳ್ಳುವ ಖುಷಿ. ನನ್ನೆದೆಯಲ್ಲಿ ಮರುವಸಂತ.<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com1tag:blogger.com,1999:blog-3759631957739186729.post-15557549180141489932013-06-13T06:05:00.001-07:002013-06-13T06:05:28.207-07:00ಒಂದು ವಾಕಿಂಗ್ ಮುಂಜಾವು<div dir="ltr" style="text-align: left;" trbidi="on">
<br />
<br />
ದಟ್ಟಮರಗಳ ನಡುವೆ ಅಗಲ ರಸ್ತೆಗಳು, ರಸ್ತೆ ತುಂಬಾ ಗುಲ್ ಮೊಹರ್, ಚಿನ್ನದ ಹೂವು, ಪಿಂಕ್ ಕ್ಯಾಸಿಯಾ ...ಬಣ್ಣ-ಬಣ್ಣದ ಪುಷ್ಪಗಳ ಚಿತ್ತಾರ. ಇನ್ನೂ ಬೀದಿ ದೀಪ ಆರದ ಐದರ ಹೊತ್ತಿನಲ್ಲಿ ಹೂವ ಹಾಸಿನ ರಸ್ತೆ ಮೇಲೆ ನಡೆಯುವುದೇ ಚೆಂದ. ಹೂವುಗಳಿಂದ ಕಂಗೊಳಿಸುವ ಮರಗಳ ನಡುವೆ ಸೂರ್ಯ ಕೆಂಪೇರುವುದು ಕಣ್ಮನಸಿಗೆ ಹಬ್ಬ. ಹಾಳು ಸೆಖೆ...ಆದರೂ, ಪುಷ್ಪ ಚಿತ್ತಾರವನ್ನು ನೋಡಿದರೆ "ಇರಲಿ ಬೇಸಿಗೆ ಕಾಲ'' ಎನ್ನುತ್ತಿತ್ತು ಮನಸ್ಸು.<br />
<br />
****************<br />
ರಾಜಕಾರಣಿಯೊಬ್ಬನ ದೊಡ್ಡ ಗೇಣಿನ ಬಂಗಲೆ. ಅದರೆದುರು ಹತ್ತಾರು ಕಾರುಗಳು, ರಾತ್ರಿಯಿಡೀ ನಿದ್ದೆಯಿಲ್ಲದೆ ತೂಕಡಿಸುವ ಸೆಕ್ಯೂರಿಟಿ ಗಾರ್ಡ್ ಗಳು.<br />
<br />
****************<br />
ಅದು ದೈವಭಕ್ತ ಹೆಂಗಸರ ವಾಕಿಂಗ್. ಯಾರದೋ ಕಾಂಪೌಂಡ್ ಗೆ ಹತ್ತಿ ಪೂಜೆಗಾಗಿ ಹೂವುಗಳನ್ನು ಕಿತ್ತು ಸೆರಗಿನಲ್ಲಿ ತುಂಬಿಸಿಕೊಳ್ಳುತ್ತಿದ್ದರು. "ನಾಯಿಗಳಿವೆ ಎಚ್ಚರಿಕೆ' ಎಂಬ ಬೋರ್ಡಿಗೂ ಅವರು ಹೆದರಲಿಲ್ಲ!.<br />
<br />
****************<br />
ಒಂದು ವರ್ಷದ ಹಿಂದೆ ಆ ಕೌಂಪೌಂಡಿನಲ್ಲಿ ಮೇಣದ ಗಣಪತಿ ಬಂದು ಕುಳಿತಿದ್ದಾನೆ. ವಾಕಿಂಗ್ ಹೋಗುವವರೆಲ್ಲಾ ಆ ಗಣಪತಿಗೆ ಸೆಲ್ಯೂಟ್ ಹೊಡೆದೇ ಮುಂದೆ ಸಾಗುತ್ತಾರೆ. ಅವನೆದುರು ಇರುವ ಡಬ್ಬಕ್ಕೆ ಬೆಳ್ಳಂಬೆಳಗ್ಗೆ ನೋಟು ತುಂಬುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯಾಕೋ ಗಣಪತಿ ದಿನ ಹೋದಂಗೆ ಶ್ರೀಮಂತನಾಗುತ್ತಿದ್ದಾನೆ!<br />
****************<br />
<br />
ಎಂಬತ್ತು ದಾಟಿರುವ ತಾತನ ಹಿಂದೆ ಏಳೆಂಟು ಬೀದಿನಾಯಿಗಳು ಸುತ್ತುತ್ತಿದ್ದವು. ನೋಡಿದರೆ, ಅಜ್ಜ ನಾಯಿಗಳಿಗಾಗಿ ತಿಂಡಿ ತಂದಿದ್ದರು. ಪ್ರತಿದಿನ ವಾಕ್ ಹೋಗುವಾಗ ಬೀದಿ ನಾಯಿಗಳ ಕಾಟ ತಡೆಯಲಾರದೆ ಅವರು ಈಗ ನಾಯಿಗಳಿಗೆ ತಿಂಡಿ ತರುವ ಅಭ್ಯಾಸ ಮಾಡಿಕೊಂಡಿದ್ದಾರಂತೆ!.<br />
****************<br />
<br />
ಮನೆಯ ಕೆಲಸದಾಕೆ...ಮನೆಮುಂದೆ ಬಿದ್ದಿದ ಕಸದರಾಶಿಗೆ ಬೆಂಕಿ ಹಚ್ಚುತ್ತಿದ್ದಳು. ಅದರಿಂದ ದಟ್ಟಹೊಗೆ, ಕೆಟ್ಟವಾಸನೆ. ಬೆಳಿಗ್ಗೆಯಾದರೂ ಶುದ್ಧ ಗಾಳಿ ಸಿಗಲೆಂದು ಮೂಗು ಬಯಸುತ್ತಿದ್ದರೆ...ಒಮ್ಮೆಲೇ ಕೆಮ್ಮು ಬರತೊಡಗಿತು.<br />
****************<br />
<br />
ಬೀದಿ ದೀಪಗಳು ನಿಧಾನಕ್ಕೆ ಆಫ್ ಆಗತೊಡಗಿದವು. ಇನ್ನೇನೋ ಸೂರ್ಯ ಬರುವ ಹೊತ್ತು. ರಸ್ತೆ ಮೇಲಿನ ಹೂವಿನ ಚಿತ್ತಾರ ಮಬ್ಬು ಮುಂಜಾವಿನಲ್ಲಿ ಇನ್ನಷ್ಟು ಮೋಹಕ. ಯೋಚನೆಗಳಿಗೆ ನೂರಾರು ದಾರಿಗಳು. ಮುಂದೆ ಸಾಗಿದರೆ ಬಂಗಲೆಯೊಂದರ ಪಕ್ಕದಲ್ಲಿ ಗೊರಕೆ ಸದ್ದು ಕೇಳುತ್ತಿತ್ತು. ಪಾಪ, ರಾತ್ರಿಯಿಡೀ ಎಚ್ಚರವಿದ್ದ ಸೆಕ್ಯೂರಿಟಿ ಆರು ಗಂಟೆ ಹೊತ್ತಿಗೆ ನಿದ್ದೆಗೆ ಜಾರಿದ್ದ!.<br />
****************<br />
<br />
ಯಾರದೋ ಮನೆ, ಮನೆಯೆದುರು ಹೂವು ಕುಂಡಗಳ ಅಲಂಕಾರ, ಇನ್ನ್ಯಾರದೋ ಮನೆಯ ಸೆಕ್ಯೂರಿಟಿ ತನ್ನ ಜೊತೆಗೆ ವಾಕಿಂಗ್ ಬಂದ ನಾಯಿಯನ್ನು ಅಲ್ಲಿ "ನಿತ್ಯಕರ್ಮ'' ಮಾಡಿಸುತ್ತಿದ್ದ!. ಇನ್ನೂ ಮುಂದೆ ಹೋದರೆ ಗಾಡಿ ತೊಳೆಯುವ ಹುಡುಗ "ರಂಗೋಲಿ'' ಮೇಲೆ ನೀರು ಹಾಕಿದನೆಂದು ಮನೆಯೊಡತಿ ಬೈಯುತ್ತಿದ್ದಳು.<br />
****************<br />
<br />
" ಥೂ....ಮಗ'' ಕಾಫಿ ಮಾರುವ ಅಜ್ಜಿ ದೊಡ್ಡ ಸ್ವರದಲ್ಲಿ ಬೈಯುತ್ತಿದ್ದಳು. ಆ ಏರಿಯಾದ ಸೆಕ್ಯೂರಿಟಿ ಗಾರ್ಡ್ ಗಳಿಗೆ ಮುಂಜಾವು ಶುರುವಾಗುವುದೇ ಅಜ್ಜಿಯ ಬಿಸಿ-ಬಿಸಿ ಕಾಫಿ ಮೂಲಕ. ಹತ್ತಾರು ಮಂದಿ ಯಾವಾಗಲೂ ಅಜ್ಜಿ ಮುಂದೆ ಕಾಫಿಗಾಗಿ ಕ್ಯೂ ನಿಂತಿರುತ್ತಾರೆ. ಒಂದೊಂದು ದಿನ ಅಜ್ಜಿ ಖುಷಿಯಲ್ಲಿರುತ್ತಾಳೆ, ಕೆಲವೊಮ್ಮೆ ಜಮದಗ್ನಿಯಾಗುತ್ತಾಳೆ. ತಿಂಗಳ ಕೊನೆಯಲ್ಲಿ ಎಲ್ಲರಿಗೂ ಸಾಲದ ಮೇಲೆ ಕಾಫಿಯಂತೆ. ಒಬ್ಬ ಎರಡು ತಿಂಗಳಿಂದ ಬಿಟ್ಟಿ ಕಾಫಿ ಕುಡಿದು ಸಾಲ ತೀರಿಸಿಲ್ಲ ಎಂದು ಅಜ್ಜಿಗೆ ಸಿಟ್ಟು ನೆತ್ತಿಗೇರಿತ್ತು.<br />
*********************<br />
<br />
ಗಂಟೆ ಆರೂವರೆ. ಸೂರ್ಯ ನಿಧಾನಕ್ಕೆ ಮೇಲೇರುತ್ತಿದ್ದ. ಬಂದ ದಾರಿಯಲ್ಲೇ ವಾಪಸ್ ಹೊರಟೆ. ಹೂವ ಚಿತ್ತಾರ ಬೀದಿ ಗುಡಿಸುವವಳ ಪೊರಕೆಗೆ ಸಿಕ್ಕು ಕಸದರಾಶಿಯಾಗಿದ್ದವು. ಮನೆ ಗೇಟ್ ತೆರೆದರೆ, ಅಮ್ಮ ಹೊಸಿಲಿಗೆ ರಂಗೋಲಿ ಹಾಕಿ, ಅರಿಶಿಣ-ಕುಂಕುಮ ಹಚ್ಚಿದ್ದಳು. ಪತಿದೇವರಿಗೆ ಮಾತ್ರ ಇನ್ನೂ ಬೆಳಗಾಗಿರಲಿಲ್ಲ!!!<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com1tag:blogger.com,1999:blog-3759631957739186729.post-11096023128485319212013-04-18T23:33:00.004-07:002013-04-18T23:33:49.715-07:00ನೆನಪಿಗೊಂದು ಡಿಲೀಟ್ ಬಟನ್!<div dir="ltr" style="text-align: left;" trbidi="on">
<br />
ನೆನಪಿಗೂ ಡಿಲೀಟ್ ಬಟನ್ ಇರುವಂತಿದ್ದರೆ....<br />
ಬೇಡವಾದ, ಇಷ್ಟವಿಲ್ಲದ ನೆನಪುಗಳನ್ನು ಡಿಲೀಟ್ ಬಟನ್ ಒತ್ತಿ ಅಳಿಸಿಬಿಡಬಹುದಿತ್ತು...<br />
ಬೇಕಿದ್ದರೆ ಕಂಟ್ರೋಲ್ ಝಡ್ ಮಾಡಬಹುದಿತ್ತು....<br />
ಎಲ್ಲಿಂದಲೋ ಎರವಲು ಪಡೆಯಬೇಕಿದ್ದರೆ ಕಂಟ್ರೋಲ್ ಕಾಪಿ&ಪೇಸ್ಟ್ ಮಾಡಬಹುದಿತ್ತು...<br />
ಸಾಧ್ಯನಾ? ಮತ್ತೊಂದು ಪ್ರಶ್ನೆ ತಲೆಯೊಳಗೆ.<br />
"ಬೆಳಗ್ಗೆಯಿಂದ ಎಷ್ಟು ಎನ್ ಕ್ವಾರಿ ಅಟೆಂಡ್ ಮಾಡಿದೆ?'' ಬಾಸ್ ಬಂದು ನನ್ನ ಮೇಜು ಮೇಲೆ ಸದ್ದು ಮಾಡಿದ.<br />
"ಸರ್, ಐದು...''<br />
"ಬರೀ ಐದೇ..ಬೆಳಿಗ್ಗೆ 10 ಗಂಟೆಗೆ ಆಫೀಸ್ ಬರ್ತಿಯಾ. ಈಗ ಗಂಟೆ ಐದು. ಇನ್ನು ಒಂದು ಗಂಟೆಯಲ್ಲಿ ಮನೆಗೆ ಹೊರಡುವ ಸಮಯ'' ಬಾಸ್ ಕಣ್ಣು ದೊಡ್ಡದಾಗಿತ್ತು. ಬಾಸ್ ಆತನ ಚೇಂಬರಿಗೆ ತೆರಳಿದ. ಗಾಜಿನ ಪರದೆಯ ಒಳಗಿನಿಂದ ಅವನ ಕಣ್ಣು ನನ್ನ ಮೇಲೆ.<br />
<br />
<b>ಮತ್ತೊಂದಷ್ಟು ನೆನಪುಗಳು. ಎದೆಯ ಸೀಳಿ ಹೊರಬಂದವು....</b><br />
ಅಂದು ನಾನು ಹುಟ್ಟಿದ್ದು, ಚೌತಿ ದಿನ. ಬೆಳಿಗ್ಗೆ 7.20ಕ್ಕೆ.<br />
ಹೆಣ್ಣುಮಗುವೆಂದು ಅಮ್ಮಂಗೆ ಖುಷಿ..<br />
ಅಜ್ಜಿ ಮತ್ತು ಅಪ್ಪ "ಗಂಡು ಮಗು ಬೇಕೆಂದು'' ಗ್ರಾಮದೇವತೆಗೆ ಹರಕೆ ಹೊತ್ತಿದ್ದು ವ್ಯರ್ಥವಾಗಿತ್ತಂತೆ.<br />
ನಾನು ಹುಟ್ಟಿದಾಗ ಅಪ್ಪ ನನ್ನ ನೋಡಲು ಬರಲಿಲ್ಲವಂತೆ..<br />
ಹೆಣ್ಣು ಮಗು...ಮನೆಹಾಳು ಅಂದಿದ್ದನಂತೆ...<br />
ಅಪ್ಪ...!,<br />
ಅವನು ಅಮ್ಮಂಗೆ ಕಷ್ಟ ಕೊಟ್ಟಿದ್ದ. ಮೂಗಿನ ತನಕ ಕುಡಿದು ಮನೆಗೆ ಬಂದು ಅಮ್ಮನ ಹಿಂಸಿಸುತ್ತಿದ್ದ. ಅವನು ನನಗೆ ಬೇಡವಾಗಿತ್ತು...<br />
ಆದರೆ, ಅಮ್ಮ "ಅವನೇ ತಾಳಿ, ಪಾಲಿಗೆ ಬಂದದ್ದು ಪಂಚಾಮೃತ. ಹೊಂದಿಕೊಂಡು ಹೋಗಬೇಕು'' ಎಂಬ ಮಾತಿನಲ್ಲಿ ನಂಬಿಕೆಯಿಟ್ಟಿದ್ದಳು.<br />
ಎಂಥ ಒಳ್ಳೆಯ ಅಮ್ಮ, ಎಷ್ಟು ಕೆಟ್ಟ ಅಪ್ಪ...<br />
ಅವನ ನೆನಪನ್ನು ಡಿಲೀಟ್ ಮಾಡಬೇಕು ಅನಿಸಿತ್ತು..ಬೆರಳು ಡಿಲೀಟ್ ಬಟನ್ ನತ್ತ ಸಾಗಿತ್ತು...<br />
ಥತ್...<br />
ಎನ್ ಕ್ವಾರಿ ಲಿಸ್ಟ್ ಡಿಲೀಟ್ ಆಗೋಯ್ತು...ಎದೆ ಢವಢವ.<br />
"ಓಹ್..ಕಂಟ್ರೋಲ್ ಝಡ್'' ಲಿಸ್ಟು ಮತ್ತೆ ಬಂತು.<br />
<br />
<b>ಮತ್ತೆ ಬಿಡದೆ ಕಾಡುವ ನೆನಪುಗಳು....</b><br />
ಬೆಂಗಳೂರಿಗೆ ಬಂದ ಹೊಸತು. ನಮ್ಮನೆ ಎದುರುಗಡೆ ಮನೆಯಲ್ಲಿ ಯುವತಿ ಇದ್ದಳು. ವಯಸ್ಸು ಮೂವತ್ತೊರಳಗೆ. ಉದ್ದ ಜಡೆಗೆ ಹೂವ ಮುಡಿದರೆ ನೋಡಲು ಇನ್ನೂ ಚೆಂದ. ದಿನಾ ಕಣ್ಣಿಗೆ ಕಾಡಿಗೆ ಹಚ್ಚುತ್ತಾಳೆ, ಕಿವಿಯಲ್ಲಿ ತೂಗಾಡುವ ಓಲೆ, ಮೂಗಿನಲ್ಲಿ ಮಿನುಗುವ ನತ್ತು, ಕೈ ತುಂಬಾ ಬಣ್ಣದ ಬಳೆ. ಮುಂಜಾವು ಸೂರ್ಯ ಅರಳುವ ಹೊತ್ತು ಮನೆಮುಂದೆ ರಂಗೋಲಿ ಇಡುತ್ತಾಳೆ. ನೀಳಜಡೆ ನೆಲದ ಮೇಲೆ ನಲಿದಾಡುತ್ತೆ....<br />
ಅವಳ ಮನೆಯೆದುರು ನಡೆದಾಡಿದರೆ ಅವಳ ಕಾಲಲ್ಲಿದ್ದ ಬೆಳ್ಳಿ ಗೆಜ್ಜೆಯ ಸಪ್ಪಳ ನಮ್ಮನೆ ಅಡುಗೆ ಮನೆಗೂ ಕೇಳಿಸುತ್ತಿತ್ತು. ಮತ್ತೆ ಮತ್ತೆ ಅವಳ ನೋಡುತ್ತಿದ್ದೆ. ಚೆಂದದ ಹುಡುಗಿ ಅವಳು.<br />
ಅವಳು ಕೆಲಸಕ್ಕೆ ಹೋಗುವುದಿಲ್ಲ...ಬೆಳಗ್ಗೆಯಿಂದ ಸಂಜೆ ತನಕ ಮನೆಯೊಳಗೇ ಸಿಂಗಾರವ್ವ. ದಿನಾ ಸಂಜೆ ಒಬ್ಬ ಅರವತ್ತು ದಾಟಿದ ಕಪ್ಪಗಿನ ಗಂಡಸು ಅವಳ ಮನೆಗೆ ಹಾಜರು. ಅವನು ಬರುವ ಹೊತ್ತು ಅವಳು ಕಾಯುವುದು ಶಬರಿ ರಾಮಂಗೆ ಕಾದಿದ್ದನ್ನು ನೆನಪಿಸುತ್ತಿತ್ತು. ಅವನ ಕುತ್ತಿಗೆಯಲ್ಲಿ ಸರಪಳಿಯಂಥ ಚಿನ್ನದ ಸರ, ಕೈಯಲ್ಲಿ ದಪ್ಪ ಬಳೆ.<br />
"ಇವನೇನೋ ರಿಯಲ್ ಎಸ್ಟೇಟ್ ಸರದಾರ. ಅವಳ ಅಪ್ಪನಿರಬೇಕು'' ನನ್ನ ಅನುಮಾನಕ್ಕೆ ಮನಸ್ಸು ಉತ್ತರ ಕೊಟ್ಟಿತ್ತು.<br />
ಪಕ್ಕದ್ಮನೆ ಹೆಂಗಸರು ಮಾತಾಡಿಕೊಳ್ಳುತ್ತಿದ್ದರು, "ಪಾಪ ಆ ಹುಡುಗಿ ಅಮ್ಮಂಗೆ ಎಂಟು ಜನ ಮಕ್ಕಳಂತೆ. ಇವಳು ನಾಲ್ಕನೆಯವಳು. ಅಪ್ಪ ಕಾಯಿಲೆಯಿಂದ ಸತ್ತುಹೋದ. ಹೆಣ್ಣುಮಕ್ಕಳ ಮದುವೆ ಮಾಡಕ್ಕಾಗದ ಅಮ್ಮ ಈ ಮುತ್ತಿನಂಥ ಹುಡುಗಿಗೆ ಎರಡನೇ ಸಂಬಂದ ಕಟ್ಟಿದ್ರಂತೆ. ಆಯಪ್ಪಂಗೆ ಮದುವೆಯಾದರೂ ಮಕ್ಕಳಾಗಿಲ್ಲ ಎಂದು ಇನ್ನೊಂದು ಮದುವೆ ಮಾಡಿಕೊಂಡಂತೆ. ಅದಕ್ಕೆ ದಿನಾ ಮನೆಗೆ ಬಂದು ನೋಡ್ಕೊಂಡು ಹೋಗ್ತಾನೆ...''<br />
<br />
<b>ಹಾಳು ನೆನಪುಗಳು...ಮತ್ತೆ ಮತ್ತೆ ಕಾಡ್ತವೆ...</b><br />
ಸುಮ್ಮನೆ ಬಾಸ್ ಕೈಯಿಂದ ಬೈಗುಳ. ಫೈಲ್ ಡಿಲೀಟ್ ಆಗೋದು...ಎಲ್ಲವೂ ನೆನಪುಗಳಿಂದಲೇ...ಅವುಗಳ ಮೇಲೆ ತುಂಬಾ ಸಿಟ್ಟು ಬಂತು....<br />
ಎದುರುಗಡೆ ಇದ್ದ ಗಡಿಯಾರದಲ್ಲಿ ಕಿರಿಯ ಮುಳ್ಳು ಆರು ತೋರಿಸುತ್ತಿತ್ತು.<br />
ಎನ್ ಕ್ವಾರಿ ಲಿಸ್ಟ್ ಬಾಸ್ ಗೆ ಮೇಲ್ ಮಾಡಿದೆ....<br />
ನನ್ನವನ ಕಾಲ್ "ಬಾ ಬೇಗ...ಗೇಟ್ ಬಳಿ ವೈಟ್ ಮಾಡ್ತಾ ಇದ್ದೀನಿ.."<br />
ಮನಸ್ಸಿನಲ್ಲಿ ಮತ್ತದೇ "ನೆನಪುಗಳನ್ನು ಡಿಲೀಟ್ ಬಟನ್ ಒತ್ತಿ ಅಳಿಸಿಬಿಡುವಂತಿದ್ದರೆ...ಎಷ್ಟು ಚೆಂದ? ಬೇಕಾದ್ದು ಇಟ್ಕೊಂಡು ಬೇಡದ್ದು ಡಿಲೀಟ್ ಮಾಡಬಹುದಿತ್ತು''!<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com1tag:blogger.com,1999:blog-3759631957739186729.post-28953039042689666702013-04-18T23:31:00.001-07:002013-04-18T23:31:16.779-07:00ಭಾವಕ್ಕೆ ದಕ್ಕಿದ ಪ್ರಸಂಗಗಳು-3<div dir="ltr" style="text-align: left;" trbidi="on">
<br />
<b>ಮೊದಲ ಫೈಲ್ ನೇಮ್ "ಲೈಫ್" </b><br />
ಮೊದಲು ಡಿಟಿಪಿ ಕಲಿಯಬೇಕು....<br />
"ತಿಂಗಳಿಗೆ ಮೂರು ಸಾವಿರ'' ಎಂದರು ದಪ್ಪ ಕನ್ನಡದ ಹೆಂಗಸು. ಅವರು ಕಂಪ್ಯೂಟರ್ ಟೀಚರ್.<br />
ಪರ್ಸ್ ಮುಟ್ಟಿ ನೋಡಿಕೊಂಡೆ. ಅಮ್ಮ ಕೊಟ್ಟಿದ್ದು ಬರೀ ನಾಲ್ಕು ಸಾವಿರ..<br />
ಬೆಂಗಳೂರು ಬರಡನಿಸಿತು. .."ನದಿಗೆ ಇಳಿದ ಮೇಲೆ ಈಜಿಲೇಬೇಕು. ಸಾಯೋದು ಅನ್ಯಾಯ''.<br />
ಒಪ್ಪಿಕೊಂಡೆ. ಅಲ್ಲಿಯವರೆಗೆ ಮೌಸ್ ಮುಟ್ಟದ ನನ್ನ ಬೆರಳುಗಳು ಅದನ್ನು ಗಟ್ಟಿಯಾಗಿ ಹಿಡಿದುಕೊಂಡವು. ಫೈಲ್ ಗಳನ್ನು ತೆರೆದು ಅಕ್ಷರಗಳನ್ನು ಪೋಣಿಸುತ್ತಾ ಹೋದೆ. ಸೇವ್ ಕ್ಲಿಕ್ ಮಾಡಿದರೆ ಪೋಣಿಸಿದ ಅಕ್ಷರಗಳು ಅಲ್ಲೇ ಉಳಿಯುತ್ತವೆ. ಫೈಲ್ ಗೊಂದು ಹೆಸರುಕೊಡಬೇಕು ಎಂದು ಹೇಳಿಕೊಟ್ಟರು ಕಂಪ್ಯೂಟರ್ ಟೀಚರ್. ಅದಕ್ಕೊಂದು ಹೆಸರು ಕೊಟ್ಟೆ "ಲೈಫ್'' ಎಂದು!<br />
ದಪ್ಪಶಾಯಿಯ ಪೆನ್ನಿನಲ್ಲಿ ಹೇಳಿಕೊಟ್ಟಿದ್ದನ್ನು ಬರೆದುಕೊಂಡೆ. ಕಲಿಕೆಗೊಂದು ನೋಟ್ ಬುಕ್!. ಮರುದಿನ ಕಾಪಿ-ಪೇಸ್ಟ್, ಡಿಲೀಟ್, ಆಲ್ಟ್ ಝಡ್....ಹೀಗೆ ಕೀಬೋರ್ಡ್ ಕಸರತ್ತು ಹೇಳಿಕೊಟ್ಟರು. ಬೆರಳುಗಳು ಜೋರಾಗಿ ಚಲಿಸುತ್ತಿದ್ದವು. ಕೀಬೋರ್ಡ್ ಕಟಕಟ ಶಬ್ಧಮಾಡತೊಡಗಿತು.<br />
ಪೆನ್ನು, ಪೆನ್ಸಿಲ್, ದಿನ ಗೀಚುತ್ತಿದ್ದ ಡೈರಿ...ಎಲ್ಲವೂ ನನ್ನ ಆ ಪೆಟ್ಟಿಗೆಯಲ್ಲಿ ಸುಮ್ಮನೆ ಕುಳಿತಿವೆ. ಪೆನ್ನಿಗೆ ಇಂಕ್ ತುಂಬಿಸಿ ಏಳು ವರ್ಷ ಸರಿದಿದೆ. ಪೆನ್ ಹಿಡಿದರೆ ಯೋಚನೆಗಳು ಗಕ್ಕನೆ ನಿಂತುಬಿಡುತ್ತವೆ. ಮತ್ತೆ ಮೌಸ್ ಹಿಡಿಯುತ್ತೇನೆ.<br />
***********<br />
<b>ಸಕಲ ಕೆಲಸ ವಲ್ಲಭ!</b><br />
"ಅಮ್ಮ ಒಬ್ಬಳೇ ಮನೆಯಲ್ಲಿ. ಎಲ್ಲಾ ಕೆಲಸ ಮಾಡುವುದು ಕಷ್ಟವಾಗುತ್ತೆ''ಅವನಂದ.<br />
"ಹ್ಲೂಂ..ಹೌದು, ನೀನು ಅಮ್ಮಂಗೆ ಹಲ್ಪ್ ಮಾಡೋಲ್ವಾ?''<br />
"ಮಾಡ್ತೀನಿ...ತರಕಾರಿ ಹಚ್ಚಿಕೊಡ್ತೀನಿ. ನನ್ ಬಟ್ಟೇನಾ ನಾನೇ ಒಗೇತೀನಿ. ವಾರಕ್ಕೆ ಬೇಕಾಗುವಷ್ಟು ಬಟ್ಟೆಗಳನ್ನು ನಾನೇ ಇಸ್ತ್ರೀ ಮಾಡಿಕೊಳ್ತೀನಿ''<br />
ಅವನಂದಾಗ,<br />
"ಗುಡ್ ಪರ್ವಾಗಿಲ್ಲ...ಗಂಡನಾಗುವವನು ಸಕಲ ಕೆಲಸ ವಲ್ಲಭ'' ಎಂದುಕೊಂಡೆ ನಾನು.<br />
***<br />
ಮದುವೆಯ ಮೊದಲ ದಿನ. ಅವನ ಕೋಣೆ ಹೊಸತು. ಮಂಚ ಅಲಂಕಾರಗೊಂಡಿತ್ತು. ಮಲ್ಲಿಗೆಯ ಘಮ.<br />
ಕೋಣೆಯೊಳಗೆ ಏನೇನಿದೆ ಎಂದು ನೋಡುವ ತವಕ ನನ್ನ ಕಣ್ಣುಗಳಿಗೆ.<br />
ಪುಸ್ತಕ, ಪೆನ್ನುಗಳ ರಾಶಿ. ನೋಟ್ ಪುಸ್ತಕಗಳು, ಡೈರಿಗಳು, ಚಿಂದಿ-ಚಿಂದಿಯಾದ ಕಾಗದ ಚೂರುಗಳು...ನೋಡುತ್ತಲೇ ನಿಂತಿದ್ದೆ.<br />
"ಏಕೆ ರೂಮ್ ಹಿಂಗಿಟ್ಟುಕೊಂಡಿದ್ದೀ..ಗಂಡುಮಕ್ಕಳೇ ಹಿಂಗೇ ಅನಿಸುತ್ತೆ'' ನಾನಂದೆ.<br />
"ಮೊದಲ ದಿನ. ಸುತ್ತಮುತ್ತ ನೋಡಬೇಡ. ನನ್ನ ಕಣ್ಣುಗಳನ್ನಷ್ಟೇ ನೋಡು'' ಕೈ ಹಿಡಿದೆಳೆದು. ಸ್ವಿಚ್ ಬೋರ್ಡ್ ಒತ್ತಿದ. ಕೋಣೆ ಕತ್ತಲಾಯಿತು.<br />
"ಪರ್ವಾಗಿಲ್ಲ ನನ್ ಗಂಡ ತುಂಬಾ ಓದ್ತಾನೆ..'' ಖುಷಿಪಟ್ಟೆ ಮನಸ್ಸಿನಲ್ಲಿ.<br />
ಬೆಳಗಾಯಿತು...<br />
ಅವನ ದೊಡ್ಡ ಬೀರು ತೆರೆದೆ.<br />
ಅಬ್ಬಾ...ಬಟ್ಟೆ ರಾಶಿಗಳು...ಪ್ಯಾಂಟ್, ಶರ್ಟ್, ಟೀ-ಶರ್ಟ್, ಬನಿಯನ್, ನಿಕ್ಕರ್...ಎಲ್ಲವೂ ಮುದ್ದೆ ಮುದ್ದೆಯಾಗಿ ತುರುಕಿಸಿಡಲಾಗಿತ್ತು. ಒಂದು ಬಟ್ಟೆ ತೆಗೆದರೆ ಇನ್ನೊಂದು ಬೀಳುತ್ತಿತ್ತು...ಗೆದ್ದಲು ಹಿಡಿಯೋಕೆ ಬಾಕಿ!<br />
"ಏನಿದು...ಬ್ಯಾಚುಲರ್ ಹುಡುಗ್ರು ಹೀಗೆನಾ?'' ಕೇಳಿದೆ.<br />
"ಒಬ್ಬ ವ್ಯಕ್ತಿ ಬಚ್ಚಲಿನಲ್ಲಿ ಬದುಕುವ ಹಕ್ಕಿಯಾಗಬೇಕು! ಇದರಲ್ಲಿ ಕೂತುಕೊಂಡು ಆಕಾಶ ನೋಡಬೇಕು. ಸೂರ್ಯನನ್ನು ನೋಡಬೇಕು. ಸುತ್ತಲಿನ ಜಗತ್ತನ್ನು ನೋಡಬೇಕು. ಅದಕ್ಕೆ ಈ ಕೋಣೆಯಲ್ಲಿ ಸರಿಯಾದ ವಾತಾವರಣವಿದೆ! ನಾನು ಇಲ್ಲಿದ್ದು ಏನಾದರೂ ಬರೆಯಲು ಸಾಧ್ಯ. ಕೈಲಾಸಂ ಹೀಗನ್ನುತ್ತಿದ್ದರಂತೆ. ನಾನು ಕೋಣೆ ಒಂದು ಬಚ್ಚಲು, ನಾನಿಲ್ಲಿ ಹಕ್ಕಿ...'' ಮಾತು ನಿಲ್ಲದೆ ಓಡುತ್ತಿತ್ತು.<br />
"ಅದ್ಸರಿ...ನೀನು ನನ್ನ ನೋಡಲು ಬಂದ ಮೊದಲ ದಿನ ನೀಟಾಗಿ ಡ್ರೆಸ್ ಮಾಡಿಕೊಂಡು ಬಂದಿದ್ದೆ. ಯಾರು ಬಟ್ಟೆಗೆ ಇಸ್ತ್ರೀ ಮಾಡಿಕೊಟ್ರು?''<br />
ನಗುತ್ತಾ ಅವನಂದ, "ನಾನು ಹೆಂಗೆ ಬೇಕೋ ಹಾಗೇ ಇದ್ದೋನು. ಆದ್ರೆ ಅವತ್ತು ಹಿಂಗೆ ಇದ್ರೆ ನೀನು ಕೈಕೊಟ್ರೆ ಅನಿಸುತ್ತು. ಅದಕ್ಕೆ ನೀಟಾಗಿ ಬಂದಿದ್ದೆ'' ಎಂದು ತುಂಟ ನಗೆ ನಕ್ಕ''.<br />
***********<br />
<b>ಅಮ್ಮಂಗೂ ಮರೆತ ಕಾಗದ</b><br />
ಊರಿಗೆ ಹೋದಾಗ ಅಮ್ಮ ಹೇಳುತ್ತಾಳೆ, "ಭಾಳ ಬದಲಾಗಿದ್ದೀ. ಮೊದಲಿನ ಮುಗ್ಧತೆ, ಜನ ನೋಡಿದರೆ ಭಯ ಎಲ್ಲವೂ ಮಾಯ. ಅಂದಹಾಗೆ ಈಗ ಕಾಗದ ಬರೆಯುವುದೇ ಇಲ್ಲ, ಏನ್ ಸೋಮಾರಿತನ ನಿಂಗೆ?''<br />
ಅಮ್ಮನ ಮಾತು ಮುಗಿಯುವ ಮುನ್ನ<br />
"ಫೋನ್ ಇದೆ...ಇನ್ನೇನು ಕಾಗದ ಬರೆಯೋದು? ಕಂಪ್ಯೂಟರ್ ನಿಂಗೆ ಅರ್ಥವಾಗಿಲ್ಲಾಂದ್ರೆ ಪಕ್ಕದ್ಮನೆ ರಮೇಶಂಗೆ ಗೊತ್ತು. ಅವ ನನ್ನನ್ನು ಕಂಪ್ಯೂಟರ್ನಲ್ಲಿ ತೋರಿಸ್ತಾನೆ.'' ನನ್ನ ಮಾತು ಕೇಳಿ ಅಮ್ಮಂಗೆ ಅಚ್ಚರಿ.<br />
ನಾನು ಮತ್ತೆ ಬೆಂಗಳೂರಿಗೆ. ಸ್ಕೈಪ್ ತೆರೆಯುತ್ತೇನೆ. ಕಂಪ್ಯೂಟರ್ ನ ಆ ಪುಟ್ಟ ಕಿಂಡಿಯಲ್ಲಿ ನನ್ ಮಾತು, ಮುಖ ನೋಡಿ ಅಮ್ಮಂಗೆ ಜಗತ್ತು ಗೆದ್ದಂಥ ಖುಷಿ. ಈಗ ಕಾಗದ ಬರೆಯಲು ಹೇಳುವುದು ಅಮ್ಮಂಗೂ ಮರೆತುಹೋದಂತಿದೆ.<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com1tag:blogger.com,1999:blog-3759631957739186729.post-34867957431379812912013-04-18T23:28:00.002-07:002013-04-18T23:28:31.784-07:00 ಬಯಕೆಯ ಬಯಲ ಹುಡುಕಾಟ<div dir="ltr" style="text-align: left;" trbidi="on">
<br />
<b>ಕನಸ ಕಸುವೂ ಬೇಕು....</b><br />
<b>ಯಶದ ಹಾದಿಯ ಹೆಜ್ಜೆಗೆ </b><br />
<b>ಬಯಕೆ ಬಯಲು </b><br />
<b>ಎರಡೂ ಬೇಕು </b><br />
<b>ಸಾಧನೆಯ ಕಾಲ್ಗೆಜ್ಜೆಗೆ...</b><br />
ಆಟೋಗ್ರಾಫ್ ನ ಮೊದಲ ಪುಟದಲ್ಲಿದ್ದ ಸಾಲುಗಳನ್ನು ಮತ್ತೆ ಮತ್ತೆ ಓದಿಕೊಂಡೆ. ಪ್ರೀತಿಯ ಟೀಚರ್ ಬರೆದ ಸಾಲುಗಳಿವು. ಬೆಟ್ಟದಷ್ಟು ಕನಸುಗಳು ಎದೆಯೊಳಗೆ ಬೆಚ್ಚಗೆ ಮಲಗಿದ್ದವು. ಬೆಂಗಳೂರಿಗೆ ಹೋದರೆ ಏನಾದರೂ ಕೆಲಸ ಸಿಗುತ್ತೆ ಎಂಬ ಬಲ್ಲವರು ಹೇಳಿದ ಮಾತಿನಲ್ಲಿ ಗಟ್ಟಿ ನಂಬಿಕೆಯಿತ್ತು.<br />
<br />
ಎಂಟನೇ ತರಗತಿಯಿಂದ ಗೀಚಿದ ಹಾಳು-ಮೂಳು ಬರಹಗಳು. ಹಳೇ ಡೈರಿಗಳು, ಪೆನ್ನು, ಪುಸ್ತಕ, ಅಮ್ಮ ಕೊಡಿಸಿದ ಭಗವದ್ಗೀತೆ, ಎಸ್ ಎಸ್ ಎಲ್ ಸಿ, ಡಿಗ್ರಿ , ಅಂಕಪಟ್ಟಿ, ಎಲೆಕ್ಷನ್ ಕಾರ್ಡ್, ಶಾಲೆ-ಕಾಲೇಜು ಆಟೋಗ್ರಾಫ್ ... ಎಲ್ಲವನ್ನೂ ಪ್ಯಾಕ್ ಮಾಡಿದ್ದೆ. ಮನಸ್ಸಿಗೆ ಮುಗ್ಧತೆಯ ಸಿಂಗಾರ...ಇದಕ್ಕೇ ಇರಬೇಕು ಹೊರಡುವ ಮುಂಚೆ ಅಮ್ಮ, ನನ್ನ ಪ್ರೀತಿಯ ಮೇಷ್ಟ್ರುಗಳು ಗಂಟೆ-ಗಟ್ಟಲೆ ಕುಳ್ಳಿರಿಸಿ ಕಿವಿಮಾತು ಹೇಳಿದ್ದು,<br />
<br />
ರಾತ್ರಿ 9, ಬಸ್ ಹೊರಡುವ ಸಮಯ.<br />
ಬಸ್ ಹತ್ತುವ ಮೊದಲು "ಬೆಂಗಳೂರು ಹೇಗಿದೆ ಎಂದು ಕಾಗದ ಹಾಕು. ಅಲ್ಲಿ ಜಾಗ ಹೇಗಿದೆ ಹೇಳು...ಮುಂದಿನ ಸಲ ಹೂಗಿಡ ತಕ್ಕೋಂಡು ಹೋಗಿವಿಯಂತೆ' ಅಮ್ಮ ನುಡಿದಳು.<br />
ಕಲ್ಪನೆಯ ಬೆಂಗಳೂರು ತಲೆಯೊಳಗೆ ಗಿರಕಿ ಹೊಡೆಯತೊಡಗಿತು. "ಬೆಂಗಳೂರಲ್ಲಿ ಎಲ್ಲಾರೂ ಕೆಲಸ ಮಾಡೋರೇ. ಬೆಳಿಗ್ಗೆ ಮನೆಗೆ ಬೀಗ ಜಡಿದು ಹೋದರೆ ಸಂಜೆ ಸೂರ್ಯ ಕಂತುವ ಹೊತ್ತಿಗೆ ಮನೆ ಸೇರುವುದು. ಜನಜಂಗುಲಿ ಹೆಚ್ಚು, ತುಂಬಾ ಜೋಪಾನವಾಗಿರಬೇಕು. ಎಲ್ಲಾರೂ ಒಳ್ಳೆಯವರೆಂದು ನಂಬುವುದು ನಮಗೆ ನಾವೇ ಮೋಸ ಮಾಡಿಕೊಂಡಂತೆ. ಬೆಂಗಳೂರು ರಾತ್ರಿ ನೋಡಕೆ ಚೆಂದ, ಎತ್ತಲೂ ಲೈಟ್. ದೀಪದ ಬೆಳಕಿನಲ್ಲಿ ಓಡುವ ವಾಹನಗಳು, ಶಾಪಿಂಗ್ ಮಾಡುವವರ ಸಂಭ್ರಮ, ಇಲ್ಲಿ ರಾತ್ರಿ-ಹಗಲಿಗೆ ವ್ಯತ್ಯಾಸವೇ ಕಾಣುವುದಿಲ್ಲ' ಬೆಂಗಳೂರನ್ನು ಬಲ್ಲವರ ಮಾತುಗಳು ಮತ್ತೆ ಮತ್ತೆ ನೆನಪಾಗತೊಡಗಿದವು.<br />
<br />
<b>ಎಷ್ಟೊಂದು ನೆನಪುಗಳು...</b><br />
ಯೋಚನೆಗಳ ನೆಗೆತ. ನಿಲ್ಲು ಅಂದರೆ ನಿಲ್ಲುತ್ತಿಲ್ಲ. ನನ್ನ ಹೊತ್ತ ಬಸ್ ಶಿರಾಡಿಘಾಟ್ ಹತ್ತುತ್ತಿತ್ತು. ತಿರುವುಗಳನ್ನು ದಾಟುವಾಗ ಬಸ್ ನ ಓಲಾಟಕ್ಕೆ ಸಕಲೇಶಪುರ ತಲುಪುವಷ್ಟರಲ್ಲಿ ಮೈ-ಕೈ ನೋವು. ಬೆಳಗಿನ ಜಾವ ಬಸ್ ಎಲ್ಲೋ ನಿಂತಿತು. ಬ್ಯಾಗ್ ಬಿಟ್ಟು ಇಳಿಯುವ ದೈರ್ಯ ಇಲ್ಲ, ಅಷ್ಟು ದೂರದ ಪ್ರಯಾಣ ಅದೇ ಮೊದಲು..ಯಾರಾದ್ರೂ ಹೊತ್ತೊಯ್ದರೆ ಎನ್ನುವ ಭಯ. ಸೂರ್ಯ ಕಾಣುವ ತನಕ ನನ್ನ ಕಣ್ಣಿಗೆ ಮಾತ್ರ ನಿದ್ದೆ ಹತ್ತಲಿಲ್ಲ.<br />
<b>ಬೆಂಗಳೂರು ನಗರಕ್ಕೆ ಸ್ವಾಗತ. ದೊಡ್ಡ ಹಸಿರು ಬೋರ್ಡ್ ಕಾಣಿಸಿತು.</b><br />
ಕಂಡಕ್ಟರ್ ಗೆ ಕೇಳಿದೆ, "ಬೆಂಗಳೂರು ಅಂದ್ರೆ ಇದೇನಾ? ಇಳಿಯುವ ಜಾಗ ಮೆಜೆಸ್ಟಿಕ್ ಇನ್ನೆಷ್ಟು ದೂರವಿದೆ?''.<br />
ನಿದ್ದೆಗಣ್ಣಲ್ಲಿ ಕಂಡಕ್ಟರ್ ಉಸುರಿದ; "ಹೇಳ್ತೀನಮ್ಮಾ....ಕೂತ್ಕೋ. ಸಿಟಿಗೆ ಇನ್ನೂ ದೂರವಿದೆ''<br />
ನನ್ನೊಳಗೆ ಸಣ್ಣ ಗೊಂದಲ.<br />
"ಮೆಜೆಸ್ಟಿಕ್ ಮತ್ತು ಸಿಟಿ ಬೇರೇನಾ?''<br />
"ತಲೆ ತಿನ್ಬೇಡ. ಹೇಳ್ತೀನಿ. ಊರು ಗೊತ್ತಿಲ್ಲದ್ದು ಒಂಟಿ ಬಂದ್ ಬಿಡ್ತವೆ'' ದೊಡ್ಡ ಕಣ್ಣು ಮಾಡಿದ. ನಾನು ಸುಮ್ಮನಾದೆ.<br />
ದೊಡ್ಡ ದೊಡ್ಡ ಗಾಡಿಗಳು., ಕಟ್ಟಡಗಳು, ಜನಜಂಗುಳಿ, ಫ್ಲೈ ಓವರ್ಗಳು, ಇನ್ನೊಂದೆಡೆ ಧೂಳು, ಗೋಡೆಗೆ ಉಚ್ಚೆ ಹೊತ್ಯೋರು, ಬೀದಿ ಬದಿಯಲ್ಲೇ ಮಲಗಿ ಎದ್ದೇಳುತ್ತಿರುವವರು, ಬೀದಿ ಗುಡಿಸುವವರು, ತರಕಾರಿ ಮಾರುವವರು, ಚಿಂದಿ ಆಯುವವರು, ಶಿಸ್ತು-ಅಶಿಸ್ತಿನ ಸಿಪಾಯಿಗಳು...ಎಲ್ಲರೂ ಒಟ್ಟಾಗಿ ನನಗೆ ಸ್ವಾಗತ ಕೋರಿದಂತಾಯಿತು.<br />
<b><br /></b>
<b>ಮೆಜೆಸ್ಟಿಕ್...ಕಂಡಕ್ಟರ್ ಕೂಗು. </b><br />
ಎಲ್ಲರೂ ಬ್ಯಾಗ್ ಹೆಗಲಿಗೇರಿಸಿದರು. ನಾನೂ ಕೂಡ.<br />
"ಪ್ಲಾಟ್ ನಂಬರ್ 8, ಬಸ್ ನಂ. 60, ಜಯನಗರ 4ನೇ ಬ್ಲಾಕ್' ಗೆಳತಿ ಕೊಟ್ಟ ವಿಳಾಸ.<br />
ಮತ್ತೊಂದು ಬಸ್ ಹತ್ತಿದೆ. ಗಿಜಿಬಿಜಿ ಜನರು. ಅರ್ಧ ಗಂಟೆ ದಾರಿ. ಇಳಿಯುವ ಜಾಗ ಬಂತು.<br />
<br />
*****<br />
ಎದೆಯೊಳಗಿದ್ದ ಬೆಚ್ಚಗಿನ ಕನಸುಗಳಿಗೆ ಹೊರಬರುವ ತವಕ. ನನಗೆ ಕನಸುಗಳನ್ನು ಕಸುವಾಗಿಸುವ ಬಯಕೆ. ಬಯಲು ಹುಡುಕುತ್ತಾ ಮುಂದಡಿ ಇಟ್ಟೆ.<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com1tag:blogger.com,1999:blog-3759631957739186729.post-54873011785968994302013-04-04T22:25:00.003-07:002013-04-04T22:25:45.861-07:00ಭಾವಕ್ಕೆ ದಕ್ಕಿದ ಪ್ರಸಂಗಗಳು--ಭಾಗ-2<div dir="ltr" style="text-align: left;" trbidi="on">
<br />
<b>ಅಮ್ಮನ ದೇವರಮೂಲೆ </b><br />
ಅಂದು ನಮಗಿಬ್ಬರಿಗೆ ಜೋರು ಜ್ವರ. ಅಮ್ಮ ಇಬ್ಬರನ್ನೂ ನಿಲ್ಲಿಸಿ ದೃಷ್ಟಿ ತೆಗೆದಳು. ದೃಷ್ಟಿ ತೆಗೆದ ಕಡ್ಡಿಗೆ ಬೆಂಕಿ ಹಚ್ಚಿದಾಗ ಪಟಪಟ ಎಂದು ಸದ್ದು ಮಾಡಿತು.<br />
ಅಮ್ಮ ಬಂದು ಹೇಳಿದಳು,"ನೋಡಿ ಇಬ್ರಿಗೂ ದೃಷ್ಟಿ ಬಿದ್ದಿದೆ. ಅದಕ್ಕೆ ನೋಡು ಕಡ್ಡಿ ಪಟಪಟ ಎಂದು ಉರಿಯತೊಡಗಿತು'' ಎಂದು. ಇಬ್ಬರಿಗೂ ತುಟಿಯಂಚಿನಲ್ಲಿ ನಗು. ವೈದ್ಯರಿಗೆ ಕೊಟ್ಟ ದುಡ್ಡು ವೇಸ್ಟ್ ಆಯಿತಲ್ಲಾ...ಅಂಥ ಮನಸ್ಸಲ್ಲಿ.<br />
ಮರುದಿನ ಬೆಳಿಗೆದ್ದು ನೋಡಿದರೆ ಅಡುಗೆ ಮನೇಲಿ ಪಾತ್ರೆ ತೊಳೆಯುವ ಸಿಂಕ್ ನ ಪಕ್ಕ ಹಿತ್ತಾಳೆ ಚೊಂಬಲ್ಲಿ ನೀರು, ನೀರ ಮೇಲೆ ತುಳಸಿ ದಳಗಳು. ನಾವಿಬ್ಬರೂ ಕಾಫಿ ಕುಡಿದು ಲೋಟ ತೊಳೆಯಲು ಹೋದರೆ,<br />
"ಅಲ್ಲಿ ಮುಸುರೆ ಮಾಡಬೇಡಿ. ಅದು ದೇವರ ಮೂಲೆ ಅಂತೆ. ಅಲ್ಲಿ ನೀರಿಟ್ಟರೆ ಆರೋಗ್ಯ ಚೆನ್ನಾಗಿರುತ್ತೆ ಅಂತೆ'' ಅಮ್ಮನ ಆರ್ಡರ್.<br />
"ಯಾರಮ್ಮಾ ಹೇಳಿದ್ದು ನಿಂಗೆ?"<br />
"ನನ್ನ ವಾಕಿಂಗ್ ಫ್ರೆಂಡ್''<br />
"ಅದೇನು ನಿನ್ ಫ್ರೆಂಡ್ ವಾಕಿಂಗ್ ರೂಟ್ ನಿಂದ ಅಡುಗೆಮನೆಗೂ ಬಂದ್ರಾ''<br />
"ಹ್ಲೂಂ..ಅವರಿಗೆ ಜ್ಯೋತಿಷ್ಯ, ವಾಸ್ತು ಎಲ್ಲಾ ಗೊತ್ತಂತೆ. ನಾವು ಓಡಾಡುವ ಬಾಗಿಲು ಬದಲಾಗಬೇಕಂತೆ'<br />
"ಅಮ್ಮಾ...ಅದೇನಿದ್ರೂ ವಾಕಿಂಗ್ ರೂಟ್ ಗೆ ಅಂದುಬಿಡು'' ಎಂದು ನನ್ನವ ಗದರಿದ. ಅಮ್ಮನ ಮುಖ ಸಣ್ಣಗಾಯಿತು.<br />
ಆದರೆ, ಅಡುಗೆಮನೆಯ "ದೇವರ ಮೂಲೆ''ಯಲ್ಲಿ ಇಂದಿಗೂ ಚೊಂಬು ನೀರು ತಪ್ಪಿಲ್ಲ. ಅಲ್ಲಿ ಮುಸುರೆ ಪಾತ್ರೆಗಳನ್ನು ತೊಳೆಯುವಾಗಿಲ್ಲ. ಹಾಗಾಗಿ, ಮನೆಗೆಲಸದವಳಿಗೆ ದಿನಾ ಬೀಳುವ ಪಾತ್ರೆಗಳು ಹೆಚ್ಚಾಗುತ್ತಿವೆ. ಅವಳು "ಪಾತ್ರೆಗಳು ಜಾಸ್ತಿಯಾಗುತ್ತಿವೆ. ಸಂಬಳ ಜಾಸ್ತಿ ಕೊಡಿ'' ಎಂದು ರಚ್ಚೆ ಹಿಡಿದಿದ್ದಾಳೆ.<br />
*********<br />
<b>ಬಣ್ಣದ ನಾಚಿಕೆ</b><br />
<br />
ಅಂದು ನನ್ನೊಳಗೆ ಮೊಗ್ಗು ಮಲ್ಲಿಗೆ ಬಿರಿದ ಖುಷಿ. ಅಲ್ಲಿಯವರೆಗೆ ನಾಚಿಕೆ ಏನೂಂತ ಗೊತ್ತಿರಲಿಲ್ಲ. ಆದರೆ, ಅಂದು ಮಾತ್ರ ಸುಮ್ಮ-ಸುಮ್ಮನೆ ನಾಚಿಕೊಂಡಿದ್ದೆ. ಕಾರಣಗಳನ್ನು ಕೇಳಿದರೆ ಉತ್ತರ "ಗೊತ್ತಿಲ್ಲ''. ಆದರೆ ಮಾತು, ಮಾತಿಗೂ ಕೆನ್ನೆಯಲ್ಲಿ ...ಸೂರ್ಯೋದಯವಾಗುತ್ತಿತ್ತು,<br />
ಮೈಯಲ್ಲಿ ಅದೇನೋ ಪುಳಕ... ಹೆಣ್ತನ ನನ್ನೊಳಗೆ ಹಡೆದಂತೆ. ತಲೆಯೊಳಗೆ ಕದ್ದು ಕೇಳಿದ ಸೀತಕ್ಕನ ಮಗಳು ದೊಡ್ಡವಳಾದ ಕತೆ...<br />
ಎಲ್ಲವೂ ಸೇರಿ ಪಾದವನ್ನೇ ದಿಟ್ಟಿಸುತ್ತಿದ್ದ ಕಣ್ಣುಗಳಲ್ಲಿ ನಾಚಿಕೆ ಬಣ್ಣ ಪಡೆದಿತ್ತು...ಸುಮ್ಮನೆ ನಾಚಿಕೆ...ಕಾರಣಗಳೇ ಇಲ್ಲದ ನಾಚಿಕೆ.<br />
ಅಂದು ಅಮ್ಮ ಉದ್ದ ಜಡೆ ಹಾಕಿ ಮಲ್ಲಿಗೆ, ಕೆಂಗುಲಾಬಿ ಮುಡಿಸಿದ್ದಳು. ಜಡೆ ಕೆನ್ನೆಬದಿಯಿಂದ ಕೆಳಗಿಳಿದಿತ್ತು...ಜಡೆಯ ತುದಿಯಲ್ಲಿ ಆಡುವ ನನ್ನ ಕಿರುಬೆರಳುಗಳಿಗೂ ನಾಚಿಕೆಯ ಹಂಗು. ಥತ್, ಬೆರಳನ್ನೂ ಬಿಡಲಿಲ್ಲ ನಾಚಿಕೆ! ವಾರದ ನಂತರ ಶಾಲೆಗೆ ಹೋಗಿದ್ದೆ. ಅಮ್ಮ ಕರೆದುಕೊಂಡು ಹೋಗಿ ಬಿಟ್ಟುಬಂದಿದ್ದಳು. "ಏಕೆ ರಜೆ'' ಎನ್ನುವುದಕ್ಕೆ ಅಮ್ಮನೇ ಹೆಡ್ ಮಾಸ್ತರ್ ಗೆ ತಿಳಿಸಿದ್ದಳು. ಆದರೆ, ಮುಡಿತುಂಬಾ ಮುಡಿದ ಘಮ್ಮನೆನ್ನುವ ಮಲ್ಲಿಗೆ ನೋಡಿ ಮೇಷ್ಟ್ರು ತರಗತಿಯಲ್ಲಿ ಕಿಸಕ್ಕನೆ ನಕ್ಕಾಗ ನನ್ನ ಕೆನ್ನೆಯಲ್ಲಿ ಹೋಳಿಯ ರಂಗಿನಾಟ!...ಥತ್...ಹಾಳು ನಾಚಿಕೆ...ಇಲ್ಲಿಯವರೆಗೆ ಇಲ್ಲದ್ದು ಈಗ್ಯಾಕೆ ಬಂತು? ಸಣ್ಣದೊಂದು ಹುಸಿಮುನಿಸು ನಾಚಿಕೆ ಮೇಲೆ!<br />
ನಾಚಿಕೆ...ನಾಚಿಕೆ...ನಾಚಿಕೆ..ನನ್ನ ನಾನೇ ಮುಟ್ಟಿ ನೋಡಿಕೊಂಡು ಖುಷಿಪಡವಾಗಲೂ ಸುಮ್ಮ-ಸುಮ್ಮನೆ ನಾಚಿಕೆ."ನೀನು ದೊಡ್ಡವಳಾಗಿದ್ದೀಯಾ'' ಶಾಲೆಗೆ ಹೊರಡುವಾಗ ಅಜ್ಹಿಯ ಹಿತನುಡಿ ಕೇಳಿದಾಗಲೂ ನನ್ನೊಳಗೊಂದು ಕಿರುನಾಚಿಕೆ. ಬೇಡ, ಬೇಡ ಎಂದರೂ ನನ್ನ ಬಳಿ ಸರಿದಿತ್ತು ನಾಚಿಕೆ. ನನ್ನ ಕಣ್ಣಲ್ಲಿ, ಕಣ್ಣುರೆಪ್ಪೆಯಲ್ಲಿ, ನಗೆಮಾತಿನಲ್ಲಿ, ಅಂಗೈ&ಪಾದಗಳ ಬೆರಳ ತುದಿಯಲ್ಲಿ, ಕೆನ್ನೆಯಲ್ಲಿ...ಎಲ್ಲಾ ಕಡೆಯೂ ನಾಚಿಕೆಯ ಚಿತ್ತಾರ.<br />
<br />
********<br />
<b>ನಾಲ್ಕನೇ ಪುಟದ ಭವಿಷ್ಯ</b><br />
ಬೆಳಿಗ್ಗೆದ್ದ ತಕ್ಷಣ ಅಮ್ಮಂಗೆ ಪತ್ರಿಕೆ ಓದೋ ಅಭ್ಯಾಸ. ನನಗಿಂತ ಮೊದಲೇ ಏಳುವ ಅಮ್ಮ ಮೊದಲು ಹೊಸಿಲು ಗುಡಿಸಿ ರಂಗೋಲಿ ಹಾಕಿ ನಮ್ಮನೆಗೆ ಬರುವ ಪತ್ರಿಕೆಯ ನಾಲ್ಕನೇ ಪುಟವನ್ನು ತೆರೆಯುವಳು!. ಅಲ್ಲಿ ನೋಡುವುದು ದಿನಭವಿಷ್ಯ. ನಾವು ಎದ್ದ ತಕ್ಷಣ ಭವಿಷ್ಯವನ್ನು ಜ್ಯೋತಿಷಿಯಂತೆ ಬಡಬಡ ಎಂದು ಹೇಳೋಳು. ಒಂದು ದಿನ ನನ್ನವನ ಭವಿಷ್ಯ ಹೀಗಿತ್ತು.<br />
"ಈ ದಿನವನ್ನು ನೀವು ಸಂತೋಷವಾಗಿ ಕಳೆಯಲಿದ್ದೀರಿ. ಮನೆಯಲ್ಲಿ ಎಲ್ಲರಿಗೂ ಶುಭಸುದ್ದಿ ನೀಡುವಿರಿ. ನಿಮ್ಮ ಬದುಕಿನಲ್ಲಿ ಹೊಸ ವ್ಯಕ್ತಿಯೊಬ್ಬರ ಪ್ರವೇಶವಾಗಲಿದೆ...'' ಸೋಫಾ ಮೇಲೆ ಕುಳಿತ ನನ್ನವನ ಮುಖದಲ್ಲಿ ಕಳ್ಳನಗು. ಯಾಕೋ ಅಮ್ಮ ಓದುವ ಧಾಟಿ ಕೇಳಿ ನನ್ನೆದೆ ಢವಢವ. ಅಮ್ಮನ ಮುಖದಲ್ಲಿ ಸಂತೋಷದ ಹೊಂಬೆಳಕು, ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಖುಷಿ.<br />
ಸ್ವಲ್ಪವೂ ನಗದ ನನ್ನ ನೋಡಿ ಅಮ್ಮನಿಗೆ ಅಚ್ಚರಿ. "ಯಾಕಮ್ಮಾ, ಒಳ್ಳೆಯ ಭವಿಷ್ಯ ಅಲ್ವೇನೇ? ಒಳ್ಳೆ ಬೆಪ್ಪು ತಕ್ಕಡಿ ತರ ನಿಂತಿದ್ದಿ. ಹೊಸ ವ್ಯಕ್ತಿಯ ಪ್ರವೇಶ ಅಂದ್ರೆ ನಮ್ಮನೆಗೆ ಹೊಸ ಕಂದಮ್ಮ ಬರುತ್ತೆ ಅಂತ. ಪೆದ್ದಿ ಕಣೇ ನೀನು'' ಎಂದಳು. ನನ್ನ ಸಂತೈಸುತ್ತಾ ನನ್ನವನಂದ<br />
"ನಿನ್ ಬಿಟ್ಟು ಯಾವ ಹುಡುಗಿನೂ ಕಣ್ಣೆತ್ತಿ ನೋಡದವನು ನಿನ್ ಗಂಡ ಎಂದು ಹೆಮ್ಮೆ ಪಡು''. ಅಮ್ಮನೆಂದಳು "ಈ ವಯಸ್ಸಲ್ಲಿ ನಾನು ಟ್ಯೂಬ್ ಲೈಟ್. ಈ ಹುಡುಗ್ರ ಯೋಚನೆಗಳೇ ಅರ್ಥವಾಗೋಲ್ಲ''.<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com1tag:blogger.com,1999:blog-3759631957739186729.post-821686135195100162013-03-29T00:05:00.003-07:002013-03-29T00:05:15.485-07:00ಭಾವಕ್ಕೆ ದಕ್ಕಿದ ಪ್ರಸಂಗಗಳು<div dir="ltr" style="text-align: left;" trbidi="on">
<br />
<b>ಓಲೆ ಪ್ರೀತಿ</b><br />
ಕೆ.ಆರ್. ಮಾರ್ಕೆಟ್ ನಿಂದ ಬಸ್ ಹತ್ತಿದೆ. ಹುಡುಗಿಯೊಬ್ಬಳು ಪಕ್ಕದಲ್ಲೇ ಬಂದು ಕುಳಿತಳು. ಒಂದೇ ಸಮನೆ ನನ್ನ ಕಿವಿಗಳನ್ನು ನೋಡುತ್ತಾ ಕುಳಿತಿದ್ದಳು.<br />
ಅವಳು ಇಳಿಯುವ ಮೊದಲು "ಮೇಡಂ ನಿಮ್ಮ ಕಿವಿಯೋಲೆ ತುಂಬಾ ಚೆಂದ ಇದೆ'' ಅಂದಳು. "ಥ್ಯಾಂಕ್ಸ್'' ಅಂದೆ.<br />
"ಏನು ಓದುತ್ತಿದ್ದೀಯಾ?'' ಕೇಳಿದೆ.<br />
"ಪ್ರಥಮ ಪಿಯುಸಿ''<br />
"ಯಾವ ಸ್ಕೂಲ್''<br />
"ಇಲ್ಲೆ ಹತ್ತಿರದ ಕಾಲೇಜು''<br />
"ನಿನ್ನ ಹೆಸರು?''<br />
"ಆಯೆಷಾ'' ಎಂದು ನಕ್ಕಳು.<br />
ಮತ್ತೆ ಅವಳಿಂದಲೇ ಪ್ರಶ್ನೆ "ನೀವು ಎಲ್ಲಿ ತಕ್ಕೊಂಡೀರಿ ಓಲೆನಾ?''<br />
''ಮಲ್ಲೇಶ್ವರಂ ಫುಟ್ ಪಾತ್''<br />
"ಎಷ್ಟು ರೂಪಾಯಿ?''<br />
"ನಲವತ್ತು''<br />
""ವಾಹ್, ಕಡಿಮೆ ರೇಟು. ಬಹಳ ಚೆನ್ನಾಗಿದೆ. ತುಂಬಾ ಚೆಂದ ಕಾಣಿಸುತ್ತೆ'' ಎಂದು ನಗುತ್ತಾ ಇಳಿದುಹೋದಳು. ನನಗೂ ಅವಳ ಕಿವಿಯೋಲೆ ಹೇಗಿದೆ ಎನ್ನುವ ತವಕ...ಆದರೆ, ಅದು ಕಾಣಿಸಲೇ ಇಲ್ಲ. ಏಕೆಂದರೆ,ಅವಳು ಬುರ್ಖಾ ಧರಿಸಿದ್ದಳು!.<br />
***************<br />
<b>ಅವನ ಬೈಟು ಕಾಫಿ</b><br />
ರಾತ್ರಿ ಎಂಟರ ಹೊತ್ತು. ಅಂದು ನಮಗಿಬ್ಬರಿಗೆ ಜಗಳವಾಗಿತ್ತು. ಇಬ್ಬರೂ ಬಿಡಲಿಲ್ಲ. ಮಾತಿಗೆ-ಮಾತು. ಒಂದು ರೀತಿಯಲ್ಲಿ ಕುರುಕ್ಷೇತ್ರ. ಕೆನ್ನೆ ಮೇಲೆ ಬಿತ್ತು ಅವನ ಕೈ. "ನಮ್ಮಮ್ಮನೂ ನಂಗೆ ಹೊಡೆದಿಲ್ಲ. ನೀನ್ಯಾಕೆ ಕೆನ್ನೆಗೆ ಹೊಡೆದೆ?' ಎಂದು ಅಳುತ್ತಾ ಕೇಳಿದೆ, "ಕೆನ್ನೆಗಲ್ಲದೆ ಇನ್ನೆಲ್ಲಿ ಹೊಡೀಬೇಕು?' ಎಂದ ಆತ. ನನ್ನ ಸಿಟ್ಟು ಇನ್ನಷ್ಟು ಹೆಚ್ಚಿತು. "ನೋಡು ನಿಂಗೆ ಡಿವೋರ್ಸ್ ಕೊಟ್ಟುಬಿಡ್ತೀನಿ...ಬೇಡ ನೀನು ನಂಗೆ'' ಎಂದೆ. ಒಂದರ್ಧ ಗಂಟೆಯಲ್ಲಿ ಹತ್ತು-ಹದಿನೈದು ಸಲ ಡಿವೋರ್ಸ್ ರಿಪೀಟ್ ಆಯ್ತು. ಅದಕ್ಕೆ ಆತ ಹೇಳಿದ. "ಅರೆರೆ, ಈಗ ರಾತ್ರಿ. ಲಾಯರ್ ಗಳು ಇರಲ್ಲಮ್ಮ. ನಾಳೆ ಬೆಳಿಗ್ಗೆ ಡಿವೋರ್ಸ್ ಕೊಡುವಿಯಂತೆ. ಈಗ ನಿದ್ದೆ ಮಾಡು'' ಎಂದ. ಅವನ ಮಾತು ಕೇಳಿ ನಗು ಬಂದರೂ ತೋರಿಸಿಕೊಳ್ಳದೆ, ಹೊದಿಕೆ ಹೊದ್ದು ನಿದ್ದೆಗೆ ಜಾರಿದೆ. ಬೆಳಿಗ್ಗೆ ನಾನು ಎದ್ದಾಗ ಆತ ನನ್ನೆದುರು ಕಾಫಿ ಹಿಡಿದು ನಿಂತಿದ್ದ. "ಡಿವೋರ್ಸ್ ಕೊಡ್ತಿಯಲ್ಲ...ಈವರೆಗೆ ನಿಂಗೆ ಕಾಫಿನೂ ಮಾಡಿಕೊಟ್ಟಿಲ್ಲ. ಅದ್ಕೆ ಇವತ್ತು ಕಾಫಿ ಮಾಡಿದ್ದೀನಿ...ಪ್ಲೀಸ್ ಬೈ ಟು ಕಾಫಿ'' ಎಂದಾಗ ನಗುತ್ತಲೇ ಅಡುಗೆಮನೆಗೆ ಓಡಿದೆ!<br />
***************<br />
<b>ಗಾಳಿಮರದ ವಿಳಾಸ ನಾಪತ್ತೆ</b><br />
ಆ ಗಾಳಿಮರ ನನಗೆ ಭಾಳ ಇಷ್ಟ. ಏಕಾಂತ ಕಲಿಸಿದ್ದು ಅದೇ ಗಾಳಿಮರ, ಬರೆಯಲು ಕಲಿಸಿದ್ದು ಅದೇ ಗಾಳಿಮರ, ಖುಷಿ-ದುಃಖಗಳಿಗೆ ಸಾಥ್ ನೀಡಿದ್ದು ಅದೇ ಗಾಳಿಮರ. ಬರೋಬ್ಬರಿ ಐದು ವರ್ಷಗಳ ಕಾಲ ಗಾಳಿಮರದೊಂದಿಗೆ ನಂಟು. ಮುಂಜಾವಿನ ಹೊತ್ತು ಬೇಗ ಎದ್ದು ಓದಲು ಕುಳಿತುಕೊಳ್ಳುವುದು ಅದೇ ಗಾಳಿಮರದಡಿ, ಸಂಜೆ ಕಾಲೇಜಿನಿಂದ ಬಂದ ತಕ್ಷಣ ಮತ್ತೆ ಪೆನ್ನು, ಪುಸ್ತಕಗಳ ಜೊತೆ ಕೂರುವುದು ಅದೇ ಗಾಳಿಮರದಡಿ. ಅದೆಷ್ಟೋ ಕವನಗಳು, ಕತೆಗಳು, ಪ್ರೇಮಪತ್ರಗಳು ,..ಎಲ್ಲವನ್ನೂ ಗೀಚಿದ್ದು ಅದೇ ಗಾಳಿಮರದಡಿ. ಮನೆಗೆ, ಸ್ನೇಹಿತರಿಗೆ ಎಲ್ಲರಿಗೂ ಪತ್ರ ಬರೆದಿದ್ದು ಅದೇ ಗಾಳಿಮರದಡಿ. ಅದಿರಲಿ, ಐದು ವರ್ಷಗಳ ಕಾಲ ವರ್ಷಕ್ಕೆರಡು ಬಾರಿ ನಡೆದ ಮಹಾ ಪರೀಕ್ಷೆಗಳಿಗೆ ಓದಿ ಓದಿ ಕಲಿತಿದ್ದು ಅದೇ ಗಾಳಿಮರದಡಿಯಲ್ಲಿ. ಮೊದಲ ಬಾರಿ ಆ ಮರದಡಿಯಲ್ಲಿ ಕುಳಿತು ನಿಟ್ಟುಸಿರುಬಿಟ್ಟಾಗ ಅದಿನ್ನೂ ಸಣ್ಣ ಗಿಡವಾಗಿದ್ದು, ಐದು ವರ್ಷಗಳ ಬಳಿಕ ಅದು ಬಲಿತು ಮರವಾಗಿತ್ತು, ವಿಶಾಲವಾಗಿ ಹರಡಿತ್ತು. ನನ್ನೊಬ್ಬಳಿಗೆ ಮಾತ್ರ ಹಲವಾರು ಮಂದಿಗೆ ನೆರಳು ನೀಡುತ್ತಿತ್ತು. ಮೊನ್ನೆ ಮೊನ್ನೆ ಮತ್ತೆ ಗಾಳಿಮರ ನೋಡಲು ಹೋಗಿದ್ದೆ...ಬರೋಬ್ಬರಿ ಏಳು ವರ್ಷಗಳ ಬಳಿಕ. ಆ ನನ್ನ ಪ್ರೀತಿಯ ಗಾಳಿಮರದ ವಿಳಾಸವೇ ಇರಲಿಲ್ಲ. ಅಲ್ಲೊಂದು ಅಂಗಡಿ ಇತ್ತು. ಅಲ್ಲಿ ಬಂದು ಬೀಡಿ-ಸಿಗರೇಟು ಸೇದುವ, ತರಕಾರಿ, ಅಕ್ಕಿ, ಸಾಮಾನು ಕೊಳ್ಳುವ ಮಂದಿ...ಯಾರಿಗೂ ಗೊತ್ತಿಲ್ಲ ಆ ಗಾಳಿಮರದ ವಿಳಾಸ!<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com2tag:blogger.com,1999:blog-3759631957739186729.post-6220219474812416292013-03-25T23:28:00.002-07:002013-03-25T23:28:15.065-07:00ಗೌಡ್ರ ಬೋರ್ ವೆಲ್ ಮತ್ತು ನಮ್ಮನೆ ಬಾವಿ<div dir="ltr" style="text-align: left;" trbidi="on">
<br />
ಗೌಡ್ರ ಮನೆಗೆ ಬೋರ್ ವೆಲ್ ಬಂತಂತೆ, ಇನ್ನೇನೋ ಬೇಸಿಗೆ ಬಿರುಸಾಗಿದೆ. ನಮ್ಮ ಬಾವೀಲಿ ನೀರು ಬತ್ತುತ್ತಾನೇ ಇರ್ಲಿಲ್ಲ. ಇನ್ನು ಈ ಮಂದಿ ಬೋರ್ ವೆಲ್ ಹಾಕಿಸಿದ್ರೆ ಅದ್ಯಾರ ಮನೆ ಮುಂದೆ ಬಿಂದಿಗೆ ಹಿಡಿಬೇಕೋ...ಅಮ್ಮ ಗೊಣಗುತ್ತಾ ಜಗುಲಿ ಮೇಲೆ ಕುಳಿತಿದ್ದಳು. ನನಗಿನ್ನೂ ಚಿಕ್ಕ ವಯಸ್ಸು. ಬೋರ್ ವೆಲ್ ಬರುವುದಕ್ಕೂ, ನಮ್ಮನೆ ಬಾವಿ ಬತ್ತೋದಕ್ಕೂ ಅದೆಂಥ ಸಂಬಂಧ ಉಂಟು? ಎಂದು ಕೇಳಿದೆ. "ಉಂಟು..ಸಂಬಂಧ... ನೀರು ಸಿಗೋತನಕ ಕೊರೀತಾರೆ..ಅಂತರ್ಜಲ ಬತ್ತಿಹೋಗುತ್ತೆ. ಆಗ ಸುತ್ತಮುತ್ತಲ ಬಾವಿಗಳ ನೀರು ಬತ್ತುತ್ತೆ' ಎಂದು ಆಕ್ರೋಶದಿಂದ ಹೇಳುತ್ತಿದ್ದಳು ಅಮ್ಮ. ಅಮ್ಮ ಹುಟ್ಟಿದಾಗಿನಿಂದ ನಮ್ಮನೆ ಬಾವಿ ಬತ್ತುವುದನ್ನೇ ನೋಡಿರಲಿಲ್ಲವಂತೆ. ಬರೀ ಆರು ಅಡಿಯಲ್ಲಿ ನೀರು. ವರ್ಷದ ಮೂರು ಕಾಲದಲ್ಲಿಯೂ ನೀರಿಗೆ ಬರವಿಲ್ಲ. ಬೇಸಿಗೆಯಲ್ಲಿ ಕೂಡ ಕುಡಿಯಲು, ದನ-ಕರುಗಳಿಗೆ, ತೆಂಗು-ಕಂಗುಗಳಿಗೆ ನೀರಿನ ಕೊರತೆ ಇರಲಿಲ್ಲ.<br />
<br />
ದಿಢೀರನೆ ಗೌಡ್ರ ಮನೆಗೆ ಬೋರ್ ವೆಲ್ ಬಂದಿದ್ದು ಅಮ್ಮನ ತಲೆ ಚಿಟ್ಟು ಹಿಡಿಸಿತು. "ಹಾಳಾದವು...ಯಾರ ಹೊಟ್ಟೆಗೋ ಕನ್ನ ಹಾಕ್ತಾರೆ'' ಅಂತ ಬೈತಾನೆ ಇದ್ಳು. ಬೋರ್ ವೆಲ್ ಬಂದ ದಿನ ಅಮ್ಮ ನಿದ್ದೆ ಮಾಡಿರಲಿಲ್ಲ. ಗೌಡ್ರ ಬಳಿ ಹೋಗಿ "ನೀವು ಬೋರ್ ವೆಲ್ ಹಾಕಿದ್ರೆ ನಮ್ಮ ಬಾವಿ ಬತ್ತುತ್ತೆ'' ಎಂದು ಹೇಳಕ್ಕಾಗುತ್ತೆ? ಅದೂ ಇಲ್ಲ. ಅಮ್ಮಂಗೆ ಹೇಳಿದೆ "ನಾವು ಇನ್ನೊಂದು ಬಾವಿ ತೋಡೋಣ. ಆಗ ಎರಡು ಬಾವಿಗಳಲ್ಲಿ ನೀರಿರುತ್ತೆ ಅಲ್ವಾ?'' . ಅಮ್ಮಂಗೆ ಸಿಟ್ಟು ಬಂದು "ಸುಮ್ನಿರು..ಮಧ್ಯೆ ಬಾಯಿ ಹಾಕ್ಬೇಡ. ಎಲ್ಲಿ ತೋಡಿದ್ರೂ ಒಂದೇ...ಆದ್ರೆ ರಾಮಣ್ಣ ಜೋಯಿಸರು ಈಗಿರುವ ಬಾವಿ ನೀರನ್ನೇ ಕುಡಿಬೇಕು...'' ಎಂದು ಅದು-ಇದು, ದಿಕ್ಕು-ದಿಸೆ ಅಂತ ಮಾತಾಡತೊಡಗಿದಳು. ಅಮ್ಮನ ಸಾತ್ವಿಕ ಸಿಟ್ಟು ನನಗಾಗ ಅರ್ಥವಾಗಲಿಲ್ಲ.<br />
<br />
<br />
ಮರುದಿನ ಬೋರ್ ವೆಲ್ ತೋಡುವ ಯಂತ್ರಗಳು ಗೌಡ್ರ ತೋಟಕ್ಕೆ ಬಂದವು. ನಮ್ಮೂರಿಗೆ ಅದೇ ಮೊದಲ ಬೋರ್ ವೆಲ್. ಹಾಗಾಗಿ, ಸುತ್ತಮುತ್ತಲಿನ ಎಲ್ಲರೂ ಬೋರ್ ವೆಲ್ ನೋಡಲು ಬಂದರು. ಮಕ್ಕಳಂತೂ ರಚ್ಚೆ ಹಿಡಿದು ಶಾಲೆಗೆ ಚಕ್ಕರ್ ಹಾಕಿ ಬೋರ್ ವೆಲ್ ತೋಡುವುದನ್ನು ನೋಡಲು ಬಂದಿದ್ದರು. ನಾನೂ ಅಮ್ಮನ ಸಿಟ್ಟನ್ನೂ ಕೇರ್ ಮಾಡದೆ ಗೌಡ್ರ ಮನೆಯತ್ತ ಓಡಿದೆ. ಏನು ಸೌಂಡ್...ಗುರ್...ಬುರ್...ಬೆಳಿಗ್ಗೆಯಿಂದ ಸಂಜೆ ತನಕ ಕೊರೆತಿದ್ದೇ ಕೊರೆದಿದ್ದು...ಒಂದೇ ಸಮನೆ ಅದೆಷ್ಟೋ ಎತ್ತರಕ್ಕೆ ನೀರಿನ ಬುಗ್ಗೆಗಳು ಚಿಮ್ಮತೊಡಗಿದವು. ಗೌಡ್ರ ಮುಖ ಖುಷಿಯಿಂದ ತಾವರೆಯಂತೆ ಅರಳುತ್ತಿತ್ತು.<br />
<br />
<br />
ನೀರಿನ ಚಿಮ್ಮುವಿನಾಟ ನೋಡಿ ಜಿಂಕೆಯಂತೆ ನೆಗೆಯುತ್ತಾ ಮನೆಗೆ ಬಂದೆ. ಅಮ್ಮನ ಕಣ್ಣುಗಳು ಕೆಂಪಾಗಿ, ಮುಖ ಬಾಡಿಹೋಗಿತ್ತು. ರಾತ್ರಿ ಅನ್ನಕ್ಕೆ ಅಕ್ಕಿ ಬೀಸುತ್ತಾ ಕುಳಿತಿದ್ದಳು. "ಅಮ್ಮಾ ಮಾತಾಡು..'' ಎಂದೆ. "ಬೇಸಿಗೆ, ನಮ್ಮನೆ ಬಾವಿ ಬತ್ತಿದ್ರೆ ಯಾರ ಮನೆಗೆ ಹೋಗಿ ನೀರಿಗಾಗಿ ಬೇಡಲಿ'' ಎನ್ನುತ್ತಾ ದೇವರ ಮನೆಗೆ ಹೋಗಿ ಒಂದು ರೂಪಾಯಿ ನಾಣ್ಯವನ್ನು ಮನೆದೇವರು ಕಲ್ಲುರ್ಟಿಗೆ ಹರಕೆ ಇಟ್ಟು "ಬತ್ತದಿರಲಿ ಬಾವಿ'' ಎಂದಳು.<br />
ಅಮ್ಮ ನಿತ್ಯ ದೀಪ ಹಚ್ಚುವಾಗ ನೀರಿಗಾಗಿ ಬೇಡೋದನ್ನು ಮರೆಯುತ್ತಿರಲಿಲ್ಲ. ಊರ ಸುತ್ತಮುತ್ತ ಇನ್ನೂ ಒಂದೆರಡು ಬೋರ್ ವೆಲ್ ಗಳು ಬಂದವು. ನಮ್ಮನೆ ಬಾವಿ ಬತ್ತತೊಡಗಿತು. ಬೇಸಿಗೆ ಬಂದ ತಕ್ಷಣ ಅಮ್ಮ "ಯಾರ ಮುಂದೆಯೂ ಬಿಂದಿಗೆ ಹಿಡಿದು ಬೇಡಲಾರೆ'' ಎಂದು "ಬಾವಿನ ಇನ್ನಷ್ಟು ಅಗೆಯುವ' ಕೆಲಸ ಮಾಡುತ್ತಾಳೆ...ಈಗಲೂ ಮಾಡುತ್ತಳೇ ಇದ್ದಾಳೆ...ಬರೀ "ಕುಡಿಯುವ ನೀರಿಗಾಗಿ''.<br />
<br />
<br />
ಬೆಂಗಳೂರಿಂದ ಫೋನಾಯಿಸಿ ಕೇಳಿದ್ರೆ ಹೇಳುತ್ತಾಳೆ "ನಿಮ್ಮೂರಲ್ಲಿ ನೀರು ಉಂಟಾ? ನೋಡು ಮೊನ್ನೆ ಮೊನ್ನೆ ಬಾವಿ ಹೂಳೆತ್ತುವ ಕೆಲಸ ಮಾಡಿಸಿದೆ. ಅರ್ಧ ಅಡಿ ಹೆಚ್ಚು ಗುಂಡಿ ಮಾಡಲಾಗಿದೆ. ಪರ್ವಾಗಿಲ್ಲ ಕುಡಿಯಲು ನೀರು ಸಿಗುತ್ತದೆ. ಆದರೆ, ದನಕರುಗಳಿಗೆ ನೀರು ಸಿಗಲ್ಲ ಎಂದು ಸಾಕುವುದನ್ನೇ ಬಿಟ್ಟಿದ್ದೇನೆ. ತೆಂಗು, ಬಾಳೆ, ಅಡಿಕೆ ಗಿಡಗಳು ಮಾತ್ರ ಬೇಸಿಗೆಯಲ್ಲಿ ಬಾಡಿಹೋಗುತ್ತಿರುವುದನ್ನು ನೋಡಿ ಹೊಟ್ಟೆ ಉರಿಯುತ್ತಿದೆ. ಮನೆದೇವ್ರ ಕೃಪೆ..ಕುಡಿಯೋಕ್ಕಾದ್ರೂ ನೀರು ಸಿಗುತ್ತೆ'' ಎನ್ನುತ್ತಾಳೆ.<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com1tag:blogger.com,1999:blog-3759631957739186729.post-58104004817864643372013-03-21T03:18:00.004-07:002013-03-21T03:19:14.236-07:00ಅಮೆರಿಕನ್ ಒಬ್ಬನ ಕನಸಿನ ಕಥೆ<div dir="ltr" style="text-align: left;" trbidi="on">
ಬೆಳಿಗ್ಗೆ ಹನ್ನೊಂದರ ಸಮಯ. ಪ್ರತಿನಿತ್ಯ ಬರುವ ಬಸ್ ಅಂದು ನಾನು ಬರುವ ಹೊತ್ತಿಗೆ ಹೋಗಿಬಿಟ್ಟಿತು. ಬಸ್ ನಿಲ್ದಾಣದಲ್ಲಿ ಕಾಯುತ್ತಾ ಕುಳಿತಿದ್ದೆ. ಐವತ್ತು ದಾಟಿದ ಮನುಷ್ಯ ಪಕ್ಕದಲ್ಲೇ ಬಂದು ಕುಳಿತ. ತಲೆಕೂದಲು ಬೆಳ್ಳಿಯಂತೆ ಫಳಫಳ ಎಂದು ಹೊಳೆಯುತ್ತಿತ್ತು. ನೋಡಿದ ತಕ್ಷಣ ಈ ಅಸಾಮಿ ನಮ್ಮ ದೇಶದನಲ್ಲ ಎಂದು ಗೊತ್ತಾಗುತ್ತಿತ್ತು.<br />
<br />
ನಾನು ಸುಮ್ಮನಿದ್ದರೂ ಆತನೇ ಮಾತಿಗೆಳೆದ. "ನಾನು ಶಿವಾಜಿನಗರಕ್ಕೆ ಹೋಗಬೇಕು. ಯಾವ ಬಸ್ನಲ್ಲಿ ಹೋಗಬಹುದು?'' ಎಂದು ಇಂಗ್ಲಿಷ್ನಲ್ಲಿ ಕೇಳಿದ. "ನೀವು ಎರಡು ಬಸ್ ಬದಲಾಯಿಸಬೇಕು. ಇಲ್ಲಿಂದ ನೇರವಾಗಿ ಅಲ್ಲಿಗೆ ಬಸ್ ಇಲ್ಲ'' ಎಂದು<br />
ಅವನಿಗೆ ಬಸ್ಗಳ ನಂಬರ್ ಕೂಡ ಕೊಟ್ಟೆ. ಏಳೆಂಟು ಬಸ್ ಗಳ ನಂಬರನ್ನು ಪುಟ್ಟ ಡೈರಿಯಲ್ಲಿ ನೀಟಾಗಿ ಬರೆದಿಟ್ಟುಕೊಂಡ. ಡೈರಿಯನ್ನು ಜೇಬಿಗಿಳಿಸಿಕೊಂಡು "ಥ್ಯಾಂಕ್ಸ್'' ಅಂದು "ಭಾರತೀಯರು ಎಲ್ಲೇ ಹೋದರೂ ಸುಳ್ಳು ಹೇಳಲ್ಲ, ಹೆಮ್ಮೆಯಾಗುತ್ತದೆ'' ಎಂದು ಖುಷಿಯಿಂದ ಹೇಳಿದ. ಜೊತೆಗೆ ಒಂದು ದಿನ ಮುಂಚೆ ಆತ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಬರುವಾಗ ದಾರಿ ಗೊತ್ತಾಗದೆ ಪರದಾಡಿದ್ದು, ಆಟೋದವನು ಮಾಡಿದ ಸಹಾಯವನ್ನೂ ನೆನಪಿಸಿಕೊಂಡ.<br />
<br />
‘ನೀನು ಭಾರತಕ್ಕೆ ಏಕೆ ಭೇಟಿ ಮಾಡಿರುವೆ?' ಎಂದು ಕೇಳಿದೆ. ನನ್ನ ಪ್ರಶ್ನೆ ಕೊನೆಯಾಗುವ ಮೊದಲೇ ಆತ ಉತ್ತರ ಹೇಳಲು ಶುರುಮಾಡಿದ್ದ. "ನನ್ನ ಹೆಸರು ಸ್ಯಾಮ್. ಯುಎಸ್ಎನಿಂದ ಬಂದಿದ್ದೇನೆ. ಭಾರತಕ್ಕೆ ಇದೇ ಮೊದಲು ಬಂದಿರುವೆ. ಭಾರತ ಸಾಂಸ್ಕೃತಿಕವಾಗಿ ಬಹಳಷ್ಟು ವೈವಿಧ್ಯ ಇರುವ ದೇಶ ಎಂದು ಕೇಳಿದ್ದೆ. ಇತ್ತೀಚೆಗೆ ಒಂದು ಬಾರಿ ಭಾರತದ ಕನಸು ಬಿತ್ತು. ಅದರಲ್ಲೂ ಬೆಂಗಳೂರು ನಗರಕ್ಕೆ ನಾನು ಬಂದಿಳಿದ ಹಾಗೆ ಕನಸು ಬಿತ್ತು. ಹಾಗಾಗಿ, ನನಗೆ ಇಲ್ಲಿಗೆ ಬಂದು ನೋಡಲೇಬೇಕು ಎಂದು ಡಿಸೈಡ್ ಮಾಡಿದೆ'' ಎಂದು ಬಹಳ ಖುಷಿಯಿಂದ ನಗುನಗುತ್ತಲೇ ಹೇಳಿಕೊಂಡ. ನನಗೆ ಅಚ್ಚರಿಯಾಯಿತು. ಕೇವಲ ''ಒಂದು ಕನಸಿನಿಂದಾಗಿ'' ಆತ ಅದೆಷ್ಟೋ ಡಾಲರ್ ಖರ್ಚು ಮಾಡಿ ಭಾರತವನ್ನು ನೋಡಲು ಬಂದ!. ನಾಳಿನ ಬಗ್ಗೆ ಯೋಚನೆ ಮಾಡದೆ ಈ ಕ್ಷಣದ ಜೀವನವನ್ನು ಖುಷಿಯಿಂದ ಕಳೆಯುವುದೆಂದರೆ ಇದೇನಾ ಅನಿಸಿತ್ತು. ಸಣ್ಣದೊಂದು ನಗುವಿನೊಂದಿಗೆ ಆತನಿಗೆ ಮನಸ್ಸಿನಲ್ಲೇ ಸಲಾಂ ಎಂದೆ</div>
ಧರಿತ್ರಿhttp://www.blogger.com/profile/13431094762447988960noreply@blogger.com3tag:blogger.com,1999:blog-3759631957739186729.post-76559214878639819822013-03-21T03:12:00.002-07:002013-03-21T03:14:45.568-07:00ಕದ್ದು ಕೇಳಿದ ದೆವ್ವದ ಕತೆಗಳು<div dir="ltr" style="text-align: left;" trbidi="on">
<br />
ನಾನು ಮಗುವಾಗಿದ್ದಾಗ ನಮ್ಮದು ಅವಿಭಕ್ತ ಕುಟುಂಬ. ಒಂದೇ ಮನೆಯಲ್ಲಿ ಹತ್ತು-ಹದಿನೈದು ಮಂದಿ. ರಾತ್ರಿ ಹೊತ್ತು ದೊಡ್ಡೋರೆಲ್ಲ ಜೊತೆಗೆ ಕುಳಿತು ಊಟ ಮಾಡೋರು. ಮಕ್ಕಳಿಗೆಲ್ಲಾ ಬೇಗ ಊಟ ಹಾಕಿ ಮಲಗಿಸಿಬಿಡೋರು. ಊಟಕ್ಕೆ ಕುಳಿತಾಗ ಮತ್ತು ಊಟದ ಬಳಿಕ ಒಂದಷ್ಟು ಹೊತ್ತು "ಮಕ್ಕಳಿಗೆ ತಿಳಿಯಬಾರದ ವಿಷಯಗಳನ್ನು'' ದೊಡ್ಡೋರೆಲ್ಲ ಮಾತಾಡೋರು. ಆ ಲಿಸ್ಟ್ ನಲ್ಲಿ ದೆವ್ವದ ಕತೆಯೂ ಇತ್ತು. ಮಕ್ಕಳೆಲ್ಲಾ ಮಲಗಿದ ಮೇಲೆ ಅಜ್ಜಿ ಎಲ್ಲರಿಗೂ ಬಡಿಸಿ ದೆವ್ವದ ಕತೆ ಶುರುಮಾಡೋಳು. ನಾವೆಲ್ಲ ಮುಸುಕು ಹೊದ್ದು ಮಲಗುತ್ತಿದ್ದೇವು. ಆದರೆ, ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಹೊದಿಕೆಯೊಳಗೆ ಕಣ್ಣುಬಿಟ್ಟುಕೊಂಡು ಹಾಗೇ ದೆವ್ವದ ಕತೆಗಳನ್ನು ಕೇಳುತ್ತಿದ್ದೆ. ಆದರೆ, ಹೆಚ್ಚಿನ ಸಮಯದಲ್ಲಿ ಈ ದೆವ್ವದ ಕತೆಗಳು ನನ್ನ ನಿದ್ದೆಯನ್ನು ಕಸಿದುಕೊಂಡಿದ್ದಂತೂ ನಿಜ. ಇದರಲ್ಲಿ ಆಯ್ದ ಮೂರು ಕತೆಗಳು ಇಲ್ಲಿವೆ.<br />
<br />
********<br />
ನಮ್ಮಜ್ಜ ತಾಳೆಮರದಿಂದ ಶೇಂದಿ ತೆಗೆಯುತ್ತಿದ್ದ. ಮುಂಜಾನೆಯಿಂದ ಸಂಜೆ ಐದರ ತನಕ ಅಜ್ಜನಿಗೆ ಈ ಕೆಲ್ಸ. ಪ್ರತಿದಿನ ರಜೆ ಹಾಕದೆ ನಿಯತ್ತಾಗಿ ದುಡಿಯೋನು. ಸಂಜೆ ಹೊತ್ತು. ಐದು ಗಂಟೆಗೆ ಸೊಂಟಕ್ಕೆ ಕತ್ತಿ ಕಟ್ಟಿಕೊಂಡು ಅಜ್ಜ ಹೊರಟಿದ್ದ. ಅಜ್ಜಿನೂ ಜೊತೆಗೆ ಹೊರಟಿದ್ಳಂತೆ. ಇನ್ನೇನೋ ಸೂರ್ಯ ಮುಳುಗುವ ಸಮಯ. ಕತ್ತಲಾಗುತ್ತಿತ್ತು...ಅಜ್ಜಿಯನ್ನ ತಾಳೆಮರದ ಕೆಳಗೆ ನಿಲ್ಸಿ ಅಜ್ಜ ಶೇಂದಿ ತೆಗೆಯೋಕೆ ಹತ್ತಿದ್ದ. ಅಜ್ಜಿ ಅಲ್ಲೇ ಪಕ್ಕದಲ್ಲಿದ್ದ ಗೇರು ಮರದ ಕೆಳಗಡೆ ಕುಳಿತಿದ್ದಳಂತೆ. ಎದುರುಗಡೆ ಅಸ್ಪಷ್ಟ ಆಕೃತಿ ಬಂದು ಮಾತಾಡಿಸಿದಂತೆ ಕೇಳಿಸಿತಂತೆ. ಜೊತೆಗೆ, ಜೋರಾಗಿ ಚಪ್ಪಾಳೆ ತಟ್ಟಿತ್ತಿತ್ತು. ಅಜ್ಜಿಗೆ ಗಾಬರಿಯಾಗಿ ಅಜ್ಜನ ಜೋರಾಗಿ ಕೂಗಿದ್ಳಂತೆ. ಅಜ್ಜ ಮರದ ತುದಿಯಿಂದಲೇ ಹೇಳಿದ್ರಂತೆ, " ನಿನಗೆ ಶೇಂದಿ ಕೊಡ್ತೀನಿ. ಸುಮ್ಮನಿದ್ದುಬಿಡು'' ಎಂದು. ಚಪ್ಪಾಳೆ ಸದ್ದು ನಿಂತಿತು. ಅಜ್ಜ ಕೆಳಗಿಳಿದು ಒಂದು ತೆಂಗಿನ ಚಿಪ್ಪಿನಲ್ಲಿ ಶೇಂದಿ ಇಟ್ಟುಬಿಟ್ಟು ಅಜ್ಜಿನ ಕರೆದುಕೊಂಡು ವಾಪಾಸ್ ಆದ್ತಂತೆ.<br />
<br />
********<br />
ಅಜ್ಜ ಒಂದು ದಿನ ನಮ್ಮನೆಗೆ ಬರುತ್ತಿದ್ದ. ಅಜ್ಜನಿಗೆ ಹಗಲು ಹೊತ್ತು ಶೇಂದಿ ತೆಗೆಯೋ ಕೆಲ್ಸ. ರಾತ್ರಿ ಹೊತ್ತು ನಮ್ಮನೆಯ ದನ-ಆಡುಗಳನ್ನು ನೋಡಿಕೊಳ್ಳಲು ನಮ್ಮನೆಗೆ ಬರೋನು. ನಮ್ಮಮ್ಮ 11 ಆಡುಗಳು ಮತ್ತು 3 ದನಗಳನ್ನು ಸಾಕಿದ್ದಳು. ಬೆಳಿಗೆದ್ದು ಅವುಗಳ ಕೆಲ್ಸ ಜಾಸ್ತಿ ಇರೋದ್ರಿಂದ ಅಜ್ಜ ರಾತ್ರಿ ನಮ್ಮನೆಗೆ ಬಂದುಬಿಡೋನು. ಒಂದು ದಿನ ಅಜ್ಜ ಬರುವಾಗ ತುಂಬಾ ರಾತ್ರಿಯಾಗಿತ್ತು. ಸಂಜೆ ಹೊತ್ತಿನ ಹುಳಿ ಶೇಂದೀನ ಹೊಟ್ಟೆಗೇರಿಸಿಕೊಂಡು ಸ್ವಲ್ಪ ಟೈಟಾಗೇ ಅಜ್ಜ ರಾತ್ರಿ ಹೊತ್ತು ನಮ್ಮನೆಗೆ ಹೊರಟಿದ್ದ. ದಟ್ಟಕಾಡಿನ ನಡುವೆ ಕಾಲುದಾರಿ. ಬರೀ ಪಾದಗಳನ್ನು ಊರಲಷ್ಟೇ ಜಾಗ. ಸುತ್ತಮುತ್ತ ದೊಡ್ಡ ದೊಡ್ಡ ಮರಗಳು, ಎತ್ತರಕ್ಕೆ ಬೆಳೆದ ಹುಲ್ಲು-ಪೊದೆಗಳು. ಅಜ್ಜ ಬರುತ್ತಿದ್ಧಂತೆ ನಡುದಾರಿಯಲ್ಲಿ ಬೆಳ್ಳಿ ಕೂದಲ, ಬಿಳಿದಾದ ಗಡ್ಡವುಳ್ಳ, ಉದ್ದದ ಮನುಷ್ಯ ಒಬ್ರು ಸಿಕ್ಕಿದ್ರಂತೆ. ಬಿಳಿ ಅಂಗಿಯನ್ನು ಧರಿಸಿದ ಆತ ಅಜ್ಜನ ಜೊತೆ ಎಲ್ಲಿಗೆ ಹೋಗುತ್ತಿದ್ದೀರಿ ಎಂದೆಲ್ಲಾ ವಿಚಾರಿಸಿದಾಗ ಅಜ್ಜ ಕಾಡೊಳಗಿನ ದಾರಿಯಲ್ಲಿ ಒಬ್ಬನೇ ಹೋಗುತ್ತಿದ್ದೇನೆ...ಜೊತೆ ಸಿಕ್ಕಂತಾಯಿತು ಎಂದುಕೊಂಡರಂತೆ. ಅರ್ಧದಾರಿ ತನಕ ಬಂದ ಬಿಳಿ ಅಂಗಿಯ ಮನುಷ್ಯ ಹಿಂದೆ ತಿರುಗಿ ನೋಡಿದರೆ ಇರಲಿಲ್ಲವಂತೆ!.<br />
<br />
********<br />
ನಮ್ಮನೆ ಊರುವುದು ಪುತ್ತೂರಿನ ಪುಟ್ಟ ಹಳ್ಳಿ. ರಸ್ತೆ ಇಲ್ಲದೆ ದಟ್ಟ ಕಾಡುಗಳ ನಡುವೆ ನಿಂತ ಆ ಹಳ್ಳಿಗೆ ಕರೆಂಟು ಬಂದಿದ್ದು ಏಳೆಂಟು ತಿಂಗಳ ಹಿಂದೆ. ರಾತ್ರಿ ಹೊತ್ತು ಹೊರಗಡೆ ಬರಲೂ ಭಯ. ಅಂಥಾದ್ರಲ್ಲಿ ದಿನಾ ಏಳು ಗಂಟೆಯ ಹೊತ್ತಿಗೆ ಒಂದು ಹಕ್ಕಿ ಕೂಗಲು ಶುರುಮಾಡುತ್ತೆ. 9.30 ತನಕ ಅದು ಕೂಗುತ್ತಲೇ ಇರುತ್ತೆ. ನಮ್ಮಜ್ಜಿ ಮತ್ತು ಅಜ್ಜನ ಲೆಕ್ಕದಲ್ಲಿ ಅದು ಯಾರದೋ ಪ್ರೇತ. ನಾನಾಗ ಇನ್ನೂ ಸ್ಕೂಲ್ ಹತ್ತದ ಮಗು. ನಮ್ಮಜ್ಜನ ಬಳಿ ಗನ್ ಇತ್ತು. ಸಮಯ ಸಿಕ್ಕಾಗೆಲ್ಲಾ ಅಜ್ಜ ಗನ್ ಬೆನ್ನಿಗೇರಿಸಿಕೊಂಡು ಹೋಗುತ್ತಿದ್ದ. ಈ ಹಕ್ಕಿ ಕೂಗಾಟಕ್ಕೆ ಅಜ್ಜಿ ದಿನಾ ರಗಳೆ ತೆಗೆಯೋಳು. ಒಂದು ದಿನ ಅಜ್ಜ ಗನ್ ಬೆನ್ನಿಗೇರಿಸಿಕೊಂಡು ಹಕ್ಕಿನ ಶಿಕಾರಿ ಮಾಡಲು ಹೊರಟೇ ಬಿಟ್ಟ. ಅಜ್ಜ ಐದಾರು ಸಲ ಹೊಡೆದರೂ ಹಕ್ಕಿ ಸಿಗಲೇ ಇಲ್ಲ. ಅದು ಕೂಗ್ತಾನೆ ಇತ್ತು. "ಕೈಗೆ ಸಿಗದ ದೆವ್ವ'' ಎಂದುಕೊಂಡು ನಮ್ಮಜ್ಜ ಸುಮ್ಮನಾಗಿದ್ದ.<br />
<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com1tag:blogger.com,1999:blog-3759631957739186729.post-41138278241448901462013-03-03T23:23:00.000-08:002013-03-03T23:23:04.899-08:00ನೀಳಜಡೆಗೆ ಎರಡುಮೊಳ ಮಲ್ಲಿಗೆ<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://3.bp.blogspot.com/-qQtHyBCYU54/UTRLnmoPG8I/AAAAAAAAAMs/moaoY1PTyko/s1600/19230mallige1.jpg" imageanchor="1" style="margin-left: 1em; margin-right: 1em;"><img border="0" height="166" src="http://3.bp.blogspot.com/-qQtHyBCYU54/UTRLnmoPG8I/AAAAAAAAAMs/moaoY1PTyko/s320/19230mallige1.jpg" width="320" /></a></div>
<br />
ಸಾಕು ಕಣೇ...ದೃಷ್ಟಿ ತಾಗುತ್ತೆ. ನಾಳೆ ಮುಡ್ಕೊಂಡು ಹೋಗುವಿಯಂತೆ ಅಮ್ಮ ಹೇಳಿದಾಗ ನನ್ನ ಗುಂಡು ಗುಂಡು ದಪ್ಪಾಗಿದ್ದ ಮುಖ ಇನ್ನಷ್ಟು ದಪ್ಪಗಾಗಿ ಟೊಮೆಟೋ ಬಣ್ಣಕ್ಕೆ ತಿರುಗುತ್ತಿತ್ತು. ಹೂವ ಅಂದ್ರೆ ಪ್ರಾಣ, ಹೂವ ಅಂದ್ರೆ ಖುಷಿ, ಹೂವ ಅಂದ್ರೆ ಚೆಂದ. ಹೂವ ಅಂದ್ರೆ ಸುವಾಸನೆ. ಹೂವ ಅಂದ್ರೆ ಪ್ರೀತಿ, ಹೂವ ಅಂದ್ರೆ ಹುಡುಗಿ, ಹೂವ ಅಂದ್ರೆ ಹಬ್ಬ....ಹೀಗೆ ಹೂವ ಅಂದ್ರೆ ನನ್ನ ದೃಷ್ಟೀಲಿ ಎಲ್ಲವೂ. ಸೊಂಟದಿಂದ ಕೆಳಗೆ ಬರೋ ಜಡೆಗೆ ಮುಡಿದರೆ ಅವತ್ತು ಮನಸ್ಸಿನೊಳಗೆ ಒಂದು ರೀತಿಯ ಖುಷಿ. ಅಮ್ಮ ಮೊಳಮಲ್ಲಿಗೆ ಸಾಕು ಕಣೇ...ಜಾಸ್ತಿ ಇಟ್ರೆ ಬೇರೆ ಹುಡುಗೀರಿಗೆ ಆಸೆಯಾಗಲ್ವೇನೋ? ಏನಾದ್ರೂ ಫಂಕ್ಷನ್ ಇದ್ರೆ ಮುಡ್ಕೊಂಡು ಹೋಗು ಅಂದ್ರೆ ಹುಸಿಮುನಿಸಿನಿಂದ ಕಣ್ಣು ಕೆಂಪಾಗುತ್ತಿತ್ತು. ಅದಕ್ಕೆ ಅಮ್ಮ ಅಷ್ಟೂದ್ದ ನೀಳ ಜಡೆಗೆ ಮಲ್ಲಿಗೆ ಮುಡಿಸಿ, ಮುಡಿಯ ಬುಡದಲ್ಲಿ ಕೆಂಪು ಗುಲಾಬಿ ಸಿಕ್ಕಿಸುವಳು. ನಮ್ಮೂರ ಮಂಗಳೂರ ಮಲ್ಲಿಗೆ ಸ್ವಲ್ಪ ಮುಡಿದರೆ ಸಾಕು ಮೈಲುಗಟ್ಟಲೆ ದೂರದವರೆಗೆ ಘಮ ಎನ್ನುತ್ತಿತ್ತು.<br />
<br />
ಸೋಮವಾರ ಪುತ್ತೂರ ಸಂತೆ. ಪ್ರತಿ ಸಂತೆಗೆ ಅಮ್ಮ ಹಾಜರು. ವಾರದ ತರಕಾರಿ ಸಾಮಾನುಗಳೆಲ್ಲಾ ಒಮ್ಮೆಲೇ ತರೋಳು. ಜೊತೆಗೆ ಮಲ್ಲಿಗೆ.ಮಂಗಳವಾರ ಮಲ್ಲಿಗೆ ಮುಡಿಯೋ ಖುಷಿ. ಕ್ಲಾಸಿನಲ್ಲಿ ಅದೆಷ್ಟೋ ಹುಡುಗೀರು ನನ್ನ ಜಡೆ, ಮಲ್ಲಿಗೆ ನೋಡಿ ಆಸೆಪಡೋರೇ ಏನೋ. ನನ್ನೊಳಗೆ ಮಲ್ಲಿಗೆ ಮುಡಿದ ಖುಷಿ. ಕ್ಲಾಸಿನಲ್ಲಿ ಬೆಂಚಿಯಲ್ಲಿ ಕುಳಿತರೆ ಒಂದೆ ಒರಗುತ್ತಿರಲಿಲ್ಲ. ಎಲ್ಲಾದ್ರೂ ಮಲ್ಲಿಗೆ ಹಾಳಾದ್ರೆ!!. ಇಡೀ ದಿನ ಬೆನ್ನು ನೆಟ್ಟಗಾಗಿಸಿಕೊಂಡು ಕುಳಿತು ಸಂಜೆ ಹೊತ್ತಿಗೆ ನೋವು.<br />
<br />
ಆಗ ಏಳನೇ ತರಗತಿಯಲ್ಲಿದ್ದೆ. ಶೇಷಪ್ಪ ಮೇಷ್ಟ್ರು ನಮಗೆ ಹೆಡ್ ಮೇಷ್ಟ್ರು. ಜಡೆಗಿಂತ ಉದ್ದ ಮಲ್ಲಿಗೆ ಮುಡಿದ ನನಗೆ ಕೇಳಿದ್ದರು."ಮಲ್ಲಿಗೆ ಅಂದ್ರೆ ಇಷ್ಟನಾ? ನಿಂಗೆ ಮಲ್ಲಿಗೆ ಅಂಥ ಹೆಸರಿಡೋಣ' ಅಂತ. ಕೆನ್ನೆ ಕೆಂಪಗಾಗಿಸಿಕೊಂಡು ಬಗ್ಗಿ ಕುಳಿತಿದ್ದೆ. ಹುಡುಗರೆಲ್ಲಾ "ಮಲ್ಲಿಗೆ..'' ಎಂದಿದ್ದು ಕೇಳಿಸಿತ್ತು.<br />
<br />
ಏಳನೇ ತರಗತಿಯ ವಿದಾಯಕೂಟ. ಎಲ್ಲರಿಗೂ ಫೋಟೋ ತೆಗೆಸುವ ಖುಷಿ. ಅಂದು ಅಮ್ಮ ನನಗೆ ಎರಡು ಜಡೆ ಹಾಕಿದ್ದಳು. ಹಸಿರು ಚೂಡಿದಾರ. ಎರಡು ಜಡೆ, ಅದು ಎದೆಯಿಂದ ಕೆಳ ಬರುತ್ತಿತ್ತು. ಆ ಎರಡೂ ಜಡೆಗೆ ಎರಡೆರಡು ಮೊಳಮಲ್ಲಿಗೆ. ಮಲ್ಲಿಗೆ ಮೊಳ ಜಾರದಂತೆ ಐದಾರು ಕ್ಲಿಪ್ಗಗಳನ್ನು ಹಾಕಿದ್ದಳು. ಸಂಜೆ ಹೊತ್ತಿನಲ್ಲಿ ನಡೆದ ಫೋಟೋ ತೆಗೆಯುವ ಕಾರ್ಯಕ್ರಮದಲ್ಲಿ ನನ್ನೆರಡು ಜಡೆಗಳಿಗೇ ಕ್ಯಾಮರಾ ಕಣ್ಣು!. ಎರಡು ಜಡೆಗಳನ್ನು ಎದುರುಗಡೆ ಹಾಕಿಕೊಂಡು ಅದೆಷ್ಟು ಸಲ ಕ್ಲಿಕ್ ಕ್ಲಿಕ್. ಹೈಸ್ಕೂಲ್ ಮುಗಿಯುವ ಹೊತ್ತಿಗೆ ಪುತ್ತೂರು ಮಲ್ಲಿಗೆ ಮಾರುಕಟ್ಟೆಗೆ ಅಮ್ಮ ಚಿರಪರಿಚಿತಳಾಗಿದ್ದಳು. ಪ್ರತಿ ಸೋಮವಾರ ಅಮ್ಮ ಅಲ್ಲಿ ಹೋದ ತಕ್ಷಣ 'ಮಗಳಿಗೆ ಮಲ್ಲಿಗೆ ಬೇಕೇ?' ಎಂದು ಕೇಳಿ ಹಸಿಬಾಳೆಯಲ್ಲಿ ಮಲ್ಲಿಗೆ ಸುತ್ತಿ ಕೊಡೋರು.<br />
<br />
ಡಿಗ್ರಿ ಮುಗ್ಸಿ ಬೆಂಗಳೂರಿಗೆ ಬಂದಾಯಿತು. ಇಲ್ಲಿ ಮಂಗಳೂರು ಮಲ್ಲಿಗೆಯ ಘಮ ಇಲ್ಲ. ನನ್ನ ಜಡೆಯೂ ಕಿರಿದಾಗಿದೆ. ಮೋಟುದ್ದ ಜಡೆಗೆ ಶುಕ್ರವಾರದಂದು ಅತ್ತೆಮ್ಮ ಪೂಜೆ ಮಾಡಿ ಪ್ರಸಾದವೆಂದು ಬೆರಳಷ್ಟು ಉದ್ದದ ಮಲ್ಲಿಗೆ ಮಾಲೆ ಕೊಡುತ್ತಾಳೆ. ಪುಟ್ಟ ಪುಟ್ಟ ಕೂದಲುಗಳನ್ನು ಬಿಗಿಹಿಡಿದು ಕ್ಲಿಪ್ ಹಾಕಿ, ಅರ್ಧ ಗಂಟೆ ತಲೆಯಲ್ಲಿ ಮಲ್ಲಿಗೆಯ ಘಮ. ಆಫೀಸ್ ಗೆ ಹೊರಟಾಗ ಅದನ್ನು ಕಿತ್ತು ಹಾಸಿಗೆ ಮೇಲೆ ಹಾಕಿಬಿಟ್ಟು ಹೊರಡ್ತೀನಿ. ಸಂಜೆ ಮನೆ ಸೇರುವ ಹೊತ್ತಿಗೆ ಅದು ಬಾಡಿಹೋಗಿ ನರಳುತ್ತಿರುತ್ತೆ.<br />
<br />
ಮಲ್ಲಿಗೆಯ ಮೇಲೆ ಇನ್ನೂ ಪ್ರೀತಿ ಇದೆ. ಮನೆಮುಂದೆ ಮಲ್ಲಿಗೆ ಗಿಡ ಹಸುರಾಗಿದೆ. ಬೆಳಗೆದ್ದು ನೀರುಣಿಸ್ತೀನಿ. ಆಗಾಗ ಹಸಿರೆಲೆಗಳ ನಡುವೆ ಮೊಸರು ಚೆಲ್ಲಿದಂತೆ ಗುಂಡುಮಲ್ಲಿಗೆ ಅರಳುತ್ತೆ. ಮನಸಿನಲ್ಲಿ ಸಣ್ಣದೊಂದು ಖುಷಿ, ಜಡೆಯಿಲ್ಲದಿದ್ದರೂ, ಮನೆಯಂಗಳದಲ್ಲಿ ಮಲ್ಲಿಗೆಯ ಘಮ ಅರಳಿದೆಯೆಂದು.<br />
<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com4tag:blogger.com,1999:blog-3759631957739186729.post-90698699557199844062013-02-21T23:04:00.002-08:002013-02-21T23:04:16.222-08:00 ಮಂಗಳವಾರ ಮುಟ್ಟಾದವಳು<div dir="ltr" style="text-align: left;" trbidi="on">
ಸಂಜೆ ಐದರ ಹೊತ್ತು. ತೋಟದಲ್ಲಿದ್ದ ಕರುವನ್ನು ಓಡಿಸಿಕೊಂಡು ಹಟ್ಟಿಯತ್ತ ಸಾಗಿದ್ದೆ. ಹಿಂದಿನಿಂದ ಬಂದು ನನ್ನ ನೋಡಿದ ಅಮ್ಮಾ "ಅಂಗಳದಲ್ಲೇ ನಿಂತುಕೋ ಮಗಳೇ...'' ಎಂದಾಗ ನನಗೆ ಅಚ್ಚರಿ. ನನ್ನ ನೋಟದಲ್ಲಿ ಪ್ರಶ್ನೆಯಿತ್ತು. ಅಮ್ಮ ನನ್ನ ಕಣ್ಣುಗಳ ಪ್ರಶ್ನೆಗೆ ಉತ್ತರಿಸಲಿಲ್ಲ. ಅಮ್ಮನ ಬಟ್ಟಲು ಕಣ್ಣುಗಳಲ್ಲಿ ಅದೇನೋ ಹೊಸ ಖುಷಿ, ಹೊಸ ಭಾವಗಳ ಪುಳಕ. ಸೀತಮ್ಮ, ಸರೋಜಿನಿ, ಕಮಲ, ಕೆಂಚಮ್ಮ...ಎಲ್ಲರೂ ಬಂದರು. ಎದುರುಮನೆಯಲ್ಲಿದ್ದ ಅಜ್ಜಿ, "ಏನ್ ಮರೀ ದೊಡ್ಡವಳಾಗಿದ್ದೀಯಾ?' ಎನ್ನುತ್ತಾ ಬಾಯೊಳಗಿದ್ದ ವೀಳ್ಯದೆಲೆಯನ್ನು ಅಂಗಳದ ಮೂಲೆಯಲ್ಲಿದ್ದ ಅಡಿಕೆ ಮರದ ಗಿಡದಡಿ ಉಗುಳಿದಳು. ಎಲ್ಲೋ ಆಟವಾಡುತ್ತಿದ್ದ ತಮ್ಮ ತಕ್ಷಣ ಬಂದು "ಅಕ್ಕಾ ಬಾ ಒಳಗಡೆ, ಏಕೆ ನಿಂತಿದ್ದೀಯಾ?' ಎಂದು ನನ್ನ ಕೈ ಹಿಡಿದು ಎಳೆಯತೊಡಗಿದ. ಅವನನ್ನು ಎತ್ತಿಕೊಂಡು ಹೋದ ಅಜ್ಜಿ ಸ್ನಾನ ಮಾಡಿಸಿಕೊಂಡು ಬಂದರು. ಹಸೆ ಮಧ್ಯದಲ್ಲಿ ನನ್ನ ಕುಳ್ಳಿರಿಸಿ, ನಾಲ್ಕು ಕಡೆಯಿಂದ ನಾಲ್ಕು ಮಂದಿ ಹೆಂಗಸರು ತಲೆಗೆ ನೀರೆರೆದರು. <br /><br /><br />ಅಕ್ಕಂಗೂ ಹೀಗೆ ಮಾಡಿದ್ದನ್ನು ನಾನು ನೋಡಿದ್ದೆ. ತೋಟದ ಮನೆಯಲ್ಲಿ ಅಡಗಿ ಕುಳಿತಿದ್ದ ಅಕ್ಕನ ಕರೆದುಕೊಂಡು ಬಂದ ಅಮ್ಮ ಅವಳನ್ನೂ ಹೀಗೆ ಅಂಗಳದಲ್ಲಿ ನಿಲ್ಲಿಸಿದ್ದಳು. ಊರ ಹೆಂಗಸರೆಲ್ಲಾ ಬಂದು ನೀರೆರೆದಿದ್ದರು. ಏಳು ದಿನ ಅಕ್ಕ ಒಬ್ಬಲೇ ಹೊರಗಿನ ಮನೆಯಲ್ಲಿ ಮಲಗುತ್ತಿದ್ದಳು. ಅಕ್ಕನ ಏಕೆ ಮನೆಯ ಹೊರಗಡೆ ಬರಲು ಬಿಡುವುದಿಲ್ಲ ಎಂದಾಗ ಅಮ್ಮ ಹೇಳಿದ್ದಳು, "ಅಕ್ಕನಿಗೆ ಕಾಗೆ ಮುಟ್ಟಿದೆ'''. ಊರೆಲ್ಲಾ ಕರೆದು ಅಮ್ಮ ಸಿಹಿಯೂಟ ಹಾಕಿಸಿದ್ದಳು. ನಾನು ದೊಡ್ಡವಳಾಗುವ ಹೊತ್ತಿಗೆ ಅಕ್ಕ ಮದುವೆಯಾಗಿ ಮಕ್ಕಳೂ ಇದ್ದವು.<br /><br /><br />ನನ್ನ ಸ್ನಾನ ಮಾಡಿಸಿ ಅಮ್ಮ ಮನೆಯ ಪಕ್ಕದಲ್ಲಿರುವ ಹೊರಗಿನ ಮನೆಗೆ ಕರೆದುಕೊಂಡು ಹೋದಳು. ಚಾಪೆಯೊಂದನ್ನು ಹಾಸಿ ಕುಳಿತುಕೋ ಎಂದಾಗ ಎದೆ ಢವಢವ ಎನ್ನುತ್ತಿತ್ತು. ಏಳು ದಿನಗಳ ಕಾಲ ಇಲ್ಲಿ ಹೇಗೆ ಮಲಗಲಿ ಎನ್ನುವ ಚಿಂತೆ ನನ್ನದು. ಎಲ್ಲಾ ಹೆಣ್ಣು ಮಕ್ಕಳಿಗೆ ಆಗುವ ರೀತಿಯಲ್ಲೇ ನಿನಗೂ ಆಗಿದೆ ಅಮ್ಮ ಎಂದಾಗ ಒಳಾರ್ಥಗಳು ತಿಳಿದವು. <br /><br />"ಇವತ್ತು ಮಂಗಳವಾರ, ಅಮಾವಾಸ್ಯೆ'' ಅಜ್ಜಿ ಬಂದು ಹೇಳಿದಾಗ ಅಮ್ಮನ ಮುಖದಲ್ಲಿ ಭಯ, ಆತಂಕ. ಖುಷಿಯಲ್ಲಿ ಪುಳಕಗೊಂಡಿದ್ದ ಅಮ್ಮನ ಕಣ್ಣುಗಳು ದೊಡ್ಡದಾದುವು. ಹನಿನೀರು ಅಲ್ಲಿ ಜಿನುಗಿತು. ಸೆರಗಿನಿಂದ ಕಣ್ಣೊರೆಸಿಕೊಂಡಳು. ಅಜ್ಜಿ ಅಮ್ಮನ ನನ್ನ ಹತ್ತಿರದಿಂದ ದೂರ ಕರೆದುಕೊಂಡು ಹೋಗಿ ಕಿವಿಯಲ್ಲಿ ಪಿಸುಗುಟ್ಟಿದಳು. "ಇಂದು ಮಂಗಳವಾರ, ಅಮಾವಾಸ್ಯೆ. ಅಮಾವಾಸ್ಯೆ ದಿನ ಮುಟ್ಟಾದವರಿಗೆ ಮಕ್ಕಳಾಗುವುದಿಲ್ಲವಂತೆ. ನಮ್ಮಕುಟುಂಬದಲ್ಲಿ ಯಾರೂ ಮಂಗಳವಾರ ಮುಟ್ಟಾಗಿಲ್ಲ ನೋಡು. ಈ ಹೆಣ್ಣುಮಗುವಿಗೆ ಅದೇನು ಬಂತೋ. ಊರೆಲ್ಲಾ ಕರೆದು ಸಿಹಿಯೂಟ ಹಾಕೋದು ಬೇಡ. ಎಲ್ರಿಗೂ ಇವಳು ಮಂಗಳವಾರ ಮುಟ್ಟಾಗಿದ್ದಾಳೆ ಅಂತ ಗೊತ್ತಾಗುತ್ತೆ' ಅಂದಾಗ ಅಮ್ಮ ಜೋರಾಗಿ ಬಿಕ್ಕಿದಳು. ಅಜ್ಜಿಯ ಮೌಢ್ಯಕ್ಕೆ ಎದುರಾಡುವ ಧೈರ್ಯ ನನಗಿನ್ನೂ ಇರಲಿಲ್ಲ.<br /><br />ಎರಡನೆಯ ದಿನ. ಹಿತ್ತಾಳೆಯ ತಟ್ಟೆಯಲ್ಲಿ ಮೆಂತ್ಯದನ್ನ ಮಾಡಿಕೊಂಡು ಬಂದ ಅಮ್ಮನ ಮುಖದಲ್ಲಿ ಖುಷಿ ಇರಲಿಲ್ಲ. ಬಾಚಿ ಅಪ್ಪಿಕೊಂಡು ಮುತ್ತುಕೊಟ್ಟು ಹೋದಳು. ಎದುರುಮನೆ ಶಾಂತಲಮ್ಮ ವಟವಟ ಅನ್ನುತ್ತಲೇ ಮನೆಯೊಳಗೆ ಕಾಲಿಟ್ಟಳು. "ಹೋಗಿ ಹೋಗಿ ನಿನ್ನ ಮಗಳು ಅಮಾವಾಸ್ಯೆ ದಿನ ಮುಟ್ಟಾಗಿದ್ದಲ್ಲಲ್ಲಾ? ಛೇ.ಛೇ. ಹೀಗಾಗಬಾರದಿತ್ತು. ನಿಂಗೆ ಮಕ್ಕಳನ್ನು ನೋಡುವ ಭಾಗ್ಯವೇ ಇಲ್ಲವೇನೋ'' ಅಂದುಬಿಡಬೇಕೇ?. "ದೇವರಿಟ್ಟಂಗೆ ಶಾಂತಲಾ'' ಎಂದು ಅಮ್ಮ ಸುಮ್ಮನಾಗಿದ್ದಳು. ಏಳು ದಿನಗಳು ಕಳೆದವು. ಅಮ್ಮ ಹೊಸ ಬಟ್ಟೆ ತಂದು ' ಮಗೂ, ಯಾವತ್ತಾದ್ರೂ ಸ್ಕೂಲ್ ಗೆ ಹೋಗುವಾಗ ಹಾಕ್ಕೊಂಡು ಹೋಗು' ಎಂದಿದ್ದಳು. <br /><br /> *****<br />ಐದು ವರ್ಷಗಳ ಹಿಂದೆ ಮದುವೆಯಾಯಿತು. ಊರಿಗೆ ಹೋದಾಗಲೆಲ್ಲಾ ಅಮ್ಮ ಕೇಳುತ್ತಿದ್ದಳು "ಮುಟ್ಟು ಇನ್ನೂ ನಿಂತಿಲ್ವೇ?". ಎರಡು ವರ್ಷದ ಹಿಂದೆ ಅಮ್ಮನಿಗೆ ಹೇಳಿದ್ದೆ; "ಮುಟ್ಟು ನಿಂತಿದೆ'' ಎಂದು. ಈಗ ಮೊಮ್ಮಗಳ ಆರೈಕೆಯಲ್ಲಿ ಅರವತ್ತೈದರ ಅಮ್ಮನಿಗೆ ಇಪ್ಪತ್ತರ ಹುಮ್ಮಸ್ಸು. ಸಿಕ್ಕ ಸಿಕ್ಕವರಲ್ಲಿ ಬಟ್ಟಲು ಕಣ್ಣುಗಳ ತುಂಬಾ ನಗುತ್ತಾ ಅಮ್ಮ ಹೇಳುತ್ತಿದ್ದಾಳೆ: ಮಂಗಳವಾರ ಮುಟ್ಟಾದ ನನ್ನ ಮಗಳ ಮಡಿಲಿಗೆ ಲಕ್ಷ್ಮಿ ಬಂದಿದ್ದಾಳೆಂದು.! <br /></div>
ಧರಿತ್ರಿhttp://www.blogger.com/profile/13431094762447988960noreply@blogger.com4tag:blogger.com,1999:blog-3759631957739186729.post-61249242840139939612013-01-09T05:58:00.001-08:002013-01-09T05:58:52.934-08:00ಅಪ್ಪ ಹೋಗಿ ವರುಷ<div dir="ltr" style="text-align: left;" trbidi="on">
<br />
<br />
<br />
ಬೆಳ್ಳಂಬೆಳಿಗ್ಗೆ ಐದೂವರೆ. ಅಮ್ಮ ಎಬ್ಬಿಸಿದ್ದಳು. ಇವತ್ತು ನಮಗೆ ಹಬ್ಬ ಕಣಮ್ಮ ಸಿಹಿ ಮಾಡಬೇಕು. ಮನೆ ಮುಂದೆ ತೊಳೆದು ರಂಗೋಲಿ ಹಾಕಬೇಕು. ಅಮ್ಮನ ಮಾತುಗಳು ಕಿವಿಗೆ ಬೀಳುತ್ತಿದ್ದಳು. ಚಳಿಯಲ್ಲಿ ಬೆಚ್ಚಗೆ ಮುದುಡಿ ಮಲಗಿದ್ದ ನನಗೆ ಏಳಲೂ ಮನಸ್ಸಾಗುತ್ತಿರಲಿಲ್ಲ. ಆದರೆ, ಏಳಲೇಬೇಕಿತ್ತು!. ಅಮ್ಮ ಬೆಳಕು ಮೂಡುವ ಮೊದಲೇ ನಾಲ್ಕಕ್ಕೆ ಅಲಾರಂ ಇಟ್ಟು ಎದ್ದು ಸ್ನಾನ ಮಾಡಿ ಮಡಿ ಬಟ್ಟೆ ಉಟ್ಟು ದೇವರ ಕೋಣೆಯಲ್ಲಿ ಸದ್ದು ಮಾಡುತ್ತಿದ್ದಳು. ಮೊಬೈಲ್ನಲ್ಲಿ ವಿಷ್ಣು ಸಹಸ್ರನಾಮ ಬರುತ್ತಿತ್ತು. ಅಮ್ಮನ ದೇವರ ಭಕ್ತಿಗೆ ನನ್ನೆಜಮಾನ್ರು ಎದ್ದು ವಟವಟ ಅಂದು ಕಣ್ಣು ದೊಡ್ಡದು ಮಾಡಿದ್ರು!<br />
<br />
ಎದ್ದುಬಿಟ್ಟು ಮನೆಯ ಎದುರು ಒಂಚೂರು ಜಾಗಕ್ಕೆ ತೊಳೆದು ಸೆಗಣಿ ಸಾರಿದೆ. ಹುಟ್ಟಿನಿಂದ ಮದುವೆ ಆಗೋ ತನಕ ಸಗಣಿ ಸಾರೋ ಕೆಲಸ ಮಾಡದ ನಾನು, ಒಂಚೂರು ಜಾಗಕ್ಕೆ ಅಂದು ಸಗಣಿ ಸಾರಿದೆ. ಹಳ್ಳಿಯಲ್ಲಿರುವಾಗ ಹಟ್ಟಿಯಿಂದ ತಂದ ಸಗಣಿ ಘಮ ಎನ್ನುತ್ತಿತ್ತು. ಬೆಂಗಳೂರಿನಲ್ಲಿ ಅದೆಲ್ಲಿಂದಲೋ ತಂದಿಟ್ಟ ಸಗಣಿಯ ವಾಸನೆಯೇ ಮೂಗಿಗೆ ಗೊತ್ತಾಗಲಿಲ್ಲ!. ಸೆಗಣಿ ಸಾರಿ, ಮನೆಮುಂದೆ ರಂಗೋಲಿ ಹಾಕಿದೆ. ಚೆಂದಕ್ಕೆ ಚುಕ್ಕೆ ಇಟ್ಟು ರಂಗೋಲಿ ಹಾಕಲು ಬಾರದಿದ್ದರೂ ತಾವರೆ, ಗುಲಾಬಿ...ಹೀಗೆ ಬಗೆಬಗೆಯ ಹೂವುಗಳು, ಎಲೆಗಳನ್ನು ಬಿಡಿಸಿ ಬಣ್ಣಗಳನ್ನು ತುಂಬಿದೆ. ತುಳಸಿ ಗಿಡದ ಸುತ್ತಲೂ ರಂಗೋಲಿ ಹಾಕಿದೆ. ಜೊತೆಗೆ, ಮಾವಿನ ಎಲೆಗಳನ್ನು ತಂದು ಬಾಗಿಲಿಗೆ ತೋರಣ ಕಟ್ಟಿದೆ. ಅಷ್ಟೊತ್ತಿಗಾಗಲೇ ಅಮ್ಮ ದೇವರ ಮೂರ್ತಿಗಳನ್ನೆಲ್ಲ ತೊಳೆದು, ಪೂಜೆ ಶುರುಮಾಡಿದ್ದಳು. ಅಡುಗೆ ಮನೆಯಲ್ಲಿ ಅಗರಬತ್ತಿ, ಗಂಧ ಘಮಘಮ ಎನ್ನುತ್ತಿತ್ತು. ಅಮ್ಮನಿಗೆ ಹೊಟ್ಟೆ ಚುರುಗುಟ್ಟುತ್ತಿದ್ದರೂ ದೇವರ ಭಕ್ತಿಯಲ್ಲಿ ಹಸಿವೇ ಮರೆತುಹೋಗಿತ್ತು. ಎಲ್ಲಾ ಮುಗಿದು ಹೊಟ್ಟೆಗೆ ತಿಂಡಿ ಹೋಗುವಷ್ಟರಲ್ಲಿ ಗಂಟೆ ಹತ್ತು ದಾಟಿತ್ತು.<br />
<br />
ಅಪ್ಪ ಹೋಗಿ ವರ್ಷದ ನಂತರ ಮತ್ತೆ ನಮ್ಮನೆಯಲ್ಲಿ ಸಿಹಿಯಡುಗೆ ಆರಂಭವಾಗಿತ್ತು. ಮನೆಮುಂದೆ ರಂಗೋಲಿ ಮೂಡಿತ್ತು. ಅರಶಿನ-ಕುಂಕುಮ-ಹೂವುಗಳ ಚಿತ್ತಾರವಿತ್ತು. ಮುತ್ತೈದೆಯರಿಗೆ ಬಾಗಿನ ಅಮ್ಮನೇ ರೆಡಿಮಾಡಿದ್ದಳು. ಸಿಹಿ ಎಂದು ಕೇಸರಿಬಾತ್, ಪಾಯಸ ಮಾಡಿ ನನಗೂ-ನಮ್ಮಜೆಮಾನ್ರಿಗೆ ಬಡಿಸುವಾಗ ಅಮ್ಮನ ಕಣ್ಣುಗಳು ತುಂಬಿಕೊಂಡಿದ್ದವು. ಸಾವರಿಸಿಕೊಂಡು ಹೇಳಿದಳು; ಅಪ್ಪನಿಗೆ ಕೇಸರಿಬಾತ್ ಭಾಳ ಇಷ್ಟ.<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com3tag:blogger.com,1999:blog-3759631957739186729.post-7422746120114635412012-12-20T23:24:00.001-08:002012-12-20T23:24:21.127-08:00ಪ್ರಳಯ, ನಾನು ಮತ್ತು ಅಮ್ಮ<div dir="ltr" style="text-align: left;" trbidi="on">
<br />
<br />
ಇವತ್ತು ಎಂದಿನಂತೆ ಬೆಳಗು. ಕಿಟಕಿಯಾಚೆ ಇದ್ದ ಪಾರಿಜಾತ ಗಿಡದ ಮೇಲೆ ಸೂರ್ಯನ ಕಿರಣಗಳು ನಳನಳಿಸುತ್ತಿತ್ತು. ಅಮ್ಮ ಎದ್ದು ಬಾಗಿಲು ತೊಳೆದು ರಂಗೋಲಿ ಇಟ್ಟಿದ್ದಳು. ಹಾಲಿನ ಹುಡುಗ, ಪೇಪರ್ ಹುಡುಗ ಆರೂವರೆಗೇ ಬಾಗಿಲು ತಟ್ಟಿದ್ದರು. ಎದುರುಮನೆ ಪುಟಾಣಿ ಶಾಲೆಗೆ ಹೋಗೊಲ್ಲ ಎಂದು ರಚ್ಚೆ ಹಿಡಿಯುತ್ತಿದ್ದ. ಅವನಿಗೆ ಇವತ್ತು ಪ್ರಳಯ ಆಗುತ್ತೆ ಎನ್ನುವ ಭಯ. ವಾಕಿಂಗ್ ಹೋಗುತ್ತಿದ್ದ ಎಂಬತ್ತು ಮೀರಿದ ಅಜ್ಜ-ಅಜ್ಜಿಯರ ಮುಖದಲ್ಲಿ ಮಂದಹಾಸ. ಟೀವಿಯಲ್ಲಿ "ಪ್ರಳಯ ಠುಸ್' ಎಂಬ ಸುದ್ದಿ ದೊಡ್ಡದಾಗಿ ಕಾಣುತ್ತಿತ್ತು. ನೆನಪಿನ ಪೆಟ್ಟಿಗೆಯಲ್ಲಿ 14 ವರ್ಷಗಳ ಹಿಂದಿನ ಘಟನೆ ನಗು ತರಿಸುತ್ತಿತ್ತು.<br />
<br />
ನಾನಾಗ ಎಂಟನೇ ತರಗತಿಯಲ್ಲಿ ಓದುತ್ತಿದ್ದೆ. ಆಗ ತರಂಗ ವಾರ ಪತ್ರಿಕೆ 'ಪ್ರಳಯ'ದ ಬಗ್ಗೆ ಮುಖಪುಟ ಸುದ್ದಿ ಮಾಡಿದ್ದು ನೆನಪು. ಶಾಲೆಯ ಹತ್ತಿರವಿದ್ದ ಸೂರಪ್ಪನ ಅಂಗಡಿಯಿಂದ ಆ ತರಂಗ ಖರೀದಿಸಿದ್ದೆ. ಅಕ್ಷರದರಿವು ಇಲ್ಲದ ಅಮ್ಮ ಏನಿರುತ್ತೆ ಪತ್ರಿಕೆಯಲ್ಲಿ ಎಂದು ಕೇಳಿದ್ದಳು. ಪ್ರಳಯ ಆಗುತ್ತೆ ಅಂತೆ...ಅದರ ಬಗ್ಗೆ ಇರುತ್ತೆ ಎಂದಿದ್ದೆ. ಅದನ್ನು ತೆಗೆದುಕೊಂಡಿದ್ದೆ ತಡ ಸರಿಯಾಗಿ ಪಾಠಗಳನ್ನೂ ಕೇಳದೆ ಪಾಠದ ಮಧ್ಯೆ ತರಂಗ ತಿರುವಿ ಹಾಕಿದ್ದೆ. ಹಿಂದಿ ಪಾಠ ಮಾಡುತ್ತಿದ್ದ ಕೊರಗಪ್ಪ ಮೇಷ್ಟ್ರು ಚೋಕ್ ಪೀಸ್ ತಕ್ಕೊಂಡು ನಿಂತಲ್ಲಿಂದಲೇ ನನ್ನ ತಲೆಗೆ ಚೋಕ್ ಪೀಸ್ ಬಿಸಾಡಿ ಕಿವಿಹಿಂಡಿದ್ದರು!. ಆ ದಿನ ಯಾರೂ ಸರಿಯಾಗಿ ಪಾಠ ಕೇಳಲಿಲ್ಲ. ಬರೀ ಪತ್ರಿಕೆ ಓದಿ ಪ್ರಳಯದ ಬಗ್ಗೆ ಮಾತಾಡುವುದು ಅಷ್ಟೇ ಕೆಲಸ. ಇನ್ನೂ ನೆನಪಿದೆ ಆ ಪತ್ರಿಕೆ ಮುಖಪುಟದಲ್ಲಿ ಗೋಳಾಕಾರದ ಭೂಮಿ ಯಾವುದೇ ಗ್ರಹಕ್ಕೆ ಬಡಿದಂತೆ ಅಚ್ಚರಿ, ಭಯವನ್ನು ಸೃಷ್ಟಿಸದ ಪೋಟೋ ಇತ್ತು. ಅದನ್ನು ನೋಡಿ ನೋಡಿ ನಾನು ಬೆವೆತಿದ್ದೆ.<br />
<br />
<b>ಮೂತ್ರ ಮಾಡಲೂ ಭಯವಾಗಿತ್ತು!</b><br />
ಪ್ರಳಯ ಆಗುವ ದಿನ ನಾನು ಶಾಲೆಗೆ ಹೋಗುವುದಿಲ್ಲ ಎಂದು ನಿರ್ಧರಿಸಿದ್ದೆ. ಆ ದಿನ ಪೂರ್ತಿ ಅಮ್ಮನ ಬಳಿಯೇ ಇರಬೇಕು. ಅಮ್ಮನ ಬಿಟ್ಟು ಆ ಕಡೆ-ಈಕಡೆ ಹೋದಾಗ ಪ್ರಳಯ ಆಗಿಬಿಟ್ಟರೆ ನಾವೆಲ್ಲೋ..ಅಮ್ಮ ಎಲ್ಲೋ ಹೋಗಿಬಿಡ್ತಾಳೆ. ಅಂದು ಅಮ್ಮನ ಬಳಿ ಭರ್ಜರಿ ಅಡುಗೆ ಮಾಡಿಸಿಕೊಂಡು ತಿನ್ನಬೇಕು...ಹೀಗೆ ವಿವಿಧ ಯೋಜನೆಗಳನ್ನು ಸಿದ್ಧಪಡಿಸಿಕೊಂಡಿದ್ದೆ. ಪತ್ರಿಕೆಯಲ್ಲಿ ಬಂದಿದ್ದ ಸುದ್ದಿಗಳನ್ನೆಲ್ಲಾ ಅಮ್ಮನಿಗೆ ಯಥಾವತ್ತಾಗಿ ಓದಿ ಹೇಳಿದ್ದೆ. ಆಕಾಶವಾಣಿ ಸುದ್ದಿಯಲ್ಲೂ ಪ್ರಳಯದ ಸುದ್ದಿಗಳು ಬರುತ್ತಿದ್ದವು. ನಮ್ಮ ವಿಜ್ಞಾನ ಮೇಷ್ಟ್ರು ಡಿಸೋಜಾ ಪ್ರಳಯ ಸುಳ್ಳು ಸುದ್ದಿ ಎಂದು ಹೇಳಿದ್ದು ಬಿಟ್ಟರೆ ಇನ್ನಾರು ಧೈರ್ಯ ಹೇಳಲೇ ಇಲ್ಲ.<br />
ಅಂತೂ ಪ್ರಳಯದ ದಿನ ಬಂದೇ ಬಿಟ್ಟಿತ್ತು. ಅಮ್ಮ ರಾತ್ರಿ ಕೋಳಿ ರೊಟ್ಟಿ ಅಡುಗೆ ಮಾಡಿದ್ದಳು. ಭರ್ಜರಿಯಾಗಿ ತಿಂದು ನಾನು-ತಮ್ಮ ಮತ್ತೊಮ್ಮೆ ಪ್ರಳಯದ ಹೇಗಾಗಬಹುದೆಂದು ಊಹಿಸಿಕೊಂಡೆವು. ಪ್ರಳಯ ಆದಾಗ ನೀರೆಲ್ಲ ತುಂಬಿಕೊಂಡು ನಮ್ಮ ಮನೆ ನೀರ ಮೇಲೆ ತೇಲುತ್ತಿರಬಹುದು. ಆಗ ನಾವು ಅಮ್ಮನ ಗಟ್ಟಿಯಾಗಿ ಬಿಗಿಯಾಗಿ ಹಿಡಿದುಕೊಂಡಿರಬೇಕು. ಸಾಯುವಾಗ ಅಮ್ಮನ ಜೊತೆಯೇ ಸಾಯಬೇಕು ಎಂದು ಪರಸ್ಪರ ನಿರ್ಧರಿಸಿಕೊಂಡೆವು. ಅಮ್ಮ ಮಧ್ಯೆ ಮಲಗಿದ್ದಳು. ನಾನು ಮತ್ತು ತಮ್ಮ ಆ ಕಡೆ-ಈ ಕಡೆ ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡು ಮಲಗಿದ್ದೆವು. ಅಮ್ಮ ಅವಿದ್ಯಾವಂತೆಯಾದರೂ ನಮ್ಮಿಬ್ಬರ ಭಯಕ್ಕೆ ನಗುತ್ತಿದ್ದಳು. ಅದೆಲ್ಲಾ ಸುಳ್ಳು ಎಂದು ಹೇಳುತ್ತಿದ್ದಳು. ಮಲಗಿರುವಾಗಲೇ ಪ್ರಳಯ ಆದ್ರೆ ಗೊತ್ತಾಗೋದಿಲ್ಲ ಅಂತ ನಮ್ಮಿಬ್ಬರ ಲೆಕ್ಜಾಚಾರ. ಆದ್ರೆ, ಮಧ್ಯರಾತ್ರಿ ತನಕ ನಿದ್ದೆನೇ ಬರಲಿಲ್ಲ. ರಾತ್ರಿ ನಮಗೆ ಮೂತ್ರ ಬಂದರೂ ಅಮ್ಮನ ಬಿಟ್ಟು ಎದ್ದು ಹೋಗಲು ಭಯವಾಗಿತ್ತು!.<br />
<br />
ಅಂತೂ ಪ್ರಳಯ ಆಗಲೇ ಇಲ್ಲ. ಬೆಳಗಿನ ಐದರ ಹೊತ್ತಿಗೆ ಕೋಳಿ ಕೂಗಿತು. ಎಂದಿನಂತೆ ಸೂರ್ಯ ಬೆಳಗಿನೊಂದಿಗೆ ಸ್ವಾಗತಿಸಿದ್ದ. ನಾವಿಬ್ಬರೂ ಎದ್ದಾಗ ಅಮ್ಮ ರೊಟ್ಟಿ ತಟ್ಟುತ್ತಿದ್ದಳು.<br />
<div>
<br /></div>
</div>
ಧರಿತ್ರಿhttp://www.blogger.com/profile/13431094762447988960noreply@blogger.com3tag:blogger.com,1999:blog-3759631957739186729.post-29287738387320288222012-10-16T05:08:00.001-07:002012-10-16T05:08:17.464-07:00 ಅಜ್ಜಿ ಮತ್ತು ಟಿಕೆಟ್ <div dir="ltr" style="text-align: left;" trbidi="on">
<br />
ನನ್ನ ಕಾಲದಲ್ಲಿ ಮಾರ್ಕೆಟ್ಟಿಗೆ ನಡೆದುಕೊಂಡು ಹೋಗ್ತಿದ್ದೆ ಕಣವ್ವಾ..ಎಂದು ಎಪ್ಪತ್ತರ ಅಜ್ಜಿ ನಕ್ಕು ನನ್ನ ಹತ್ತಿರ ಬಂದು ಕುಳಿತುಕೊಂಡಳು. ವೀಳ್ಯದೆಲೆ ತಿಂದು ಬಾಯಿ ಕೆಂಪಾಗಿತ್ತು. ಮೂಗಿನಲ್ಲಿ ಹಳೇ ಕಾಲದ ದೊಡ್ಡ ನತ್ತು ಮಿನುಗುತ್ತಿತ್ತು. ಸೊಂಟದಲ್ಲಿ ಕಾಸಿನ ಚೀಲ. ನೋಡಕ್ಕೂ ಲಕ್ಷಣವಾಗಿದ್ದ ಅಜ್ಜಿಯ ಮಾತಿಗೆ ಹ್ಲೂಂಗುಡದೆ ವಿಧಿಯಿಲ್ಲ.<br />
<br />
ನಮ್ಮನೆ ಸಮೀಪ ಬಸ್ ಹತ್ತಿದರೆ ಮಾರುಕಟ್ಟೆಗೆ ಸುಮಾರು 10 ಕಿ.ಮೀ. ದೂರ. ಅಜ್ಹಿ ಮಾತು ಮುಂದುವರೆಸಿದಾಗ ಕಿವಿಯಲ್ಲಿದ್ದ ಇಯರ್ ಫೋನ್ ತೆಗೆದು ಬ್ಯಾಗ್ ಗೆ ತುಂಬಿಸಿಕೊಂಡೆ. 'ನಾನು ನಿನ್ ತರ ಇದ್ದಾಗ ಮಾರ್ಕೆಟ್ಟಿಗೆ ನಾಲ್ಕಾಣೆ ಟಿಕೆಟ್ ಕಣವ್ವಾ. ನಾಲ್ಕಾಣೆ ಸಂಪಾದಿಸಕೂ ಕಷ್ಟದ ಕಾಲ ಅದು. ಬಸ್ ಗೆ ಕೊಡೋ ನಾಲ್ಕಣೆಯಲ್ಲಿ ಬುಟ್ಟಿ ತುಂಬಾ ಹೂವ ಬರುತ್ತಿತ್ತು ತಾಯಿ. ಈಗ ಒಂದು ಮೊಳಕ್ಕೆ 20 ಕೊಡ್ಬೇಕು. ಆಗ ನೋಡು, ನಾಲ್ಕಾಣೆಗೆ ಐದು ಕೆ.ಜಿ. ಹೂವ ಸಿಗೋದು. ಏನ್ ಕಾಲ ಬಂತವ್ವಾ?' ಎಂದು ಕಿಟಕಿ ಪಕ್ಕ ಕುಳಿತ ನನ್ನ ಸರಿಸಿ, ವೀಳ್ಯದೆಲೆಯನ್ನು ಕ್ಯಾಕರಿಸಿ ಹೊರಗೆ ಉಗಿದಳು.<br />
<br />
ಏನೂ ಅಂದ್ಕೋಬೇಡ ಕಣವ್ವಾ, ಬಾಯಲ್ಲಿ ಇಟ್ಟುಕೊಂಡು ನನಗೆ ಅಭ್ಯಾಸ ಇಲ್ಲ ಅಂದಳು. ಪರ್ವಾಗಿಲ್ಲಮ್ಮಾ ಅಂದೆ. ನಂಗೆ ಮಾರ್ಕೆಟ್ಟಿಗೆ 10 ರೂ. ಇತ್ತು. ಈಗ 12 ಆಗಿದೆ. ಏನ್ ರೇಟೋ? ಟಿಕೆಟ್, ತರ್ಕಾರಿ, ಪೆಟ್ರೋಲ್, ಗ್ಯಾಸ್ ಎಲ್ಲನೂ ಜಾಸ್ತಿ ಮಾಡವ್ರೆ. ದಿನಾ ಬಂದ್. ನಮ್ಮೊಂಥರಿಗೆ ಕಷ್ಟ. ಮೊನ್ನೆಬಂದ್ ಆಯಿತಲ್ಲಾ...ಹೂವ ತರಕೆ ಮಾರ್ಕೆಟ್ಟಿಗೆ ಬರ್ಬೇಕಿತ್ತು. ಎರಡು ದಿನ ವ್ಯಾಪಾರ ಇಲ್ಲ. ಒಂದು ದಿನ ವ್ಯಾಪಾರ ಇಲ್ಲಾಂದ್ರೆ ಒಂದು ದಿನದ ಊಟ ಇಲ್ಲಮ್ಮಾ..ಎಂದು ಮತ್ತೊಮ್ಮೆ ನನ್ನ ಪಕ್ಕ ಸರಿಸಿ ಉಗಿದಳು. ಕಳೆದ ಸಲ ನಮ್ಮ ಮನೆಪಕ್ಕದ ಸಾಹುಕಾರಪ್ಪ ಎಲೆಕ್ಷನ್ ದಿನ ನಮ್ಮನೆಗೆ ಕಾರು ತಕೋ ಬಂದು ಹತ್ತಿಸಿಕೊಂಡಿದ್ದ. ಇಂಥ ಚಿಹ್ನೆಗೆ ಓಟು ಹಾಕ್ಬೇಕು ಅಂದಿದ್ದ. ಒಂದು ಸಾವಿರ ರೂಪಾಯಿನೂ ಕೊಟ್ಟಿದ್ದ. ನಾನು ಹಂಗೇ ಮಾಡಿದ್ದೆ ಕಣವ್ವಾ. ಅವನದೇ ಸರ್ಕಾರ ಬಂತು. ಆದ್ರೆ, ಈ ಬಾರಿಯಂತೂ ನಾನು ಓಟು ಹಾಕಕೇ ಹೋಗಲ್ಲ. ಈ ಪರಿ ರೇಟು ಮಾಡಿದ್ರೆ ಏಕಮ್ಮಾ ಓಟು ಹಾಕೋದು?...ಎನ್ನುತ್ತಿದ್ದ ಅಜ್ಜಿ ಕೈಚೀಲದಲ್ಲಿದ್ದ ಪುಡಿ ಚಿಲ್ಲರೆಯನ್ನು ತೆಗೆದು ನನ್ನ ಅಂಗೈಯಲ್ಲಿಟ್ಟು ಎಣಿಸಿಕೊಡು ಎಂದಳು.<br />
<br />
ಅಂದಹಾಗೆ, ನಿನ್ ಊರು ಯಾವುದು? ಎಲ್ಲೋಗ್ಬೇಕು ಎಂದು ಪರಿಚಯನೂ ಮಾಡಿಕೊಂಡ ಅಜ್ಜಿ. ನನ್ನ ಮುಖವನ್ನೊಮ್ಮೆ ದಿಟ್ಟಿಸಿ ನೋಡಿದಳು. ಲಕ್ಷಣವಾಗಿದ್ದೀಯಾ, ಆದರೆ, ಒಂದು ಕೈಗೆ ಯಾಕೆ ಬಳೆ ಹಾಕಿಲ್ಲ ಎಂದು ಕೇಳಬೇಕೆ? ಹೆಣ್ಣು ಮಕ್ಕಳು ಹೂವ ಮುಡ್ಕೊಂಡು, ಕೈಗೆ ಬಳೆ ತೊಟ್ಟು ಲಕ್ಷಣವಾಗಿರಬೇಕು ಕಣಮ್ಮಾ. ಮುತ್ತೈದೆಯರಿಗೆ ಕೈಲೀ ಬಳೆ ಇರ್ಬೇಕು ಎಂದು ಉಪದೇಶ ಮಾಡಿದಳು. ನಿತ್ಯ ಬಳೆ ತೊಡುತ್ತಿದ್ದ ನಾನು ಅಂದು ಅರ್ಜೇಂಟಾಗಿ ಬಸ್ ಹತ್ತಿದ್ದೆ!. ಅಜ್ಜಿಯ ಮಾತಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಬಸ್ ಕೆ.ಆರ್. ಸರ್ಕಲ್ ಸಿಗ್ನಲ್ ನಲ್ಲಿ ನಿಂತಿತ್ತು. ಅಜ್ಜಿ ಇನ್ನೂ ಜಾಸ್ತಿ ಮಾತಾಡುತ್ತೆ ಎಂದೇಳಿ, ಮತ್ತೆ ಕಿವಿಗೆ ಇಯರ್ ಫೋನ್ ಇಟ್ಟೆ. ನನ್ ಕೈಯಲ್ಲಿದ್ದ ಐಪಾಡ್ ನೋಡಿ, "ಇದೇನು ಮಗಾ? ಮೊಬೈಲಾ?' ಅಂತ ಕೇಳಬೇಕೆ. ಅದನ್ನು ವಿವರಿಸಿ ಸುಮ್ಮನಾಗಿಬಿಟ್ಟೆ.<br />
<br />
<br />
ಇನ್ನೇನೋ ಒಂದು ಸ್ಟಾಪ್, ಮಾರ್ಕೆಟ್ ಬಂದುಬಿಡುತ್ತೆ ಅನ್ನುವಾಗ ಅಜ್ಜಿ ಮತ್ತೆ ಮಾತಿಗೆ ಶುರುಮಾಡಿತ್ತು. ನೋಡವ್ವಾ, ನಂಗೆ ನಿನ್ ವಯಸ್ಸಿನ ಮೊಮ್ಮಕ್ಕಳು ಇದ್ದಾರೆ. ತುಂಬಾ ಮಾತಾಡಿಬಿಟ್ಟೆ. ಬೇಜಾರು ಮಾಡಬೇಡ ತಾಯಿ. ಒಳ್ಳೆದಾಗ್ಲಿ...ಅಂದುಬಿಟ್ಟಳು. ಕೂದಲು ಪೂರ್ತಿ ಬೆಳ್ಳಿಯಾಗಿದ್ದ ಅಜ್ಜಿ, ಜ್ಞಾನಕ್ಕೆ ಮನಸ್ಸಲ್ಲೇ ಸಲಾಂ ಅಂದೆ.<br />
<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com2tag:blogger.com,1999:blog-3759631957739186729.post-44541863980266043422012-10-11T00:45:00.000-07:002012-10-11T00:45:30.396-07:00ನನ್ನ ರೈಲು ಪ್ರಯಾಣ...<div dir="ltr" style="text-align: left;" trbidi="on">
<br />
<b><i>ರೈಲನ್ನು ದೂರ ನಿಂತು ನೋಡಿದವಳಿಗೆ ಅಂದು ರೈಲಿನ ಒಳಗಡೆ ಹೋಗಿ ನೋಡುವ ತವಕ. ಕಿಟಕಿ ಬಳಿ ಕುಳಿತರೆ ಏನೆಲ್ಲಾ ನೋಡಬಹುದು, ನನಗೂ ದಾರಿಹೋಕರೆಲ್ಲಾ ಕೈ ಬೀಸಬಹುದು, ಹೊಲ ಗದ್ದೆಗಳನ್ನು, ಹಸಿರು ಹಾಸನ್ನು, ಮುಗಿಲ ಚಿತ್ತಾರವನ್ನು ನೋಡುತ್ತಾ ಹೋಗಬಹುದೆನ್ನುವ ಖುಷಿ. </i></b><br />
<b><i><br /></i></b>
<br />
ಸಂಜೆ ನಾಲ್ಕರ ಹೊತ್ತಿಗೆ ಗಂಟೆ ಢಣ ಢಣ ಎನ್ನುವುದೇ ತಡ, ಗೇಟು ದಾಟಿ ಒಂದು ಫರ್ಲಾಂಗು ಓಡಿ ಆಗುತ್ತಿತ್ತು. ಏಕೆಂದರೆ, ನಾಲ್ಕೂವರೆ ಸರಿಯಾಗಿ ರೈಲು ಬರುತ್ತಿತ್ತು!. ಅದು ಕೂ ಎನ್ನುತ್ತಾ ಚುಕುಬುಕು ಸದ್ದು ಮಾಡುತ್ತಾ ದಟ್ಟ ಹೊಗೆ ಸೂಸುತ್ತಾ ಬರುವುದನ್ನು ನೋಡುವುದೇ ಚೆಂದ. ಅದು ಉಗಿಬಂಡಿ. ಇನ್ನು ರೈಲು ಬಂದಾಗ ಕಿಟಕಿಯಿಂದ ಇಣುಕುತ್ತಿದ್ದವರಿಗೆ ಟಾಟಾ ಮಾಡುವುದೇ ಖುಷಿ. ರೈಲು ನೋಡುವ ಸಂಭ್ರಮ ಹೈಸ್ಕೂಲ್ ಮುಗಿಯೋ ತನಕ ಇತ್ತು. ಕಾಲೇಜಿಗೆ ಬಂದ ಮೇಲೆ ರೈಲು ನೋಡಲಾಗಲೇ ಇಲ್ಲ.<br />
<br />
ಬಳಿಕ ರೈಲು ಪ್ರಯಾಣ ಮಾಡುವ ಅವಕಾಶ ಸಿಕ್ಕಿದ್ದು ಮದ್ವೆಯ ಬಳಿಕ. ನಮ್ಮನೆಯವರು ಹನಿಮೂನ್ ಗೆಂದು ಕೇರಳಕ್ಕೆ ರೈಲು ಬುಕ್ ಮಾಡಿದ್ದರು. ಅಲ್ಲಿಯವರೆಗೆ ರೈಲಲ್ಲಿ ಪ್ರಯಾಣಿಸದ ನಾನು ಹುಟ್ಟಿದ 27 ವರ್ಷಗಳ ಬಳಿಕ ರೈಲು ಹತ್ತಿದ್ದೆ. ಅದೂ ಮೆಜೆಸ್ಟಿಕ್ ನಲ್ಲಿ. ರೈಲನ್ನು ದೂರ ನಿಂತು ನೋಡಿದವಳಿಗೆ ಅಂದು ರೈಲಿನ ಒಳಗಡೆ ಹೋಗಿ ನೋಡುವ ತವಕ. ಕಿಟಕಿ ಬಳಿ ಕುಳಿತರೆ ಏನೆಲ್ಲಾ ನೋಡಬಹುದು, ನನಗೂ ದಾರಿಹೋಕರೆಲ್ಲಾ ಕೈ ಬೀಸಬಹುದು, ಹೊಲ ಗದ್ದೆಗಳನ್ನು, ಹಸಿರು ಹಾಸನ್ನು, ಮುಗಿಲ ಚಿತ್ತಾರವನ್ನು ನೋಡುತ್ತಾ ಹೋಗಬಹುದು. ಎಲ್ಲವನ್ನೂ ನೆನೆಸಿಕೊಂಡು ಮನಸ್ಸು ಖುಷಿಪಡುತ್ತಿತ್ತು. ಮದ್ವೆಯಾಗಿ ಹನಿಮೂನ್ ಗೆ ಹೋಗ್ತೀವಿ ಅನ್ನೋ ಖುಷಿಗಿಂತಲೂ ರೈಲಿನೊಳಗೆ ಏನೇನು ಅಚ್ಚರಿ, ಅದ್ಭುತಗಳಿವೆ ಎಂಬ ಬಗ್ಗೆ ನಾನು ಹೆಚ್ಚು ಕುತೂಹಲಗೊಂಡಿದ್ದೆ.<br />
<br />
ರೈಲು ಹತ್ತಿಯಾಯಿತು. ಕಿಟಕಿ ಬದಿಯ ಸೀಟು ಗಿಟ್ಟಿಸಿಕೊಂಡಾಯ್ತು. ಆದರೆ, ಸ್ಲಿಪರ್ ಕೋಚ್ ಆಗಿದ್ದರಿಂದ ನಮ್ಮನೆಯವರು ನೀನು ಕೆಳಗಡೆ ಮಲಗು, ನಾನು ಮೇಲೆ ಮಲಕ್ಕೊಳ್ತಿನಿ ಅಂದ್ರು. ನನಗೆ ಭಯ ಶುರು. ನಿದ್ದೆ ಮಾಡಿದಾಗ ಯಾರಾದ್ರೂ ಕಳ್ಳರು ಬಂದ್ರೆ ಏನು ಗತಿ? ಕಣ್ಣುಗಳು ಕೊಳಗಳಾದವು. ಎಷ್ಟು ಸಮಾಧಾನ ಹೇಳಿದ್ರೂ ಕೇಳದೆ, ಅವರನ್ನು ಪಕ್ಕ ಕೂರಿಸಿಕೊಂಡು ಅಂಟಿಕೊಂಡು ಕುಳಿತುಬಿಟ್ಟಿದ್ದೆ. ಬಾತ್ ರೂಂಗೆ ಹೋಗಕೂ ಭಯ. ಹೇಗೋ ಬೆಳಗಾಯ್ತು. ಕೆಲವರು ರೈಲಿನ ಬಾಗಿಲಲ್ಲಿ ನಿಂತು ಎಲ್ಲವನ್ನೂ ನೋಡುತ್ತಾ, ಕೈ ಬೀಸುತ್ತಾ ಸಾಗುವಾಗ ಬಿದ್ದುಬಿಟ್ಟರೆ? ಎಂದು ನಾನೇ ಆತಂಕಗೊಳ್ಳುತ್ತಿದ್ದೆ. ಬೆಳಿಗ್ಗೆ 10ರ ಹೊತ್ತಿಗೆ ಕೊಚ್ಚಿನ್ನಲ್ಲಿ ಇಳಿದಾಗ ಮನಸ್ಸು ನಿರಾಳವಾಯಿತು.<br />
<br />
********<br />
ಇನ್ನೊಂದು ಮೈಸೂರಿಗೆ ರೈಲಿನಲ್ಲಿ ಪ್ರಯಾಣ. ಅಂದು ಸಿಕ್ಕಿದ್ದು ಸಾಮಾನ್ಯ ಬೋಗಿ. ರೈಲು ಸಹವಾಸಬೇ ಬೇಡ ಅನಿಸಿದ್ದು ಆವಾಗ. ಎದುರುಗಡೆ ಏಳೆಂಟು ಹೆಂಗಸರು, ಪಕ್ಕದಲ್ಲಿ ಕಚ್ಚೆ ಹಾಕಿದ ರೈತರು. ಪದೇ ಪದೇ ವೀಳ್ಯದೆಲೆ ಜಗಿದು ಕಿಟಕಿ ಬದಿಯಲ್ಲಿ ಕುಳಿತು ಮೌನವಾಗಿದ್ದ ನನ್ನ ಸ್ವಲ್ಪ ಪಕ್ಕ ಸರೀಮ್ಮಾ ಎಂದೇಳಿ ಕ್ಯಾಕರಿಸಿ ಉಗಿಯೋರು. ಎದುರುಗಡೆ ಕುಳಿತ ಹೆಂಗಸರ ಬಾಯಲ್ಲಂತೂ ಊರ ಸುದ್ದಿ, ಸೀರಿಯಲ್ ಗಳು ಎಲ್ಲವೂ ತೂರಿ ಬಂದವು. ಮೈಸೂರು ತಲುಪುವವರೆಗಿನ ಆ ಮೂರು ಗಂಟೆಗಳು ನನಗೆ ಅತ್ಯಂತ ಕಷ್ಟದ ಸಮಯವಾಗಿತ್ತು.<br />
*********<br />
ಇನ್ನೊಂದು ಮೈಸೂರಿನಿಂದ ವಾಪಸ್ ಬರುವ ಪ್ರಸಂಗ. ಜನರಲ್ ಬೋಗಿ ಕಿರಿಕಿರಿ ಬೇಡೆಂದು ಮೊದಲೇ ಟಿಕೆಟ್ ಕಾಯ್ದಿರಿಸಲಾಗಿತ್ತು. ಕಾರ್ಯಕ್ರಮಗಳೆಲ್ಲಾ ಮುಗಿಸಿ ಸೂರ್ಯ ಮುಳುಗುವ ಹೊತ್ತಿಗೆ ರೈಲು ಪ್ರಯಾಣಕ್ಕೆ ಸಿದ್ಧಳಾಗಿದ್ದೆ. ರೈಲು ತಡವಾಗಿ ಬಂದಿದ್ದರಿಂದ ನೂಕುನುಗ್ಗಲು. ಎಲ್ಲರೂ ಎಲ್ಲರನ್ನೂ ದೂಡಿ, ಒದ್ದು ಸಾಗುವವರೇ. ನಮ್ಮನೆಯವರು ನನ್ನ ಕೈಹಿಡಿದುಕೊಂಡು ನನ್ನನ್ನೂ ಎಳೆದುಕೊಂಡು ರೈಲು ಹತ್ತಲು ಅಣಿಯಾದರು. ಆದರೆ, ಜನಸಂದಣಿಯಲ್ಲಿ ನನ್ನ ಕೈ ತಪ್ಪಿ ನಾನು ಕೆಳಗಡೆಯೇ ಬಾಕಿಯಾದೆ. ಮತ್ತೆ ನಮ್ಮವ್ರು ನನ್ನ ಹುಡುಕಿಕೊಂಡು ವಾಪಸ್ ಬಂದಾಗ ಅಳುತ್ತಾ ಕೆಳಗಡೆಯೇ ನಿಂತಿದ್ದೆ. ಅಷ್ಟೊತ್ತಿಗೆ ರೈಲು ಚಲಿಸಲು ಆರಂಭಿಸಿತ್ತು!<br />
<br />
*********
<br />
ಈಗ ನಮ್ಮೂರಿಗೂ ರೈಲು ಬರುತ್ತಿದೆ. ಆದರೆ, ಸೀಟು ಸಿಗೋದೇ ಕಷ್ಟ. ಶಿರಾಡಿಘಾಟ್ ನಲ್ಲಿ ಬಸ್ ಗಳಲ್ಲಿ ಓಲಾಡಿಕೊಂಡು ಹೋಗುವ ನನಗೆ ಶಿರಾಡಿಘಾಟ್ ನ ಹಸಿರು ತಪ್ಪಲಲ್ಲಿ ಹಗಲಿನಲ್ಲಿ ರೈಲಿನಲ್ಲಿ ಪ್ರಯಾಣಿಸಬೇಕೆನ್ನುವ ಆಸೆಯಿದೆ.<br />
<div>
<br /></div>
</div>
ಧರಿತ್ರಿhttp://www.blogger.com/profile/13431094762447988960noreply@blogger.com2tag:blogger.com,1999:blog-3759631957739186729.post-15552004697595885212012-10-04T02:40:00.000-07:002012-10-04T02:40:41.909-07:00ಅಮ್ಮನಿಗೆ ವಯಸ್ಸಾಗುತ್ತಿದೆ...<div dir="ltr" style="text-align: left;" trbidi="on">
<br />
<br />
<br />
ಕಣ್ಣುಗಳು ಆಳಕ್ಕೆ ಇಳಿದಿದ್ದವು. ಕೆನ್ನೆಗಳೂ ಕಾಣಲಿಲ್ಲ, ಕೆನ್ನೆ ಮೇಲಿದ್ದ ಗುಳಿಯೂ ಮಾಯವಾಗಿತ್ತು. ವೀಳ್ಯದೆಲೆ ತಿಂದು ಬಾಯಿ ಕೆಂಬಣ್ಣಕ್ಕೆ ತಿರುಗಿತ್ತು. ಹಲ್ಲುಗಳೂ ಇರಲಿಲ್ಲ. ಬೊಕ್ಕು ಬಾಯಿ ಅಗಲಿಸಿ ನಕ್ಕಾಗ ಮಗುವಿನಂತೆ ಕಂಡಳು. ಮಕ್ಕಳು ಬಿಟ್ಟರೆ ಇನ್ಯಾವ ನೆನಪುಗಳೂ ಅವಳಿಗಿಲ್ಲ. ಒಂದೊಂದು ಸಲ ಮಗುವಿನಂತೆ ರಚ್ಚೆ ಹಿಡಿಯುತ್ತಾಳೆ, ಇನ್ನೊಂದು ಸಲ ಗಂಭೀರವಾಗಿ ಜಗಲಿ ಮೇಲೆ ಕುಳಿತು ತನ್ನ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾಳೆ.<br />
<br />
ಊರಿನ ಸೋಮನ ಅಮ್ಮಂಗೆ ವಿಧವಾ ವೇತನ, ಆಶ್ರಯ ಯೋಜನೆ ಜಾರಿಯಾಗಬೇಕಾದರೆ ಗ್ರಾಮ ಪಂಚಾಯ್ತಿಯಿಂದ ಹಿಡಿದು ತಾಲೂಕು ಕಚೇರಿ, ತಹಶೀಲ್ದಾರ್ ಅಂತ ಸುತ್ತಾಡಿದ್ದು ಅವಳೇ. ಊರಿನ ಹೆಂಗಳೆಯರ ಮಧ್ಯದಲ್ಲಿ ನಾಯಕಿಯಾಗಿ ಮೆರೆದವಳು ಅವಳೇ. ಅವರ ಸಮಸ್ಯೆ, ದೂರು-ದುಮ್ಮಾನಗಳನ್ನು ತಂದು ಹರವಿದರೆ ಅದಕ್ಕೆ ಪರಿಹಾರ ಸೂಚಿಸುವವಳು ಅವಳೇ. ಐದು ಎಕರೆ ಜಮೀನಿನಲ್ಲಿ ತೆಂಗು-ಕಂಗು, ಬಾಳೆಗಳನ್ನು ನೆಟ್ಟು ನಿತ್ಯ ಅವುಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದಳು. ಮುಂಜಾವು ಹೊತ್ತಿಗೇ ಎದ್ದು ದನಕರುಗಳನ್ನು ತೊಳೆದು, ಹಾಲು ಕರೆದು, ಗಂಜಿ ಕುಡಿದು ತೋಟಕ್ಕೆ ಹೋದರೆ ಸೂರ್ಯ ಮೇಲೇರುವ ಹೊತ್ತಿಗೆ ವಾಪಸ್ ಬರುತ್ತಿದ್ದಳು. ಅನ್ನ-ಹಸಿವು, ನೀರಡಿಕೆಗಳ ಗುಂಗಿಲ್ಲದೆ ತನ್ನ ಕೆಲಸದಲ್ಲೇ ದೇವರನ್ನು ಕಂಡವಳು ಅವಳು. ಕೂಲಿ-ನಾಲಿಗೆ ಹೋಗುವುದು ಅವಮಾನವೆಂದು ಬಗೆದು ತನ್ನ ತೋಟವನ್ನೇ ನಂದನವನ ಆಗಿಸಿ, ಬಟ್ಟಲು ಅನ್ನ ಸಂಪಾದಿಸಿದವಳು.<br />
<br />
ಗಂಡ ಬಿಟ್ಟು ಇನ್ನೊಬ್ಬಳ ತೆಕ್ಕೆ ಸೇರಿದಾಗ ಅತ್ತು-ಕರೆದು ರಂಪ ಮಾಡಿ ಹೋದದ್ದು ಹೋಯಿತು, ಮಕ್ಕಳ ನಗುವಿನಲ್ಲೇ ನನ್ನ ಸುಖವಿದೆ ಎಂದುಕೊಂಡವಳು. ಮಗ ಹೊಸ ಕೊಡೆ, ಹೊಸ ಬಟ್ಟೆ ಬೇಕೆಂದಾಗ ಕಿವಿಯೋಲೆ ಅಡವಿಟ್ಟು ಬಣ್ಣದ ಕೊಡೆ ತಂದವಳು. ಪ್ರತಿಷ್ಠಿತ ಕಾಲೇಜಿನಲ್ಲಿ ಮಕ್ಕಳಿಗೆ ಸೀಟು ಸಿಗಬೇಕೆಂದು ತಿಂಗಳುಗಟ್ಟಲೆ ಬಿರುಬಿಸಿಲಿಗೂ ನಡೆದರೂ ದಣಿವಾಗದವಳು. ಅಕ್ಷರಗಳ ಅರಿವಿಲ್ಲದೆಯೇ ಕಾನೂನು, ಲೋಕಜ್ಞಾನ ಪಡೆದವಳು.<br />
<br />
ಅಮ್ಮಾ..ಎಂದಾಗ "ಮಗಳೇ' ಎನ್ನುವ ಪುಟ್ಟ ನಗು ಮುಖದಲ್ಲಿ. ನಮಗೆ ಎಲ್ಲವನ್ನೂ ಅರ್ಥಮಾಡಿಸಿದ ಅವಳಿಗೆ ಇಂದು ಏನೂ ಅರ್ಥವಾಗುವುದಿಲ್ಲ. ನೆನಪುಗಳು ಮಾಸಿಹೋಗುತ್ತಿವೆ. ಉಂಡಿದ್ದು, ನಕ್ಕಿದ್ದು, ಮಾತಾಡಿದ್ದು ಎಲ್ಲವೂ ಅರೆಕ್ಷಣದ ನೆನಪುಗಳು. ವಯಸ್ಸನ್ನು ಹಿಡಿದು ನಿಲ್ಲಿಸೋಣ ಅಂದ್ರೆ ಅದೂ ಕೈಲಾಗುತ್ತಿಲ್ಲ. ಅಮ್ಮ ವಯಸ್ಸಿನೊಂದಿಗೆ ನಡೆಯುತ್ತಿದ್ದಾಳೆ.<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com5tag:blogger.com,1999:blog-3759631957739186729.post-60063505659098721002012-08-25T00:42:00.001-07:002012-08-25T00:42:36.571-07:00 ಅಮ್ಮನ ತಿಜೋರಿ<div dir="ltr" style="text-align: left;" trbidi="on">
<br />
ಅಮ್ಮ ಮೊದಲ ಬಾರಿ ಆ ಪೆಟ್ಟಿಗೆ ತೆರೆದಿದ್ದು ನೆನಪಿದೆ. ಅಂದು ಅಮ್ಮ ನಸುಕೆಂಪು ಬಣ್ಣದ ನೈಲಾನ್ ಸೀರೆ ಉಟ್ಟಿದ್ದಳು. ಅದು ಬೇಸಿಗೆಕಾಲವಾಗಿತ್ತು. ಏಣಿ ಹತ್ತಿ ಅಟ್ಟದಿಂದ ಆ ಪೆಟ್ಟಿಗೆಯನ್ನು ತಂದು ಮನೆಯ ಜಗಲಿಯಲ್ಲಿ ಇಟ್ಟಳು. ಪೆಟ್ಟಿಗೆ ಮೇಲೆ ತುಂಬಿದ ಮಸಿ, ಧೂಳನ್ನು ಬಟ್ಟೆಯಿಂದ ಒರೆಸಿ, ಸೆರಗಿನಲ್ಲಿದ್ದ ಬೀಗದ ಕೀಯಿಂದ ಪೆಟ್ಟಿಗೆ ತೆರೆದಳು. ನಾನು ಕಾಲು ಮಡಿಚಿ ಅದನ್ನೇ ಎವೆಯಿಕ್ಕದೆ ನೋಡುತ್ತಿದ್ದೆ. ತೆರೆಯುವ ಮೊದಲೇ ಯಾವುದಕ್ಕೂ ಕೈ ಹಾಕಬೇಡ ಎಂದು ಆದೇಶ ಹೊರಡಿಸಿದ್ದಿರಿಂದ ನಾನು ಕೈ-ಕಾಲು ಬಿಗಿಹಿಡಿದು ಸುಮ್ಮನೆ ಕೂರಬೇಕಾಗಿತ್ತು.<br />
<br />
ಅಮ್ಮನ ಬಳಿ ಇದ್ದಿದ್ದು ಕಬ್ಬಿಣದ ಪೆಟ್ಟಿದೆ. ಅದಕ್ಕೆಕೆಂಪು ಮತ್ತು ಹಸಿರು ಬಣ್ಣ ಬಳಿಯಲಾಗಿತ್ತು. ಅದರ ಬೀಗದ ಚಿನ್ನದ ಬಣ್ಣ. ದೊಡ್ಡ ಬೀಗ ಅದು. ಅದರ ಕೀ ಯಾವಾಗಲೂ ಅಮ್ಮನ ಸೆರಗಿನ ಗಂಟಿನಲ್ಲಿರುತ್ತಿತ್ತು. ಎಲ್ಲೇ ಹೋದರೂ ಅಮ್ಮ ಅದನ್ನು ಜೊತೆಗೆ ಕೊಂಡೊಯ್ಯುವಳು. ಅಂಗಡಿಗೆ, ಪಕ್ಕದ್ಮನೆಗೆ, ಸಂತೆಗೆ ಹೋದಾಗಲೆಲ್ಲಾ ಸೆರಗಿನಲ್ಲಿದ್ದ ಆ ಕೀಯನ್ನು ಪದೇ ಪದೇ ಮುಟ್ಟಿ ನೋಡುತ್ತಿದ್ದಳು. ಅದ್ಯಾಕೆ ಸೆರಗಿನಲ್ಲಿ ಇಟ್ಟುಕೊಳ್ತೀಯಾ ಎಂದು ಕೇಳಿದರೆ, ಬಿದ್ದುಹೋದರೆ ನನ್ನ ಜೀವನನೇ ಮುಗಿದಂತೆ. ಅದಕ್ಕೆ ಯಾವಾಗಲೂ ಜೊತೆಗೆ ಇಟ್ಟುಕೊಳ್ಳುತ್ತೇನೆ ಎನ್ನುವ ಸಮಜಾಯಿಷಿ ಆಕೆಯದು.<br />
<br />
ತೆರೆದಾಗ ಮೊದಲು ತೋರಿಸಿದ್ದು ಅಮ್ಮನ ಮದುವೆ ಸೀರೆ. ಅವಳ ಮದುವೆಗೆ ಎರಡೇ ಸೀರೆ ತೆಗೆದಿದ್ದಂತೆ. ಅಮ್ಮ ಮದ್ವೆಗೆ ಖರ್ಚಾಗಿದ್ದು ಕೇವಲ 103 ರೂಪಾಯಿ. ಮದ್ವೆಗೆ ಏನೇನು ಖರ್ಚು ಮಾಡಿದ್ದೆ ಎಂದು ಅದನ್ನು ಲೆಕ್ಕ ಬರೆಸಿಟ್ಟಿದ್ದಳು. ಅವಳ ಮದ್ವೆಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನೂ ಹಸಿರು ಬಣ್ಣದ ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿಸಿಟ್ಟಿದ್ದಳು. ಮತ್ತೊಂದು ಬಿಳಿ ಬಣ್ಣದ ಕವರ್ ತೆಗೆದಳು. ಅದರಲ್ಲಿ ಏನೇನೋ ದಾಖಲೆಗಳು, ರಸೀದಿಗಳು ತುಂಬಿದ್ದವು. ನೋಡು ಓದು. ಎಂದು ಕೊಟ್ಟಳು. "ತೆರಿಗೆ'' ಎಂದು ಬರೆದಿತ್ತು. ಅದನ್ನು ಹಾಗೇ ಓದಿ ಹೇಳಿದಾಗ, ಅಮ್ಮ ಅದು ಮನೆ ತೆರಿಗೆ ಕಟ್ಟಿದ ರಸೀದಿ, ಮನೆಗೆ ಸರ್ಕಾರಕ್ಕೆ ತೆರಿಗೆ ಕಟ್ಟಬೇಕು..ಎಂದು ಅದರ ವಿವರಗಳನ್ನು ನೀಡಿದಳು. ಮತ್ತೆ ಇನ್ನೊಂದು ಕೆಂಪು ಬಣ್ಣದ ಕವರ್ ತೆಗೆದಳು; ಅದರಲ್ಲಿ ಜಮೀನಿಗೆ ಸಂಬಂಧಿಸಿದ ದಾಖಲೆಗಳು ಇದ್ದವು...ಹೀಗೆ ಪ್ರತಿ ಕವರ್ ಕೂಡ ಬೇರೆ ಬೇರೆ ಬಣ್ಣ ಹೊಂದಿರುತ್ತಿತ್ತು, ಅಮ್ಮ ಕವರಿನ ಬಣ್ಣದ ಮೇಲೆಯೇ ಅದೇನೆಂದು ಗುರುತು ಇಟ್ಟುಕೊಂಡಿದ್ದಳು. ಜೊತೆಗೆ, ಆ ಕವರ್ ಗಳನ್ನು ಅಷ್ಟೇ ಶಿಸ್ತಿನಿಂದ ಇಟ್ಟುಕೊಳ್ಳುತ್ತಿದ್ದಳು. ಅಮ್ಮನ ಬಳಿ ಅವಳ ಮದ್ವೆಯ ಫೋಟೋ ಇರಲಿಲ್ಲ, ಆದರೆ, ಅಮ್ಮನ ಅಪ್ಪ ಎಂದರೆ ಅಜ್ಜನ ವಿಭಿನ್ನ ಭಂಗಿಯ ಚೆಂದದ ಫೋಟೋಗಳಿದ್ದವು. ಅವುಗಳು ಹಾಳಾಗದಂತೆ ಪ್ಲಾಸ್ಟಿಕ್ ಕವರ್ ನಲ್ಲಿ ತುಂಬಿಸಿಟ್ಟಿದ್ದಳು.<br />
<br />
ಅಜ್ಜನ ಮೇಲೆ ಅಮ್ಮಂಗೆ ಅಪಾರ ಪ್ರೀತಿ. "ನಾನು ನನ್ನಪ್ಪನ ತರ' ಎನ್ನುವಳು. ಪದೇ ಪದೇ ಅಜ್ಜನ ಫೋಟೋ ನೋಡಿ ಖುಷಿಪಡುವಳು. ಜೊತೆಗೆ, ಅಜ್ಜನ ಜೊತೆ ಬೇಟೆಗೆ ಹೋಗಿದ್ದು, ಕಳ್ಳು ತೆಗೆಯಲು ಹೋಗಿದ್ದು, ಗದ್ದೆಗೆ ಉಳಲು ಹೋಗಿದ್ದು, ಅಜ್ಜ ಹೊಡೆದಿದ್ದು, ಹೆಗಲ ಮೇಲೆ ಕೂರಿಸಿಕೊಂಡು ಹೋಗಿದ್ದು, ಕಳ್ಳಭಟ್ಟಿ ಮಾಡಿ ಅಜ್ಜ ಪೊಲೀಸರಿಗೆ ಸಿಕ್ಕಿಬಿದ್ದಾಗ...ಅಮ್ಮನೇ ಬಿಡಿಸಿಕೊಂಡು ಬಂದಿದ್ದು...ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದಳು. ಅಜ್ಜನ ಬಗ್ಗೆ ಹೇಳುವಾಗಲೆಲ್ಲಾ ಅಮ್ಮನ ಕಣ್ಣುಗಳಲ್ಲಿ ಹೆಮ್ಮೆಯ ಭಾವ ಒಡಮೂಡುತ್ತಿತ್ತು. ಅಮ್ಮನ ಕಬ್ಬಿಣದ ಪೆಟ್ಟಿಗೆ ಈಗಲೂ ಇದೆ. ಐವತ್ತೈದು ದಾಟಿದ ಅಮ್ಮ ಈಗಲೂ ಪೆಟ್ಟಿಗೆಯನ್ನು ಜೋಪಾನವಾಗಿಟ್ಟಿದ್ದಾಳೆ.<br />
<br />
<br />
<br />
<br />
</div>
ಧರಿತ್ರಿhttp://www.blogger.com/profile/13431094762447988960noreply@blogger.com2tag:blogger.com,1999:blog-3759631957739186729.post-60602286720794847182012-07-29T06:08:00.004-07:002012-07-29T06:08:58.549-07:00ನಮ್ಮನೆಗೆ ಟಿವಿ ಬಂತು!<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://4.bp.blogspot.com/-UHDIgr9jxv4/UBU1zW2XIMI/AAAAAAAAAMU/ct1cYZLpgw4/s1600/light_bulb.png" imageanchor="1" style="margin-left: 1em; margin-right: 1em;"><img border="0" src="http://4.bp.blogspot.com/-UHDIgr9jxv4/UBU1zW2XIMI/AAAAAAAAAMU/ct1cYZLpgw4/s1600/light_bulb.png" /></a></div>
<br />
<br />
ನಮ್ಮನೆಗೆ ಟಿವಿ ಬಂತು ಎಂದು ಹೇಳೋದು ಎಂಥ ವಿಚಿತ್ರ ಸುದ್ದಿ ಎಂದು ಅನಿಸುತ್ತೆ ಅಲ್ವೇ? ಈಗ ಯಾರ ಮನೆಯಲ್ಲಿ ಟಿವಿ, ಕಂಪ್ಯೂಟರ್ ಇಲ್ಲ ಅಂತ ಕೇಳ್ತೀವಿ. ಆದರೆ, ಪುತ್ತೂರಿನ ಪುಟ್ಟದೊಂದು ಹಳ್ಳಿ ಕಳೆಂಜೋಡಿ ಎಂಬಲ್ಲಿಗೆ ಮೊನ್ನೆ ಮೊನ್ನೆ ಕರೆಂಟು ಬಂತು. ಅಲ್ಲಿ ಇದ್ದಿದ್ದು 12 ಮನೆಗಳು ಮಾತ್ರ. ಪುಟ್ಟ ದ್ಬೀಪ ತರ ಇತ್ತು. ಸುತ್ತಮುತ್ತ ದಟ್ಟ ಕಾಡು., ಕರೆಂಟು ಕಂಬ ಹಾಕೋದೇ ಕಷ್ಟ ಅನ್ತಾ ಇದ್ರು. ಆದರೆ. ತಿಂಗಳ ಹಿಂದೆ ನಮ್ಮ ಹಳ್ಳಿಗೆ ಕರೆಂಟು ಬಂದಿದೆ. ಸರ್ಕಾರಿ ಯೋಜನೆಯಡಿಯಲ್ಲಿ ಮನೆಗಳಲ್ಲಿ ಎರಡು ಮೂರು ವಿದ್ಯುತ್ ದೀಪ ಬೆಳಗುತ್ತಿದೆ. ಚಿಮಿಣಿ ದೀಪ ನೋಡಿದ ಇಲ್ಲಿನ ಹೆಂಗಸರಿಗೆಲ್ಲಾ ಫುಲ್ ಖುಷಿ. ದಟ್ಟಕಾಡಿನ ನಡುವೆ ಪುಟ್ಟ ಪುಟ್ಟ ತೋಟಗಳ ನಡುವೆ ಇದ್ದ ಮನೆಗಳಲ್ಲಿ ಮೂರ್ನಾಲ್ಕು ಚಿಮಿಣಿ ದೀಪಗಳು. ಬೀಡಿ ಸುರುಟುವ ಹೆಂಗಸರೆಲ್ಲಾ ಈ ಚಿಮಿಣಿಗಳನ್ನೇ ಅವಲಂಬಿಸಿದ್ದರು. ಎಷ್ಟೊ ಬಾರಿ ನಿದ್ದೆಗಣ್ಣಿನಲ್ಲಿ ಬೀಡಿ ಸುರುಟುತ್ತಿರುವಾಗ ಆ ದೀಪ ಹಾಗೇ ಬಿದ್ದು, ಬೀಡಿಗಳೆಲ್ಲಾ ಸೀಮೆಎಣ್ಣೆ ವಾಸನೆ ಬಂದು ಆ ಬೀಡಿಗಳೇ ವ್ಯರ್ಥ ಆಗುತ್ತಿದ್ದವು. ಈಗ ಹೆಂಗಳೆಯರೆಲ್ಲಾ ವಿದ್ಯುತ್ ದೀಪ ದಡಿಯಲ್ಲಿ ಬೀಡಿ ಸುರುಟುತ್ತಿದ್ದಾರೆ.<br />
<br />
ನನ್ನ ತಮ್ಮಾಇಂದು ಬೆಳ್ಳಂಬೆಳಿಗ್ಗೆ ಫೋನು ಮಾಡಿದ್ದ. ಹಲೋ ಅನ್ನೋಕೆ ಮೊದಲೇ ಅಕ್ಕಾ ಟಿವಿ ಬಂತು ಅಂದ. ಕೇಬಲ್ ಹಾಕಿಸಿದ್ಯಾ? ಅಂತ ಕೇಳಿದೆ. ಎಲ್ಲಾ ಹಾಕಿಸಿದ್ದೀನಿ ಅಂದ. ಮೊದಲು ನನಗೆ ಮಾತೇ ಹೊರಡಲಿಲ್ಲ. ನನ್ನ ತಮ್ಮ ಮತ್ತು ನಾನು ಒಂದ್ಸಲ ಪಕ್ಕದೂರ ಗೌಡ್ರ ಮನೆಗೆ ಟಿವಿ ಬಂದಾಗ ಅದನ್ನು ನೋಡಲು ಅಲ್ಲಿಗೆ ಹೋಗಿದ್ದು ನೆನಪಾಯಿತು ನಮ್ಮ ಹಳ್ಳಿ ದಾಟಿ ಗೌಡ್ರ ಮನೆಗೆ ಹೋಗಬೇಕಿತ್ತು. ಆಗ ನನ್ನ ವಯಸ್ಸಿನ್ನೂ ಹತ್ತು ದಾಟಿರಲಿಲ್ಲ. ಊರಿನವರೆಲ್ಲಾ ಟಿವಿ ನೋಡಲು ಬರುತ್ತಿದ್ದರು. ಮಕ್ಕಳಂತೂ ಗೌಡ್ರ ಮನೆಯ ವರಾಂಡದಲ್ಲಿ ಎದುರು ಸಾಲಿನಲ್ಲಿ ಚಾಪೆ ಹಾಸಿ ಕೂರುತ್ತಿದ್ದರು.ನನ್ ತಮ್ಮ ಫೋನ್ ಮಾಡಿದಾಗ ಎಲ್ಲವೂ ಒಮ್ಮೆಲೇ ನೆನಪಾಯಿತು.<br />
<br />
ಟಿವಿ ಬಂದ ಖುಷಿಯನ್ನು ಅಮ್ಮಂಗೆ ಕೇಳೋಣ ಅನಿಸ್ತು. ಅಮ್ಮಾ, ಫುಲ್ ಖುಷೀನಾ ಅಂಥ ಕೇಳಿದೆ. ಅದಕ್ಕೆ ಅಮ್ಮಾ, ಏನು ಸೌಂಡು ಮಗಾ, ನನಗೆ ತಲೆ ಧಿಮ್ ಅನ್ಯಾ ಇದೆ. ನಿನ್ನೆಯಿಂದ ಮನೆಯಲ್ಲಿ ಜಾತ್ರೆ. ಏನೇನೋ ಹಾಕ್ತಾನೆ...ನೋಡ್ತಾರೆ. ನನಗಿನ್ನೂ ಅಭ್ಯಾಸವಾಗಬೇಕು ಅಂದ್ರು. ಮೊದಲೇ ಬಿಪಿ ಪೇಶೆಂಟು ಆಗಿರುವ ಅಮ್ಮಂಗೆ ಮೊದಲೇ ಗಜಿಬಿಜಿ, ಸದ್ದು&ಗದ್ದಲ ಆಗೋಲ್ಲ. ಸರಿ ಹೋಗುತ್ತೆ ಬಿಡಮ್ಮಾ ಅಂದೆ. ನಮ್ಮನೆಗೆ ಟಿವಿ ಬಂತು ಅಂಥ (ನಮ್ ಜನರೇಷನ್) ಕೇಳುವ ಸುದ್ದಿ ನಿಮಗೆ ಏನನಿಸಿತ್ತು?<br />
</div>ಧರಿತ್ರಿhttp://www.blogger.com/profile/13431094762447988960noreply@blogger.com5tag:blogger.com,1999:blog-3759631957739186729.post-83708810850331214982012-05-29T08:53:00.002-07:002012-05-29T09:12:28.363-07:00ಪ್ರಜಾವಾಣಿಯಲ್ಲಿ "ಧರಿತ್ರಿಯ ಚಿತ್ರಗಳು "<div dir="ltr" style="text-align: left;" trbidi="on">
<div class="separator" style="clear: both; text-align: center;">
<a href="http://prajavani.net/include/story.php?news=8495&section=56&menuid=13"><img border="0" height="284" src="http://1.bp.blogspot.com/-HyiqMzEKvYg/T8TzJ-uMx7I/AAAAAAAAAMI/fzpvo2JuQSs/s320/PRAJAVAANIEDITED.jpg" width="320" /></a></div>
<div>
<span style="font-family: Tunga, verdana;"><span style="font-size: 15px; line-height: 22px;"><br /></span></span><br />
<span style="font-family: Tunga, verdana; font-size: 15px; line-height: 22px;">ಧರಿತ್ರಿ! ಇದು ಬ್ಲಾಗ್ ಹೆಸರು. ಇಲ್ಲಿನ ಬರಹಗಳಿಗೆ ಬಂದಿರುವ ಕಮೆಂಟುಗಳನ್ನು ಆಧರಿಸಿ ಹೇಳುವುದಾದರೆ ಬ್ಲಾಗಿತಿಯ ಹೆಸರು ಚಿತ್ರಾ. ತಮ್ಮ ಬಗ್ಗೆ ಹೆಚ್ಚೇನೂ ಹೇಳಿಕೊಳ್ಳದ ಚಿತ್ರಾ- `ನನ್ನೂರು ಕರಾವಳಿ ತೀರ. ಅಮ್ಮ, ಬದುಕು, ಪ್ರೀತಿ ಅಂದ್ರೆ ಅಕ್ಕರೆ` ಎಂದು ಸಕ್ಕರೆಯಂತೆ ಮಾತನಾಡಿ ಸುಮ್ಮನಾಗುತ್ತಾರೆ. </span><br />
<span style="font-family: Tunga, verdana; font-size: 15px; line-height: 22px;"><br /></span><br />
<span style="font-family: Tunga, verdana; font-size: 15px; line-height: 22px;">ಕರಾವಳಿ ತೀರದ ಈ ಹೆಣ್ಣುಮಗಳು ಈಗ ಬೆಂಗಳೂರು ನಿವಾಸಿ ಎನ್ನಲಿಕ್ಕೆ ಅವರ ಬರಹಗಳೇ ಸಾಕ್ಷಿಯಾಗಿವೆ. ಮಲ್ಲೇಶ್ವರದಲ್ಲಿ ಕೊಂಡ ಅವರ ಕೊಡೆಗೀಗ ಮೂರನೇ ಮಳೆಗಾಲವಂತೆ. ಬೆಂಗಳೂರಿನಲ್ಲಿ ಬಿಸಿಲನ್ನೇ ಹೆಚ್ಚು ನೋಡಿರುವ ಅವರ ಕೊಡೆ, ಈಚೆಗೆ ಮಂಗಳೂರಿಗೆ ಹೋಗಿದ್ದಾಗ ಭರ್ಜರಿ ಮಳೆಯಲ್ಲಿ ಒದ್ದೆಯಾಯಿತಂತೆ. </span><br />
<span style="font-family: Tunga, verdana; font-size: 15px; line-height: 22px;"><br /></span><br />
<span style="font-family: Tunga, verdana; font-size: 15px; line-height: 22px;">ಬೆಂಗಳೂರಿನ ಕೊಡೆ ಮಾತ್ರವಲ್ಲ, ಬಾಲ್ಯದ ದಿನಗಳ ಬಗೆಬಗೆ ಕೊಡೆಗಳ ಬಗ್ಗೆಯೂ ಅವರ ನೆನಪಿನ ಲಹರಿ ಹರಿದಿದೆ. ಯಜಮಾನರ ರೇನ್ಕೋಟ್ ಬಗ್ಗೆಯೂ ಚಿತ್ರಾ ಆಪ್ತವಾಗಿ ಬರೆದಿದ್ದಾರೆ. ಆಪ್ತತೆ ಯಾಕೆಂದರೆ, ಅದು ಅಪ್ಪ ಕೊಡಿಸಿದ ರೇನ್ಕೋಟು!</span><br />
<span style="font-family: Tunga, verdana; font-size: 15px; line-height: 22px;"><br /></span><br />
<span style="font-family: Tunga, verdana; font-size: 15px; line-height: 22px;">`ಬೆಳಗು ಇಬ್ಬನಿಯ ನಗು ಚೆಂದ`, `ಜೀವನ ಪ್ರೀತಿಯ ಅನುಭೂತಿ` ಎನ್ನುವುದು `ಧರಿತ್ರಿ` (http://dharithrick.blogspot.in) ಶೀರ್ಷಿಕೆಯ ಅಡಿಬರಹಗಳು. </span><span style="font-family: Tunga, verdana; font-size: 15px; line-height: 22px;">ಇಬ್ಬನಿಯ ನಗು ಮತ್ತು ಜೀವನ ಪ್ರೀತಿ ಎರಡರ ಆರ್ದ್ರತೆಯೂ ಅವರ ಬರಹಗಳಲ್ಲಿದೆ. ಊರಿನ ನೆನಪುಗಳು, ಅಲ್ಲಿನ ಜನ-ಜೀವನ, ಬೆಂಗಳೂರಿನಲ್ಲಿ ಕಂಡ ಚಿತ್ರಗಳು- ಹೀಗೆ ಚಿತ್ರಾ ಕಾಣಿಸುವ `ಭಾವಚಿತ್ರ`ಗಳು ಸಾಕಷ್ಟು. ಅವರ ಬರಹಕ್ಕೆ ಕಥನ ಗುಣವೂ ಇದೆ.</span><br />
<span style="font-family: Tunga, verdana; font-size: 15px; line-height: 22px;"><br /></span><br />
<span style="font-family: Tunga, verdana; font-size: 15px; line-height: 22px;">ಮಗಳ ಮಡಿಲು ತುಂಬಲೆಂದು ದೇವರುಗಳ ಪ್ರಾರ್ಥಿಸುತ್ತಿದ್ದ ಅಪ್ಪನನ್ನು ನೆನಪಿಸಿಕೊಳ್ಳುವ ಈ ಹೆಣ್ಣುಮಗಳು ಬರೆಯುತ್ತಾರೆ: ಮೊನ್ನೆ ನಮ್ಮ ಮದುವೆಗೆ ಎರಡು ವರ್ಷ. ಕಳೆದ ವರ್ಷ ದೇವರ ಮನೆಯಲ್ಲಿ ಅಪ್ಪ-ಅಮ್ಮ ಇಬ್ಬರೂ ನಿಂತು ಅಕ್ಷತೆ ಹಾಕಿ ಹರಸಿದ್ದರು. ಈ ಬಾರಿ ಅಮ್ಮ ಒಬ್ಬಳೇ ಇದ್ದಳು! ವರಾಂಡದಲ್ಲಿದ್ದ ಅಪ್ಪನ ಫೋಟೋಗೆ ಮಲ್ಲಿಗೆ ಹಾರ ಹಾಕಿ ನಮಸ್ಕರಿಸಿದೆ. ನನ್ನ ಕಣ್ಣುಗಳು ಒದ್ದೆಯಾದವು. ಅಪ್ಪ ತುಟಿ ಬಿಚ್ಚಲಿಲ್ಲ, ಮೊಮ್ಮಗು ಎಲ್ಲಿ ಎಂದು ಕೇಳಲಿಲ್ಲ. ಕಪ್ಪಗಿನ ದಪ್ಪ ಕನ್ನಡಕದೊಳಗಿನಿಂದ ನನ್ನ ನೋಡಿದ. ಅಪ್ಪ ಕೋಪಿಸಿಕೊಂಡಿರಬೇಕೆಂದು ನಾನೂ ಮಾತಿಲ್ಲದೆ ಸುಮ್ಮನಾದೆ. ವೇದನೆ ಹಾಗೂ ಪ್ರಾರ್ಥನೆ ಎರಡನ್ನೂ ಕಥೆಯ ಚೌಕಟ್ಟಿನೊಳಗೆ ಒಳಗೊಂಡ ಈ ಬರಹ ಓದುಗರ ಕಣ್ಣನ್ನೂ ಒದ್ದೆಯಾಗಿಸುತ್ತದೆ.</span><br />
<span style="font-family: Tunga, verdana; font-size: 15px; line-height: 22px;"><br /></span><br />
<span style="font-family: Tunga, verdana; font-size: 15px; line-height: 22px;">`ಭೂತಾಯಿಗೆ ಕಾಗೆ ಮುಟ್ಟುವುದು!`- `ಧರಿತ್ರಿ` ಕಣಜದಲ್ಲಿನ ಮತ್ತೊಂದು ಸೊಗಸಾದ ಬರಹ. ಚಿತ್ರಾ ಬರೆಯುತ್ತಾರೆ-</span><br />
<span style="font-family: Tunga, verdana; font-size: 15px; line-height: 22px;">ಇವತ್ತು ಭೂತಾಯಿಗೆ ಕಾಗೆ ಮುಟ್ಟಿದೆ. ನೀವು ಜಾಸ್ತಿ ಜಗ್ಳ ಆಡಬಾರದು. ಜಗ್ಳ ಆಡಿದ್ರೆ ಭೂಮಿತಾಯಿ ಬೇಜಾರುಪಟ್ಕೊಳ್ತಾಳೆ... ಅಮ್ಮ ಬೆಳ್ಳಂಬೆಳಿಗ್ಗೆ ರೊಟ್ಟಿ ತಟ್ಟುತ್ತಾ ಹೇಳುತ್ತಿದ್ದಳು. ಒಲೆ ಮೇಲೆ ಕಲ್ಲಿನ ಕಾವಲಿಯಲ್ಲಿ ರೊಟ್ಟಿ ಬೇಯುತ್ತಿತ್ತು. ಮೊದಲ ರೊಟ್ಟಿ ನನಗೇ ಸಲ್ಲಬೇಕೆನ್ನುವುದು ತಮ್ಮನ ವಾದ. ಇದೇ ಸಿಟ್ಟಲ್ಲಿ ಒಲೆಯೊಳಗಿದ್ದ ಕಟ್ಟಿಗೆಯನ್ನು ಹಿಂದೆ-ಮುಂದೆ ಜಾರಿಸುತ್ತಿದ್ದ. ನನಗೆ ಕೊಡೆಂದು ಅಮ್ಮನ ಸೆರಗು ನಾನು ಹಿಡಿದುಕೊಂಡಿದ್ದೆ. </span><br />
<span style="font-family: Tunga, verdana; font-size: 15px; line-height: 22px;"><br /></span><br />
<span style="font-family: Tunga, verdana; font-size: 15px; line-height: 22px;">ಅಮ್ಮನ ಮಾತು ಒಗಟು. ಅರೆ! ಕಾಗೆ ಮುಟ್ಟುವುದಕ್ಕೂ, ನಾವು ಜಗ್ಳ ಆಡೋದಕ್ಕೂ ಏನು ಸಂಬಂಧ? ಅಮ್ಮನ ಕೇಳಿಯೇ ಬಿಟ್ಟೆ.</span><br />
<span style="font-family: Tunga, verdana; font-size: 15px; line-height: 22px;">`ನೋಡು ಪಕ್ಕದ್ಮನೆ ಲಲಿತಕ್ಕ ಕಾಗೆ ಮುಟ್ಟಿದೆ ಅಂತ ತಿಂಗ್ಳಲ್ಲಿ ಮೂರು ದಿನ ಹೊರಗಡೆ ಕೂರ್ತಾಳೆ. ಆಗ ಅವಳಿಗೆ ಅವ್ಳ ಅಮ್ಮ ಏನೂ ಕೆಲ್ಸ ಕೊಡಲ್ಲ. ಮನೆ ಹಿಂದಿನ ಕೋಣೆಯಲ್ಲಿ ಲಲಿತಕ್ಕ ಸುಮ್ಮನೆ ಮಲಗಿರ್ತಾಳೆ. ಹಂಗೆ, ಭೂಮಿತಾಯಿಗೂ ಕಾಗೆ ಮುಟ್ಟಿದೆ. ಅವಳಿಗೆ ನೋವು ಕೊಡಬಾರದು, ಸಿಟ್ಟು ಮಾಡಿ ಜಗಳ ಮಾಡಿಕೊಂಡ್ರೆ ಅವಳಿಗೆ ಬೇಜಾರಾಗುತ್ತೆ. ನೀವು ಸುಮ್ಮನಿರಬೇಕು` ಎಂದು ಹೇಳುತ್ತಿದ್ದಳು.</span><br />
<span style="font-family: Tunga, verdana; font-size: 15px; line-height: 22px;"><br /></span><br />
<span style="font-family: Tunga, verdana; font-size: 15px; line-height: 22px;">`ಹಾಗಾದ್ರೆ ಲಲಿತಕ್ಕನ ತರ ಭೂತಾಯಿಗೂ ತಿಂಗಳಿಗೊಮ್ಮೆ ಕಾಗೆ ಮುಟ್ಟುತ್ತಾ?` ತಮ್ಮನ ಮಾತು ಅಮ್ಮನನ್ನು ಪೇಚಿಗೆ ಸಿಲುಕಿಸಿತ್ತು. `ಮನುಷ್ಯರು ತಿಂಗಳಿಗೊಮ್ಮೆ, ಭೂತಾಯಿ ವರ್ಷಕ್ಕೊಮ್ಮೆ` ಎಂದಷ್ಟೇ ಹೇಳಿ, ನಮ್ಮಿಬ್ಬರಿಗೆ ಬೈದು ಸುಮ್ಮನಾಗಿಸುತ್ತಿದ್ದಳು. ಅಮ್ಮನ ಮಾತು ನಂಬಿದ ನಾವಿಬ್ಬರೂ ಜಗಳವಾಡದೆ ಸುಮ್ಮನಿರುತ್ತಿದ್ದೆವು. </span><br />
<span style="font-family: Tunga, verdana; font-size: 15px; line-height: 22px;">ವರ್ಷದಲ್ಲಿ ಒಂದು ಸಲ ಭೂತಾಯಿಗೆ ಕಾಗೆ ಮುಟ್ಟುತ್ತಿತ್ತು. ಅಮ್ಮ ತುಳಸಿ ಗಿಡದ ಪಕ್ಕದಲ್ಲಿ ಮಸಿಯಿಂದ ಚೌಕ ತರ ಮಾಡಿ, ಅಲ್ಲಿ ಸೀಗೆಕಾಯಿ, ಮಸಿ ತುಂಡು ಇಡುತ್ತಿದ್ದಳು. ನಾಲ್ಕನೇ ದಿನಕ್ಕೆ ಅದೇ ಜಾಗದಲ್ಲಿ ಸೆಗಣಿ ಸಾರಿ, ಬಾಳೆಲೆ ಹಾಕುತ್ತಿದ್ದಳು. ಬಳಿಕ ಅದರ ಮೇಲೆ ಎಣ್ಣೆ, ಅರಿಶಿನ, ಕುಂಕುಮ, ಬಳೆ, ಹೂವುಗಳನ್ನು ಇಟ್ಟು ಭೂಮಿಗೆ ಎಣ್ಣೆ ಬಿಡುತ್ತಿದ್ದಳು. `ಭೂಮಿತಾಯಿ ಸ್ನಾನ ಮಾಡಿಕೊಂಡು ಬಂದಿರ್ತಾಳೆ` ಎನ್ನುವ ಅಮ್ಮ, ಒಂದು ಎಲೆಯಲ್ಲಿ ರೊಟ್ಟಿ, ಸಾರು ಹಾಕಿಡುತ್ತಿದ್ದಳು. </span><br />
<span style="font-family: Tunga, verdana; font-size: 15px; line-height: 22px;">ಭೂತಾಯಿ ತಿಂದ ಮೇಲೆ ನಾವು ಅಂಗಳದಲ್ಲೇ ಕುಳಿತು ತಿನ್ನುತ್ತಿದ್ದೆವು. </span><span style="font-family: Tunga, verdana; font-size: 15px; line-height: 22px;">ತುಳುವಿನಲ್ಲಿ ಪುಯಿಂತೆಲ್ (ಮಕರ ಮಾಸ) ತಿಂಗಳಿನ ಕೊನೆಯ, ಅಂದ್ರೆ 27, 28, 29ನೇ ದಿನ ಕೆಡ್ಡಸ ಎಂದು ಆಚರಿಸುತ್ತಾರೆ. ಆ ಮೂರು ದಿನವೂ ಭೂಮಿತಾಯಿಗೆ ನೋವಾಗುವ ಯಾವುದೇ ಕೆಲಸಗಳನ್ನು ಅಮ್ಮ ಮಾಡುತ್ತಿರಲಿಲ್ಲ, ತೋಟದ ಕೆಲಸಗಳಿಗೆ ರಜೆ, ಹೊಲ ಗದ್ದೆಗಳಲ್ಲೂ ಹಾರೆ-ಗುದ್ದಲಿಗಳ ಸದ್ದಿಲ್ಲ. ಸಾಮಾನ್ಯವಾಗಿ ಜನವರಿ-ಫೆಬ್ರುವರಿ ತಿಂಗಳಲ್ಲಿ ಈ ಹಬ್ಬ ಬರುತ್ತದೆ. ಇಂದು ಅಮ್ಮನೂ ಕೆಡ್ಡಸ ಮರೆತುಬಿಡ್ತಾರೆ.</span><br />
<span style="font-family: Tunga, verdana; font-size: 15px; line-height: 22px;"><br /></span><br />
<span style="font-family: Tunga, verdana; font-size: 15px; line-height: 22px;">ಇದು ಚಿತ್ರವತ್ತಾದ ಬರಹ ಅಲ್ಲವೇ?</span><br />
<span style="font-family: Tunga, verdana; font-size: 15px; line-height: 22px;"><br /></span><br />
<span style="font-family: Tunga, verdana; font-size: 15px; line-height: 22px;"><b>"ಪ್ರಜಾವಾಣಿಗೆ ಥ್ಯಾಂಕ್ಸ್ "</b></span><br />
<span style="font-family: Tunga, verdana; font-size: 15px; line-height: 22px;"><br /></span><br />
<a href="http://prajavani.net/include/story.php?news=8495&section=56&menuid=13">http://prajavani.net/include/story.php?news=8495&section=56&menuid=13</a>
</div>
</div>ಧರಿತ್ರಿhttp://www.blogger.com/profile/13431094762447988960noreply@blogger.com7tag:blogger.com,1999:blog-3759631957739186729.post-32230010341208071502012-04-30T19:51:00.002-07:002012-04-30T19:53:30.102-07:00ನನ್ನ ಕೊಡೆಗೆ ಮೂರನೇ ಮಳೆಗಾಲ<div dir="ltr" style="text-align: left;" trbidi="on">
ನನ್ನ ಕೊಡೆಗೆ ಮೂರನೇ ಮಳೆಗಾಲ. ಬೆಂಗಳೂರಿನ ಬಿಸಿಲಿಗೆ ಬಾಡಿ ಬಸಳೆಯಂತೆ ಬಾಗುವ ಕೊಡೆ ಮಂಗಳೂರ ಮಳೆಗೆ ಖುಷಿ-ಖುಷಿಯಿಂದ ಕೆಂದಾವರೆಯಾಗಿದೆ. ಮೆರೂನ್ ಬಣ್ಣದ ಕೊಡೆ ನನ್ನದು. ೨೦೦೯ರ ಫೆಬ್ರುವರಿ ಕೊನೆಯ ವಾರ ಮಲ್ಲೇಶ್ವರಂನ ೮ನೇ ಕ್ರಾಸ್ನಲ್ಲಿ ಚೌಕಾಸಿ ಮಾಡಿ ತೆಕೊಂಡಿದ್ದೆ. ಮುನ್ನೂರು ಹೇಳಿದವ ಕೊನೆಗೆ ನೂರರ ಎರಡು, ಐವತ್ತರ ಒಂದು ನೋಟು ಕೊಟ್ಟಾಗ ಸುಮ್ಮನಾಗಿದ್ದ. ವಿಶೇಷ ಅಂದ್ರೆ ಅದು ನನ್ನ ಮದ್ವೆಗೆ ತೆಕೊಂಡ ಕೊಡೆ. ಎರಡು ಮಳೆಗಾಲದಲ್ಲಿ ಈ ಕೊಡೆ ನನಗೆ ಆಸರೆ ನೀಡಿದೆ.<br />
<div class="separator" style="clear: both; text-align: center;">
<a href="http://1.bp.blogspot.com/-4rKSbz7J3hU/T59Pl5G1L3I/AAAAAAAAAK8/cha-sYR1_5E/s1600/umbrella_-_plain_maroon_1.jpg" imageanchor="1" style="margin-left: 1em; margin-right: 1em;"><img border="0" height="200" src="http://1.bp.blogspot.com/-4rKSbz7J3hU/T59Pl5G1L3I/AAAAAAAAAK8/cha-sYR1_5E/s200/umbrella_-_plain_maroon_1.jpg" width="200" /></a></div>
ಮೊನ್ನೆ ಮೊನ್ನೆ ಏಪ್ರಿಲ್ ೨೬. ಮಂಗಳೂರಿಗೆ ಹೋಗಿದ್ದೆ. ಬೆಳ್ಳಂಬೆಳಿಗ್ಗೆಯೇ ಮಳೆಶುರುವಾಗಿತ್ತು. ಕದ್ರಿ ದೇವಾಲಯದ ಹತ್ತಿರದ ಸಣ್ಣ ಬೆಟ್ಟ ಹತ್ತುವಾಗಲೇ ಜೋರು ಮಳೆ ಬರಬೇಕೇ? ನನ್ನ ಮೆರೂನ್ ಕೊಡೆ ಬ್ಯಾಗಿನಿಂದ ಹೊರತೆಗೆದೆ. ಬೆಂಗಳೂರಿನಲ್ಲಿ ಮಳೆಗಾಲಕ್ಕಿಂತ ಬರೀ ಬಿಸಿಲನ್ನೇ ನೋಡಿದ ನನ್ನ ಕೊಡೆ ಖುಷಿಯಿಂದ ಬಿಡಿಸಿಕೊಂಡಿತ್ತು. ಧಾರಾಕಾರ ಮಳೆ. ನಾನು-ನನ್ನವರು ಇಬ್ಬರಿಗೂ ಕೊಡೆಯ ಆಸರೆ. ಹೊಟೇಲ್ ರೂಮ್ನಲ್ಲಿ ಫ್ಯಾನ್ ಗಾಳಿಗೆ ಒಣಗಿಸಿ ಮತ್ತೆ ಮಡಚಿಟ್ಟಿದೆ. ಬೆಂಗಳೂರಿನಲ್ಲಿ ಎರಡು ಮೂರು ದಿನಗಳಿಂದ ಬರೀ ಮೋಡ. ಪುಟ್ಟ ಬ್ಯಾಗ್ನೊಳಗೆ ಬೆಚ್ಚಗೆ ಮಲಗಿರುವ ನನ್ನ ಕೊಡೆಗೆ ಮತ್ತೆ ಮತ್ತೆ ಜೋರುಮಳೆಗೆ ಮೈಯೊಡ್ಡುವ ತವಕ<br />
<br />
*****<br />
<b><br /></b><br />
<b>ನಮ್ಮವ್ರ ರೈನ್ ಕೋಟ್!</b><br />
ಅಪ್ಪ ತಂದು ಕೊಟ್ಟ ರೈನ್ಕೋಟ್ಗೆ ಇದು ಎರಡನೇ ಮಳೆಗಾಲ. ಆಗೋಮ್ಮೆ-ಈಗೊಮ್ಮೆ ಬೀಳುವ ಬೆಂಗಳೂರ ಮಳೆಗೆ ಈ ಕೋಟ್ ಇನ್ನೂ ಪೂರ್ತಿ ಒದ್ದೆಯಾಗಿಲ್ಲ. ಈ ವರ್ಷವಾದರೂ ಮಳೆಯಲ್ಲಿ ನೆನೆಯುವ ಅದೃಷ್ಟ ರೈನ್ಕೋಟ್ಗೆ ಸಿಗಬಹುದೇನೋ ಎನ್ನುತ್ತಾರೆ ನಮ್ಮೆಜಮಾಜನ್ರು. ಬೆಳ್ಳಂಬೆಳಿಗ್ಗೆ ಆಕಾಶ ತುಂಬಾ ಕಪ್ಪುಮೋಡ ಮುಸುಕಿದ್ದನ್ನು ನೋಡಿ ಕೂಡಿಟ್ಟ ರೈನ್ಕೋಟ್ ಅನ್ನು ಕೊಟ್ಟು ಕಳಿಸಿದ್ದೀನಿ. ಆದರೆ, ದಿನ ಮೂರಾದರೂ ರೈನ್ಕೋಟ್ ಒದ್ದೆಯಾಗಿಲ್ಲ.<br />
<br />
**-*-*-*-*-*-*-*-*-*<br />
<br />
<b>ಉದ್ದ ಕಾಲಿನ ದೊಡ್ಡ ಕೊಡೆ</b><br />
ಸ್ಕೂಲ್ಗೆ ಹೋಗುತ್ತಿದ್ದಾಗ ಕೊಡೆಗೆ ಮನೆಯಲ್ಲಿ ಕುರುಕ್ಷೇತ್ರವೇ ನಡೆಯುತ್ತಿತ್ತು. ನನ್ನ ಬಣ್ಣದ ಕೊಡೆ ಬೇಕೆಂದು ತಮ್ಮನ ಹಠ. ಬಣ್ಣದ ಕೊಡೆ ಹುಡುಗಿಯರಿಗೆ ಮಾತ್ರ ಎಂಬ ನನ್ನ ತಿಳುವಳಿಕೆಯ ವಾದ.ಕೊನೆಗೆ ತಮ್ಮನದೇ ಕೈ ಮೇಲು. ನಾನು ಅವನ ಉದ್ದ ಕಾಲಿನ ದೊಡ್ಡ ಕೊಡೆ ಹಿಡಿದು ಹೊರಟರೆ, ತಮ್ಮ ಬಣ್ಣದ ಕೊಡೆ ಹಿಡಿದು ನಗುತ್ತಿದ್ದ. ಬಸ್ನಲ್ಲಿ ಹೋಗುವಾಗ ದೊಡ್ಡ ಕೊಡೆ ನೋಡಿ ಕಂಡಕ್ಟರ್ ಕಿರಿ. ಊರುಗೋಲು ತರ ಹಿಡಿದುಕೊಂಡು ರಶ್ನಲ್ಲಿ ಬಸ್ ಹತ್ತಿದರೆ ಸಿಕ್ಕ ಸಿಕ್ಕವರಿಗೆಲ್ಲ ಕೊಡೆ ತಾಗುತ್ತಿತ್ತು. ಎಲ್ಲರದೂ ಬೈಗುಳವೇ. ಅದಕ್ಕೆ ಒಂದು ದಿನ ದೊಡ್ಡ ಕೊಡೆಯ ಕಡ್ಡಿ ಮುರಿದು ಅಮ್ಮಂಗೆ ಸುಳ್ಳು ಹೇಳಿದ್ದೆ. ಕೊಡೆಯ ಕಡ್ಡಿ ಮುರಿದಿದೆ. ನನಗೆ ಸ್ವಿಚ್ ಕೊಡೆ ಬೇಕೆಂದು! ಸ್ವಿಚ್ ಕೊಡೆ ಅಂದ್ರೆ ಮಾಮೂಲಿ ಸ್ವಿಚ್ ಒತ್ತಿದರೆ<br />
ಬಿಡಿಸಿಕೊಳ್ಳುವ ಕೊಡೆ. ಅಮ್ಮ ಅದನ್ನೂ ತಂದುಕೊಟ್ಟಿದ್ದಳು. ಇನ್ನೊಂದ್ಸಲ ಅಮ್ಮ ತಾವರೆ ಕೊಡೆ ತಂದಿದ್ದಳು.ತಾವರೆ ಕೊಡೆಯ ಕಡ್ಡಿಗಳು ತಾವರೆ ಆಕಾರಗಳವು. ಮಳೆಗಾಲದಲ್ಲಿ ಮೂರು ಮೈಲಿ ನಡೆದು, ಹೊಲ -ಗದ್ದೆ ದಾಟಿದ್ದು, ತುಂಬಿದ ಹೊಳೆಯಲ್ಲಿ ಭಯಪಡುತ್ತಲೇ ದಡ ಸೇರಿದ್ದು., ಭಾರೀ ಗಾಳಿಗೆ ಕೊಡೆ ಕೈಕೊಟ್ಟಾಗ ಗೆಳೆಯ-ಗೆಳತಿಯರ ಜೊತೆ ಒಂದೇ ಕೊಡೆಯೊಳಗೆ ಹೆಜ್ಜೆ ಹಾಕಿದ್ದು...ಅಬ್ಬಾ! ಮಳೆಗಾಲದ ಕೊಡೆ ನೆನಪು ಅದ್ಭುತ.<br />
<br /></div>ಧರಿತ್ರಿhttp://www.blogger.com/profile/13431094762447988960noreply@blogger.com2tag:blogger.com,1999:blog-3759631957739186729.post-36248760753715708332012-04-24T00:41:00.000-07:002012-04-24T00:43:18.013-07:00ಭೂತಾಯಿಗೆ ಕಾಗೆ ಮುಟ್ಟುವುದು!<div><span >ಇವತ್ತು ಭೂತಾಯಿಗೆ ಕಾಗೆ ಮುಟ್ಟಿದೆ. ನೀವು ಜಾಸ್ತಿ ಜಗ್ಳ ಆಡಬಾರದು. ಜಗ್ಳ ಆಡಿದ್ರೆ ಭೂಮಿತಾಯಿ ಬೇಜಾರುಪಡ್ಕೊಳ್ತಾಳೆ...ಅಮ್ಮ ಬೆಳ್ಳಂಬೆಳಿಗ್ಗೆ ರೊಟ್ಟಿ ತಟ್ಟುತ್ತಾ ಹೇಳುತ್ತಿದ್ದಳು. ಒಲೆ ಮೇಲೆ ಕಲ್ಲಿನ ಕಾವಲಿಯಲ್ಲಿ ರೊಟ್ಟಿ ಬೇಯಿತ್ತಿತ್ತು. ಮೊದಲ ರೊಟ್ಟಿ ನನಗೇ ಸಲ್ಲಬೇಕೆನ್ನುವುದು ತಮ್ಮನ ವಾದ. ಇದೇ ಸಿಟ್ಟಲ್ಲಿ ಒಲೆಯೊಳಗಿದ್ದ ಕಟ್ಟಿಗೆಯನ್ನು ಹಿಂದೆ-ಮುಂದೆ ಜಾರಿಸುತ್ತಿದ್ದ. ನನಗೆ ಕೊಡೆಂದು ಅಮ್ಮನ ಸೆರಗು ನಾನು ಹಿಡಿದುಕೊಂಡಿದ್ದೆ. </span></div><div><span ><br /></span></div><div><span >ಅಮ್ಮನ ಮಾತು ಒಗಟು. ಅರೆ! ಕಾಗೆ ಮುಟ್ಟುವುದಕ್ಕೂ, ನಾವು ಜಗ್ಳ ಆಡೋದಕ್ಕೂ ಏನು ಸಂಬಂಧ? ಅಮ್ಮನ ಕೇಳಿಯೇ ಬಿಟ್ಬಿ.</span></div><div><span ><br /></span></div><div><span >ನೋಡು ಪಕ್ಕದ್ಮನೆ ಲಲಿತಕ್ಕ ಕಾಗೆ ಮುಟ್ಟಿದೆ ಅಂತ ತಿಂಗ್ಳಲ್ಲಿ ಮೂರು ದಿನ ಹೊರಗಡೆ ಕೂರ್ತಾಳೆ. ಆಗ ಅವಳಿಗೆ ಅವ್ಳ ಅಮ್ಮ ಏನೂ ಕೆಲ್ಸ ಕೊಡಲ್ಲ. ಮನೆ ಹಿಂದಿನ ಕೋಣೆಯಲ್ಲಿ ಲಲಿತಕ್ಕ ಸುಮ್ಮನೆ ಮಲಗಿರ್ತಾಳೆ. ಹಂಗೆ, ಭೂಮಿತಾಯಿಗೂ ಕಾಗೆ ಮುಟ್ಟಿದೆ. ಅವಳಿಗೆ ನೋವು ಕೊಡಬಾರದು, ಸಿಟ್ಟು ಮಾಡಿ ಜಗಳ ಮಾಡಿಕೊಂಡ್ರೆ ಅವಳಿಗೆ ಬೇಜಾರಾಗುತ್ತೆ. ನೀವು ಸುಮ್ಮನಿರಬೇಕು ಎಂದು ಹೇಳುತ್ತಿದ್ದಳು.</span></div><div><span ><br /></span></div><div><span >‘ಹಾಗಾದ್ರೆ ಲಲಿತಕ್ಕನ ತರ ಭೂತಾಯಿಗೂ ತಿಂಗಳಿಗೊಮ್ಮೆ ಕಾಗೆ ಮುಟ್ಟುತ್ತಾ?’ ತಮ್ಮನ ಮಾತು ಅಮ್ಮನನ್ನು ಪೇಚಿಗೆ ಸಿಲುಕಿಸಿತ್ತು. ‘ಮನುಷ್ಯರು ತಿಂಗಳಿಗೊಮ್ಮೆ, ಭೂತಾಯಿ </span><span style="font-family: Georgia, serif; ">ವರ್ಷಕ್ಕೊಮ್ಮೆ’ ಎಂದು ಅಷ್ಟೇ ಹೇಳಿ, ನಮ್ಮಿಬ್ಬರಿಗೆ ಬೈದು ಸುಮ್ಮನಾಗಿಸುತ್ತಿದ್ದಳು. ಅಮ್ಮನ ಮಾತು ನಂಬಿದ ನಾವಿಬ್ಬರೂ ಜಗಳವಾಡದೆ ಸುಮ್ಮನಿರುತ್ತಿದ್ದೇವು. </span></div><div><span ><br /></span></div><div><span ><br /></span></div><div><span >ವರ್ಷದಲ್ಲಿ ಒಂದು ಸಲ ಭೂತಾಯಿಗೆ ಕಾಗೆ ಮುಟ್ಟುತ್ತಿತ್ತು. ಅಮ್ಮ ತುಳಸಿ ಗಿಡದ ಪಕ್ಕದಲ್ಲಿ ಮಸಿಯಿಂದ ಚೌಕ ತರ ಮಾಡಿ, ಅಲ್ಲಿ ಸೀಗೆಕಾಯಿ, ಮಸಿ ತುಂಡು ಇಡುತ್ತಿದ್ದಳು. ನಾಲ್ಕನೇ ದಿನಕ್ಕೆ ಅದೇ ಜಾಗದಲ್ಲಿ ಸೆಗಣಿ ಸಾರಿ, ಬಾಳೆಲೆ ಹಾಕುತ್ತಿದ್ದಳು. ಬಳಿಕ ಅದರ ಮೇಲೆ ಎಣ್ಣೆ, ಅರಿಶಿನ, ಕುಂಕುಮ, ಬಳೆ, ಹೂವುಗಳನ್ನು ಇಟ್ಟು ಭೂಮಿಗೆ ಎಣ್ಣೆ ಬಿಡುತ್ತಿದ್ದಳು. ‘ಭೂಮಿತಾಯಿಯನ್ನು ಸ್ನಾನ ಮಾಡಿಕೊಂಡು ಬಂದಿರ್ತಾಳೆ’ ಎನ್ನುವ ಅಮ್ಮ, ಒಂದು ಎಲೆಯಲ್ಲಿ ರೊಟ್ಟಿ, ಸಾರು ಹಾಕಿಡುತ್ತಿದ್ದಳು. ಭೂತಾಯಿ ತಿಂದ ಮೇಲೆ ನಾವು ಅಂಗಳದಲ್ಲೇ ಕುಳಿತು ತಿನ್ನುತ್ತಿದ್ದೆವು. </span></div><div><span ><br /></span></div><div><span >ತುಳುವಿನಲ್ಲಿ ಪುಯಿಂತೆಲ್(ಮಕರ ಮಾಸ) ತಿಂಗಳಿನ ಕೊನೆಯ ಅಂದ್ರೆ ೨೭, ೨೮, ೨೯ನೇ ದಿನ ಕೆಡ್ಡಸ ಎಂದು ಆಚರಿಸುತ್ತಾರೆ. ಭೂಮಿ ಹೊರಗಾಗಿದ್ದಾಳೆ </span><span style="font-family: Georgia, serif; ">ಎಂದು ಹೇಳುತ್ತಿದ್ದರು. ಆ ಮೂರು ದಿನವೂ ಭೂಮಿತಾಯಿಗೆ ನೋವಾಗುವ ಯಾವುದೇ ಕೆಲಸಗಳನ್ನು ಅಮ್ಮ ಮಾಡುತ್ತಿರಲಿಲ್ಲ, ತೋಟದ ಕೆಲಸಗಳಿಗೆ ರಜೆ, ಹೊಲ ಗದ್ದೆಗಳಲ್ಲೂ ಹಾರೆ-ಗುದ್ದಲಿಗಳ ಸದ್ದಿಲ್ಲ. ಸಾಮಾನ್ಯವಾಗಿ ಜನವರಿ-ಫೆಬ್ರುವರಿ ತಿಂಗಳಲ್ಲಿ ಈ ಹಬ್ಬ ಬರುತ್ತದೆ. ಇಂದು ಅಮ್ಮನೂ ಕೆಡ್ಡಸ ಮರೆತುಬಿಡ್ತಾರೆ!</span></div><div style="font-family: Georgia, serif; font-size: 100%; font-style: normal; font-variant: normal; font-weight: normal; line-height: normal; "><br /></div>ಧರಿತ್ರಿhttp://www.blogger.com/profile/13431094762447988960noreply@blogger.com4tag:blogger.com,1999:blog-3759631957739186729.post-70171668522628068232012-04-17T03:42:00.002-07:002012-04-17T03:43:56.641-07:00ಆ ಕೆಂಪು ದೀಪದ ಸಿಗ್ನಲ್ನಲ್ಲಿ<a href="http://4.bp.blogspot.com/--u55BaksBI4/T41JOwd5TZI/AAAAAAAAAKs/UbXdFOQLvv4/s1600/2.jpg" style="font-family: Georgia, serif; font-size: 100%; font-style: normal; font-variant: normal; font-weight: normal; line-height: normal; "><img style="display:block; margin:0px auto 10px; text-align:center;cursor:pointer; cursor:hand;width: 220px; height: 293px;" src="http://4.bp.blogspot.com/--u55BaksBI4/T41JOwd5TZI/AAAAAAAAAKs/UbXdFOQLvv4/s320/2.jpg" border="0" alt="" id="BLOGGER_PHOTO_ID_5732318418589797778" /></a><div><span >ಅಲ್ಲಿ ಕೆಂಪು ಲೈಟ್ ಬಿತ್ತು. ಡ್ರೈವರ್ ಬ್ರೇಕ್ ಹಾಕಿದ. ಬಸ್ ನಿಂತಿತು. ಬಸ್ನಲ್ಲಿದ್ದವರೆಲ್ಲಾ ಉಸ್ಸಾಪ್ಪಾ ಎಂದು ನಿಟ್ಟುಸಿರು ಬಿಟ್ಟರು. ಡ್ರೈವರ್ ಮುಖ ಗಂಟಿಕ್ಕಿತು. ಬಸ್ನೊಳಗೆ ಉಸಿರುಗಟ್ಟಿಸುವ ವಾತಾವರಣ. ಸೀಟಿನಲ್ಲಿ ಕುಳಿತವರು, ಸೀಟಿಲ್ಲದೆ ನಿಂತವರು ಎಲ್ಲರ ಮುಖದಲ್ಲಿ ದಣಿವಿನ ದನಿ. </span></div><div><span ><br /></span></div><div><span >ಹೊರಗಿನ ಗಾಳಿ ಬೇಕನಿಸಿತು. ಕೊಂಚ ಮುಖ ಹೊರಹಾಕಿದೆ. ಪಕ್ಕದಲ್ಲಿದ್ದ ಕಾಂಪೌಂಡಿನಲ್ಲಿ ಮೈಸೂರ್ ಪ್ಯಾಲೇಸ್ ಚಿತ್ರ. ಸುಂದರವಾಗಿ ಬಿಡಿಸಿದ ಕಲಾವಿದನಿಗೊಂದು ಮನಸ್ಸಲ್ಲೇ ಶಹಭಾಷ್ ಹೇಳಿದೆ. ನೋಡು ನೋಡುತ್ತಿದ್ದಂತೆ ನಲವತ್ತು ದಾಟಿದ ಗಂಡಸೊಬ್ಬ ಬಂದು ಅದೇ ಕಾಂಪೌಂಡ್ ಮೇಲೆ ಉಚ್ಚೆ ಹೊಯ್ದ! ಇದೇ ಕಲೆಗೆ ಬಿಬಿಎಂಪಿ ಕೋಟಿ-ಕೋಟಿ ಖರ್ಚು ಮಾಡಿದೆ. ವ್ಯವಸ್ಥೆಯ ಕಾಳಜಿಯ ಹೊರುವವರಾರು? ಪ್ರಶ್ನೆಗಿನ್ನೂಉತ್ತರ ಸಿಕ್ಕಿಲ್ಲ.</span></div><div><span ><br /></span></div><div><span >ಯೋಚನೆಗಳು ತಲೆಕೊರೆಯುತ್ತಿರುವಾಗಲೇ ಮುಖದೆದುರೇ ಟಪ್! ಚಪ್ಪಾಳೆ ಬಿತ್ತು. ಕಂಡಕ್ಟರ್ ಕೊಟ್ಟ ಎರಡು ರೂಪಾಯಿ ಪಾವಳಿಯನ್ನು ಮಂಗಳಮುಖಿಯ ಕೈಗೆ ಹಾಕಿ ನಿಟ್ಟುಸಿರು ಬಿಟ್ಟೆ. ಅಲ್ಲೇ ಇದ್ದ ಹೆಲ್ಮೆಟ್ ಹಾಕಿದ ಚೆಂದದ ಹುಡುಗನ ಬೆನ್ನಿಗೊಂದು ಗುದ್ದಿ ಕೈಯೊಡ್ಡಿದಳು. ಪುಡಿಗಾಸು ಹಾಕಿದ. ಕೆನ್ನೆಗೊಂದು ಮುತ್ತಿಟ್ಟು ಮುಂದೆ ಸಾಗಿದಳು.</span></div><div><span >ದಪ್ಪ ಕನ್ನಡ ಇಟ್ಟಿದ್ದ ನುಡವಯಸ್ಕನೊಬ್ಬ ಚಿಲ್ರೆಗಾಗಿ ಎಸಿ ಕಾರಿನ ಬಾಗಿಲು ತಟ್ಟಿದರೆ, ಆತ ಬಾಗಿಲೇ ತೆಗೆಯದೆ ನಕ್ಕು ಸುಮ್ಮನಾದ. ಪಕ್ಕದಲ್ಲೇ ನಿಂತಿದ್ದ ಬೈಕ್ನಲ್ಲಿ ಕುಳಿತ ಯುವಕನೊಬ್ಬ ತನ್ನ ಹಿಂದೆ ಕುಳಿತ ಯುವತಿಯ ಕೈ ಅದುಮಿದ. ಅವಳು ನಾಚಿ ನಗೆಮಲ್ಲಿಗೆ ಚೆಲ್ಲಿದಳು. ಮುಂದೆ ನೋಡಿದೆ, ಬಿರುಬಿಸಿಲಿನಲ್ಲಿ ಟ್ರಾಫಿಕ್ ಪೊಲೀಸ್ ಸೋತುಹೋಗಿದ್ದ.</span></div><div><span >ಕಣ್ಣ ರೆಪ್ಪೆ ಮೇಲಿಂದ ದಣಿವಿನ ಬೆವರು ಇಳಿಯುತ್ತಿತ್ತು!</span></div><div><span ><br /></span></div><div><span >ಮತ್ತೆ ಹಸಿರು ಲೈಟ್. ಬಸ್ ಮುಂದೆ ಸಾಗಿತು. ಬಸ್ನಲ್ಲಿ ಸೀಟಿಲ್ಲದೆ ನಿಂತವರು, ಕಚೇರಿಗೆ ಹೊರಟ ಏಳು ತುಂಬಿದ ಯುವತಿ, ಆಫೀಸ್ಗೆ ಲೇಟಾಯ್ತು ಬಾಸ್ ಕೈಯಲ್ಲಿ ಬೈಸಿಕೊಳ್ಳಬೇಕೆಂದು ಕುಳಿತಲ್ಲೇ ಚಡಪಡಿಸುವ ಕೆಲವರು, ಮೊದಲ ಕ್ಲಾಸ್ ಮಿಸ್ ಆಯ್ತು, ಮ್ಯಾಥ್ಸ್ ಮೇಷ್ಟ್ರ ಬೈಗುಳಕ್ಕೆ ರೆಡಿಯಾಗೋಣ ಎಂದು ಪೋಲಿ ಜೋಕು ಬಿಡುವ ಕಾಲೇಜು ಹುಡುಗ್ರು..ಎಲ್ಲರಿಗೂ ಬದುಕಿನ ಅನಿವಾರ್ಯತೆ!</span></div><div><span ><br /></span></div><div><span >ಮತ್ತದೇ, ಕೆಂಪು ಲೈಟ್. ಡ್ರೈವರ್ ಗಂಟಿಕ್ಕಿದ ಮುಖದೊಂದಿಗೆ ಬಸ್ ನಿಲ್ಲಿಸಿದ. ಕಂಡಕ್ಟರ್ ಬೆಂಗ್ಳೂರಿಗೆ ಹಿಡಿಶಾಪ ಹಾಕ್ದ. ಪಕ್ಕದಲ್ಲಿ ನಿಂತಿದ್ದ ಬಸ್ನಿಂದ ಅಜ್ಜಿಯೊಬ್ಬಳು ಕತ್ತು ಉದ್ದ ಮಾಡಿ ಉಫ್ ಎಂದು ವೀಳ್ಯದೆಲೆ ಜಗಿದು ಉಗಿದಳು. ಬೈಕ್ನಲ್ಲಿದ್ದ ಹೆಲ್ಮೆಟ್ಧಾರಿ ಹುಡುಗ ತಲೆ ಮೇಲೆ ಬಿತ್ತು. ತೆಳುಮೀಸೆಯ ಆ ಹುಡುಗ ಅಜ್ಜಿಗೆ ಹಿಡಿಶಾಪ ಹಾಕಿ ತಾನೇ ಸೋತ! ಅಷ್ಟೊತ್ತಿಗೆ ಲೇಡಿಸ್ ಸೀಟಿನಲ್ಲಿ ಕುಳಿತು ದರ್ಬಾರ್ ತೋರಿಸಿದ್ದ ಪುರುಷನಿಗೊಬ್ಬನಿಗೆ ಮಂಗಳಾರತಿ ಆಗುತ್ತಿತು. ೧೪ ಸಿಗ್ನಲ್ಗಳನ್ನು ದಾಟಿ ಆಫೀಸ್ಗೆ ತಲುಪುವಷ್ಟರಲ್ಲಿ ಬದುಕಿನ ವಿವಿಧ ಮುಖಗಳಿಗೆ ನಾನು ಸಾಕ್ಷಿಯಾಗಿದ್ದೆ.</span></div><div style="font-family: Georgia, serif; font-size: 100%; font-style: normal; font-variant: normal; font-weight: normal; line-height: normal; "><br /></div>ಧರಿತ್ರಿhttp://www.blogger.com/profile/13431094762447988960noreply@blogger.com2tag:blogger.com,1999:blog-3759631957739186729.post-28626914956298449512012-03-31T01:06:00.002-07:002012-03-31T01:51:33.396-07:00ದಿ ಗ್ರೇಟ್ ಡಿಕ್ಟೇಟರ್ ಸ್ಪೀಚ್ ...<span><b>೧೯೪೦ರಲ್ಲಿ ಬಂದ ಚಾರ್ಲಿ ಚಾಪ್ಲಿನ್ ಅಭಿನಯದ ದಿ ಗ್ರೇಟ್ ಡಿಕ್ಟೇಟರ್ ಚಿತ್ರದಲ್ಲಿ, ಜೇವಿಶ್ ಬಾರ್ಬರ್ ಆಗಿ ನಟಿಸಿದ ಚಾಪ್ಲೀನ್ ಸ್ಪೀಚ್ ತುಣುಕು. ಎಪ್ಪತ್ತು ವರ್ಷಗಳ ಹಿಂದೆ ಆ ಸಿನಿಮಾದಲ್ಲಿ ಬಂದ ಮಾತುಗಳು ಇಂದಿಗೂ ಪ್ರಸ್ತುತ ಅನಿಸುತ್ತವೆ. ಈ ಚಾರ್ಲಿ ಬಾಯಲ್ಲಿ ಈ ಸ್ಪೀಚ್ ಕೇಳಿ ಖುಷಿಗೊಂಡು ಅನುವಾದಿಸಿದೆ. </b></span><div><span><br /></span></div><div><span><div><i>ನಾನು ಚಕ್ರವರ್ತಿಯಾಗೋಕೆ ಬಯಸುತ್ತಿಲ್ಲ. ಅದು ನನ್ನ ಬ್ಯುಸಿನೆಸ್ ಅಲ್ಲ. ನಾನು ಯಾರನ್ನೂ ಆಳಬೇಕಾಗಿಲ್ಲ, ಯಾರ ರಾಜ್ಯವನ್ನೂ ಆಕ್ರಮಿಸಿಕೊಳ್ಳಬೇಕಾಗಿಲ್ಲ. ಸಾಧ್ಯವಾದರೆ, ಎಲ್ಲರಿಗೂ ಸಹಾಯಮಾಡಬೇಕೆಂದಿದ್ದೀನಿ. ಜ್ಯೂಯಿಷರು, ಕರಿಯರು, ಬಿಳಿಯರು...ಹೀಗೆ ಜಗತ್ತಿನಲಿರುವ ಎಲ್ಲರಿಗೂ ನಾನು ಸಹಾಯ ಮಾಡ್ಬೇಕು. </i></div><div><i><br /></i></div><div><i>ಮನುಷ್ಯ ಇರೋದೇ ಹಾಗೇ, ಪರಸ್ಪರ ಸಂತೋಷದಿಂದ ಕೂಡಿ ಬದುಕಬೇಕು, ಆದರೆ, ಯಾರೋಬ್ಬರೂ ಇನ್ನೊಬ್ಬರ ದುಃಖದಲ್ಲಿ ಬದುಕಬಾರದು. ಇನ್ನೊಬ್ಬರನ್ನು ತಿರಸ್ಕರಿಸಿ ಅಥವಾ ದ್ವೇಷಿಸಿ ಬದುಕುವ ಹಕ್ಕು ಯಾರಿಗೂ ಇಲ್ಲ. ಈ ಜಗತ್ತಿನಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಈ ಫಲವತ್ತಾದ ಸುಂದರ ಭೂಮಿ ಎಲ್ಲರಿಗೂ ಜಾಗ ಕೊಟ್ಟಿದೆ.</i></div><div><i><br /></i></div><div><i>ಬದುಕಿನ ದಾರಿ ಸ್ವಚ್ಛಂದ ಹಾಗೂ ಸುಂದರ. ಆದರೆ, ಆ ಚೆಂದದ ದಾರಿಯನ್ನು ಕಳೆದುಕೊಂಡುಬಿಟ್ಟಿದ್ದೀವಿ. ಮನುಷ್ಯನ ಆತ್ಮದಲ್ಲಿ ದುರಾಸೆಯ ವಿಷ ತುಂಬಿದೆ. ಪರಸ್ಪರ ದ್ವೇಷದ ಬ್ಯಾರಿಕೇಡ್ ನಿರ್ಮಾಣವಾಗಿದೆ. ಪರಿಣಾಮವಾಗಿ ದುಃಖ ಹಾಗೂ ನೆತ್ತರನೆಲದಲ್ಲಿ ಬದುಕು ಬಸವಳಿದಿದೆ. </i></div><div><i><br /></i></div><div><i>ನಾವು ವೇಗವನ್ನು ಕಲಿತಿದ್ದೇವೆ, ಆದರೆ, ನಮ್ಮ ಹೃದಯದ ಬಾಗಿಲು ಮುಚ್ಚಿಕೊಂಡಿದೆ. ಯಂತ್ರಗಳು ಬೇಕಾದನ್ನು ಕೊಡುತ್ತವೆ. ಇನ್ನು ಬೇಕು ಬೇಕು ಎನ್ನುವ ಆಸೆಯನ್ನು ಮನುಷ್ಯನಲ್ಲಿ ಹುಟ್ಟಿಹಾಕಿವೆ. ನಮ್ಮ ಜ್ಞಾನ ಸಿನಿಕತನದ ಕಡೆಗೆ ಸಾಗಿದೆ. ನಮ್ಮ ಯೋಚನೆ ದೊಡ್ಡದು, ಆದರೆ ಹೃದಯ ವೈಶಾಲ್ಯತೆ ಕಿರಿದು. ನೆನಪಿಡಿ, ಯಂತ್ರಗಳಿಗಿಂತ ಮಾನವೀಯತೆ ಮುಖ್ಯ,ಚಾಣಾಕ್ಷತೆಗಿಂತ ದಯೆ ಹಾಗೂ ಮೃದುತ್ವ ಮುಖ್ಯ. ಇದರಿಂದ ಹೊರತಾದ ನಮ್ಮ ಸುಂದರ ಬದುಕು </i></div><div><i>ಹಿಂಸೆಯ ಮಡುವಾಗುತ್ತದೆ.</i></div><div><i><br /></i></div><div><i><br /></i></div><div><i>ನನ್ನ ಹೃದಯದ ಧ್ವನಿ ಈಗ ಮಿಲಿಯನ್ಗಟ್ಟಲೆ ಜನರಿಗೆ ಕೇಳಿಸುತ್ತಿರಬಹುದು. ಕುಗ್ಗಿಹೋಗಿರುವ ಮಹಿಳೆಯರು,ಗಂಡಸೆರು, ಮಕ್ಕಳು, ವ್ಯವಸ್ಥೆಯ ಬಲಿಪಶುಗಳು ಎಲ್ಲರೂ ಕಿವಿಯಾಗುತ್ತಿರಬಹುದು. ಅವರು ನನ್ನ ಮಾತುಗಳನ್ನು ಕೇಳುತ್ತಿದ್ದರೆ ಅವರಿಗೆ ನಾನು ಹೇಳೋದಿಷ್ಟೇ: ದುಃಖಕ್ಕೆ ಕುಗ್ಗದಿರಿ, ಅಂತಿಮವಾಗಿ ಸರ್ವಾಧಿಕಾರ ಸಾಯುತ್ತೆ, ಅಧಿಕಾರ ಜನರ ಕೈಗೆ ಬರುತ್ತೆ,</i></div><div><i>ಎಲ್ಲಿಯವರೆಗೆ ಮನುಷ್ಯ ಸಾಯುತ್ತಾ ಇರುತ್ತಾನೋ ಅಲ್ಲಿಯವರೆಗೆ ಸ್ವಾತಂತ್ರ್ಯಕನಸಾಗಿರುತ್ತದೆ. </i></div><div><i><span><br /></span></i></div><div><i><span>ದೇಶಕಾಯುವ ಯೋಧರೇ, </span></i></div><div><i>ಕ್ರೂರಿಗಳಿಗೆ ನಿಮ್ಮನ್ನು ಬಲಿ ಕೊಡಬೇಡಿ, ನಿಮ್ಮನ್ನು ಕಡೆಗಣಿಸುವವರು, ನಿಮ್ಮನ್ನು ಜೀತಕ್ಕೆ ಇಟ್ಟುಕೊಂಡಿದ್ದವರು, ನೀವು ಹೀಗೆ ಇರಬೇಕೆಂದು ಜೀವನ ಪರಿಕ್ರಮಗಳನ್ನು ಸೂಚಿಸುವವರು, ನಿಮ್ಮ, ಯೋಚನೆಗಳನ್ನು ಕಸಿದುಕೊಂಡವರು, ನಿಮ್ಮನ್ನು ಜೀವಂತವಾಗಿ ಭಕ್ಷಿಸುವವರು, ನಿಮ್ಮನ್ನು ದನಕರುಗಳಂತೆ ಕಾಣೋರು, ಫಿರಂಗಿ ಒಳಗಿನ ಗುಂಡಿನ ಮೇವಾಗಿ ಬಳಸುವಂಥ ಅಸ್ವಾಭಾವಿಕ, ಯಂತ್ರದಂಥ ಮನಸ್ಸು-ಹೃದಯವುಳ್ಳವರಿಗೆ ನಿಮ್ಮ ಬಲಿಕೊಡಬೇಡಿ. ನೀವು ಯಂತ್ರಗಳಲ್ಲ, ನೀವು ದನಗಳಲ್ಲ, ನೀವು ಮನುಷ್ಯರು. ನಿಮ್ಮ ಹೃದಯದಲ್ಲಿ ಮಾನವೀಯತೆಯನ್ನು ಪ್ರೀತಿಸುವವರು ನೀವು. ಗುಲಾಮತನಕ್ಕಾಗಿ ಹೋರಾಡಬೇಡಿ, ಬದಲಾಗಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ.</i></div><div><i><br /></i></div><div><i><br /></i></div><div><i>ಸಂತ ಲೂಕ್ನ ಏಳನೇ ಅಧ್ಯಯದಲ್ಲಿ ಹೀಗೆನ್ನುತ್ತಾರೆ: ದೇವರ ಸಾಮ್ರಾಜ್ಯ ಮನುಷ್ಯನ ಹೃದಯದಲ್ಲೇ ಇದೆ. ಕೇವಲ ಒಬ್ಬನ ಅಂತರಂಗದಲ್ಲಿ ಅಲ್ಲ, ಈ ಮನುಕುಲದಲ್ಲಿ. ನಿಮ್ಮಲ್ಲಿ, ಜಗತ್ತಿನ ಮಿಲಿಯನ್ ಗಟ್ಟಲೆ ಜನರ ಹೃದಯದಲ್ಲಿ. ನೀವು ಮನುಷ್ಯರು, ಯಂತ್ರಗಳನ್ನು ಸೃಷ್ಟಿಸುವ ಅಧಿಕಾರ ನಿಮ್ಮಲ್ಲಿದೆ, ಅಂತೆಯೇ ಸಂತೋಷವನ್ನು ಸೃಷ್ಟಿಸುವ ಸಾಮರ್ಥ್ಯವೂ ನಿಮ್ಮಲ್ಲೇ ಇದೆ.</i></div><div><i><br /></i></div><div><i>ಜೀವನವನ್ನು ಸುಂದರ ಹಾಗೂ ಸ್ವತಂತ್ರಗೊಳಿಸುವ, ಜೀವನವನ್ನು ಅತ್ಯಾದ್ಭುತ ಸಾಹಸವನ್ನಾಗಿ ಪರಿವರ್ತಿಸುವ ಸಾಮರ್ಥ್ಯವೂ ನಿಮಗೇ ಇದೆ. ಪ್ರಜಾಪ್ರಭುತ್ವ ಹೆಸರಿನಲ್ಲಿ ಈ ಒಂದು ಮಹೋನ್ನತ ಅವಕಾಶವನ್ನು ಬಳಸಿಕೊಳ್ಳಿ. ನಾವೆಲ್ಲ ಒಗ್ಗೂಡೋಣ. ಶಾಂತಿಯುತ ಹಾಗೂ ಪ್ರಾಮಾಣಿಕ ಜಗತ್ತಿಗಾಗಿ ಹೋರಾಡೋಣ. ಆಗ ಮನುಕುಲದ ಅಭ್ಯುದಯಕ್ಕೆ ಕೆಲಸ ಮಾಡಲು ಸಾಧ್ಯವಾಗುತ್ತೆ. ಯುವಕರಿಗೆ ಭವಿಷ್ಯ ಕಟ್ಟುವ, ವೃದ್ಧರಿಗೆ ಭದ್ರತೆ ಇರುವ, ವಿಜ್ಞಾನ ಹಾಗೂ ಪ್ರಗತಿಯ ಮೂಲಕ ಮನುಷ್ಯನಿಗೆ ಸಂತೋಷ ನೀಡುವ ಚೆಂದದ ಜಗತ್ತು ನಿರ್ಮಾಣವಾಗುತ್ತೆ. </i></div><div><br /></div><div><br /></div><div>Click below link for Great Dictator speech by Chaplin</div><div><div><a href="http://www.youtube.com/watch?v=BJL4NKXSq4I&feature=fvst">http://www.youtube.com/watch?v=BJL4NKXSq4I&feature=fvst</a> </div></div></span></div>ಧರಿತ್ರಿhttp://www.blogger.com/profile/13431094762447988960noreply@blogger.com3